ಆ್ಯಪ್ನಗರ

ಬಜೆಟ್‌ನಲ್ಲಿ ರಾಜ್ಯದ ಜನರಿಗೆ ಯಾವುದೇ ಕೊಡುಗೆಯಿಲ್ಲ, ದಿನೇಶ್ ಗುಂಡೂರಾವ್

ಬಜೆಟ್‌ನಲ್ಲಿ ರಾಜ್ಯಕ್ಕೆ ಯಾವುದೇ ರೀತಿಯ ಕೊಡುಗೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ. ಬಿಜೆಪಿಯ ಮೂರ್ಖತನದಿಂದಾಗಿ ಬಜೆಟ್‌ನಲ್ಲಿ ಕೆಲವೊಂದು ಗೊಂದಲಗಳಾಗಿವೆ ಎಂದರು.

Vijaya Karnataka Web 5 Mar 2020, 5:48 pm
ಬೆಂಗಳೂರು: ಬಜೆಟ್‌ನಲ್ಲಿ ರಾಜ್ಯಕ್ಕೆ ಯಾವುದೇ ರೀತಿಯ ಕೊಡುಗೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ. ಬಜೆಟ್‌ನಲ್ಲಿ ಸ್ಪಷ್ಟ ದೃಷ್ಠಿಕೋನವಿಲ್ಲ ಎಂದ ಅವರು, ಗೊಂದಲದ ವಾತಾವರಣದಲ್ಲಿ ಅಯವ್ಯಯ ಮಂಡನೆಯಾಗಿದೆ ಎಂದು ಆರೋಪಿಸಿದರು.
Vijaya Karnataka Web dinesh gundu rao


ಬಿಜೆಪಿಯ ಮೂರ್ಖತನದ ತೀರ್ಮಾನದಿಂದಾಗಿ ಬಜೆಟ್‌ನಲ್ಲಿ ಹಲವು ಗೊಂದಲಗಳಾಗಿವೆ. ಇದನ್ನ ಗಮನಿಸಿದಾಗ ತಪ್ಪು ಆರ್ಥಿಕ ನೀತಿಗಳು ಅರ್ಥವಾಗುತ್ತಿವೆ. ರಾಜ್ಯದ ಅಭಿವೃದ್ಧಿಗೂ ಸಾಕಷ್ಟು ಹಿನ್ನಡೆಯಾಗಿದೆ ಹಾಗೂ
ಸಂಪನ್ಮೂಲ ಕ್ರೋಡೀಕರಣಕ್ಕೂ ಹೊಡೆತ ಬಿದ್ದಿದೆ. ಸ್ವತಃ ಸಿಎಂ ಅವರೇ ಆರ್ಥಿಕ ಕೊರತೆ ಒಪ್ಪಿಕೊಂಡಿದ್ದಾರೆ ಎಂದರು.


ಬಿಎಸ್‌ವೈ ಬಜೆಟ್‌ನಲ್ಲಿ ವನ್ಯ ಜೀವಿ, ಪ್ರಾಣಿ, ಪಕ್ಷಿ, ಜಲಚರಗಳಿಗೂ ಇದೆ ಪಾಲು..!

ಕೇಂದ್ರದಿಂದ ತೆರಿಗೆಯಿಂದ ಬರಬೇಕಾದ ಹಣ ಖೋತಾ ಆಗಿದೆ, ಜಿಎಸ್ ಟಿ ಸೆಸ್ ಕಲೆಕ್ಷನ್ ನೀಡಬೇಕು. ಒಟ್ಟು 11,887 ಕೋಟಿ ಕೇಂದ್ರದ ಹಣ ಬಂದಿಲ್ಲ, ಇದರಿಂದ ಬಜೆಟ್ ಮೇಲೂ ಪರಿಣಾಮ ಬಿದ್ದಿದೆ ಎಂದರು.

ರಾಜ್ಯ ಬಜೆಟ್ ಸತ್ವ ಇಲ್ಲದ ನೀರಸ ಬಜೆಟ್ - ಎಂಬಿ ಪಾಟೀಲ್‌

ಬಜೆಟ್‌ನಲ್ಲಿ ಹಳೆಯ ಯೋಜನೆಗಳನ್ನು ಬಿಟ್ಟರೆ ಹೊಸ ಯೋಜನೆಗಳಿಲ್ಲ ಎಂದು ಮಾಜಿ ಸಚಿವ ಎಂಬಿ ಪಾಟೀಲ್‌ ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಪ್ರಶ್ನೆ ಮಾಡುವ ತಾಕತ್ತು ಯಾರಿಗೂ ಇಲ್ಲ. ಹಣವೇ ಇಲ್ಲ ಎಂದ ಮೇಲೆ ಬಜೆಟ್ ನಲ್ಲಿನ ಯೋಜನೆಗಳನ್ನು ಹೇಗೆ ಪೂರೈಸುತ್ತಾರೆ. ರೈತರಿಗೆ ಈ ಬಜೆಟ್ ನಲ್ಲಿ ಅನ್ಯಾಯ ಮಾಡಲಾಗಿದೆ.

ಬಜೆಟ್‌ನಲ್ಲಿ ಡಿಜಿಟಲ್‌ಗೆ ಒತ್ತು, ಬೆಂಗಳೂರಲ್ಲಿ 'ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ ಪಾರ್ಕ್‌' ಘೋಷಣೆ


ಕೇಂದ್ರದಿಂದ ರಾಜ್ಯಕ್ಕೆ ಕಾನೂನು ಪ್ರಕಾರ ಸಿಗಬೇಕಾದ ಹಣ ಇನ್ನೂ ಸಿಕ್ಕಿಲ್ಲ. ಇದರ ವಿರುದ್ಧ ಪ್ರಶ್ನೆಮಾಡುವ ತಾಕತ್ತು ರಾಜ್ಯದ ಯಾವ ಬಿಜೆಪಿ ನಾಯಕರಿಗೂ ಇಲ್ಲ. 25 ಬಿಜೆಪಿ ಸಂಸದರು ಇದ್ದೂ ಏನೂ ಪ್ರಯೋಜನವಾಗಿಲ್ಲ. ಪ್ರಶ್ನೆ ಮಾಡಿದರೆ ತಮ್ಮ ಖುರ್ಚಿಗೆ ಆಪತ್ತು ಬರುತ್ತೋ ಎಂಬ ಭಯದಲ್ಲೇ ಬದುಕುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ