ಲಕ್ಷ್ಮಿ ವಿಲಾಸ್ ಬ್ಯಾಂಕ್ ಷೇರುಗಳು 48% ಕುಸಿತ: ಬ್ಯಾಂಕ್ ಬಗ್ಗೆ ವಿಶ್ವಾಸವಿದ್ದರೆ ಷೇರು ಖರೀದಿಗೆ ಸಕಾಲ..!
ಬ್ಯಾಂಕ್ನ ವಿಲೀನ ಪ್ರಕ್ರಿಯೆ ಅಂತಿಮಗೊಂಡ ಬಳಿಕ, ನಷ್ಟ ಭರ್ತಿಯಾಗಿ ಷೇರುಗಳ ಮೌಲ್ಯ ಸಹಜವಾಗಿ ಏರಿಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಹೀಗಾಗಿ, ಬ್ಯಾಂಕ್ ಬಗ್ಗೆ ವಿಶ್ವಾಸ ಉಳ್ಳವರಿಗೆ ಷೇರು ಖರೀದಿಸಲು ಇದು ಸಕಾಲವಾಗಿದೆ.
Vijaya Karnataka Web 24 Nov 2020, 9:21 am
ಹೈಲೈಟ್ಸ್:
- ಕಳೆದ 5 ದಿನಗಳಿಂದ ನಿರಂತರ ಕುಸಿತ
- ಬಿಎಸ್ಇ ವಹಿವಾಟಿನಲ್ಲಿ ಶೇ. 10ರಷ್ಟು ಕುಸಿತ
- ಪ್ರತಿ ಷೇರಿನ ಮೌಲ್ಯ ರೂ. 8.10ಕ್ಕೆ ಇಳಿಕೆ
ಹೊಸ ದಿಲ್ಲಿ: ಲಕ್ಷ್ಮಿ ವಿಲಾಸ್ ಬ್ಯಾಂಕಿನ ಷೇರುಗಳು ಕಳೆದ 5 ದಿನಗಳಲ್ಲಿ ಶೇ. 48% ಕುಸಿದಿವೆ. ಬ್ಯಾಂಕಿಗೆ ಸಂಬಂಧಿಸಿದ ನಕಾರಾತ್ಮಕ ಸುದ್ದಿಗಳ ಹಿನ್ನೆಲೆಯಲ್ಲಿ ಹೂಡಿಕೆದಾರರು ಆತಂಕದಲ್ಲಿದ್ದಾರೆ. ಸೋಮವಾರದ ಬಿಎಸ್ಇ ವಹಿವಾಟಿನಲ್ಲಿ ಬ್ಯಾಂಕಿನ ಷೇರುಗಳು 10% ಕುಸಿದಿದ್ದು, ಪ್ರತಿ ಷೇರಿನ ಮೌಲ್ಯ ರೂ. 8.10ಕ್ಕೆ ಇಳಿಕೆಯಾಗಿದೆ.
ವಿದೇಶಿ ಸಂಸ್ಥೆ ಜೊತೆ ಲಕ್ಷ್ಮಿ ವಿಲಾಸ್ ಬ್ಯಾಂಕ್ ವಿಲೀನಕ್ಕೆ ಹೂಡಿಕೆದಾರರ ವಿರೋಧ
ತೀವ್ರ ಸಂಕಷ್ಟದಲ್ಲಿರುವ ಬ್ಯಾಂಕನ್ನು ಮತ್ತೊಂದು ಬ್ಯಾಂಕಿನೊಂದಿಗೆ ವಿಲೀನ ಮಾಡುವ ಕರಡನ್ನು ಆರ್ಬಿಐ ಪ್ರಕಟಿಸಿದ್ದು, ಇದಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬ್ಯಾಂಕ್ನ ವ್ಯವಹಾರಗಳನ್ನು ಕೇಂದ್ರ ಸರಕಾರವು ಒಂದು ತಿಂಗಳ ತನಕ ಅಮಾನತ್ತಿನಲ್ಲಿಟ್ಟಿದ್ದು, ಠೇವಣಿದಾರರಿಗೆ 25,000 ರೂ.ಗಳ ವಿತ್ಡ್ರಾ ಮಿತಿಯನ್ನು ವಿಧಿಸಲಾಗಿದೆ. ಈ ಬೆಳವಣಿಗೆಗಳು ಬ್ಯಾಂಕ್ನ ಹೂಡಿಕೆದಾರರ ಕಳವಳವನ್ನು ಹೆಚ್ಚಿಸಿವೆ.
ಠೇವಣಿದಾರರಿಗೆ ಹಣ ನೀಡಲು ಲಕ್ಷ್ಮಿ ವಿಲಾಸ್ ಬ್ಯಾಂಕ್ ಬಳಿ ಹಣ ಇದೆ: ಆಡಳಿತಾಧಿಕಾರಿ ಮನೋಹರನ್ ಸ್ಪಷ್ಟನೆ
ಆದಾಗ್ಯೂ 'ಬ್ಯಾಂಕ್ಗಳ ವಿಲೀನ ಪ್ರಕ್ರಿಯೆ ಬಳಿಕ, ಷೇರುಗಳು ನಷ್ಟ ಭರಿಸಿಕೊಂಡು ಸಹಜವಾಗಿ ಏರಿಕೆಯಾಗುವ ಸಾಧ್ಯತೆಗಳಿವೆ' ಎನ್ನುವುದು ಮಾರುಕಟ್ಟೆ ವಿಶ್ಲೇಷಕರ ಅಭಿಪ್ರಾಯ. ಬ್ಯಾಂಕ್ ಬಗೆಗೆ ವಿಶ್ವಾಸ ಉಳ್ಳವರಿಗೆ ಷೇರು ಖರೀದಿಸಲು ಇದು ಸಕಾಲ ಎಂದೂ ವಿಶ್ಲೇಷಿಸಲಾಗಿದೆ.
ಲಕ್ಷ್ಮೀ ವಿಲಾಸ್ ಬ್ಯಾಂಕ್ ಉಳಿಸಲು ಡಿಬಿಎಸ್ ಬ್ಯಾಂಕ್ ನೆರವು: ಆರ್ಬಿಐ ಘೋಷಣೆ!
ವಿದೇಶಿ ಸಂಸ್ಥೆ ಜೊತೆ ಲಕ್ಷ್ಮಿ ವಿಲಾಸ್ ಬ್ಯಾಂಕ್ ವಿಲೀನಕ್ಕೆ ಹೂಡಿಕೆದಾರರ ವಿರೋಧ
ತೀವ್ರ ಸಂಕಷ್ಟದಲ್ಲಿರುವ ಬ್ಯಾಂಕನ್ನು ಮತ್ತೊಂದು ಬ್ಯಾಂಕಿನೊಂದಿಗೆ ವಿಲೀನ ಮಾಡುವ ಕರಡನ್ನು ಆರ್ಬಿಐ ಪ್ರಕಟಿಸಿದ್ದು, ಇದಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬ್ಯಾಂಕ್ನ ವ್ಯವಹಾರಗಳನ್ನು ಕೇಂದ್ರ ಸರಕಾರವು ಒಂದು ತಿಂಗಳ ತನಕ ಅಮಾನತ್ತಿನಲ್ಲಿಟ್ಟಿದ್ದು, ಠೇವಣಿದಾರರಿಗೆ 25,000 ರೂ.ಗಳ ವಿತ್ಡ್ರಾ ಮಿತಿಯನ್ನು ವಿಧಿಸಲಾಗಿದೆ. ಈ ಬೆಳವಣಿಗೆಗಳು ಬ್ಯಾಂಕ್ನ ಹೂಡಿಕೆದಾರರ ಕಳವಳವನ್ನು ಹೆಚ್ಚಿಸಿವೆ.
ಠೇವಣಿದಾರರಿಗೆ ಹಣ ನೀಡಲು ಲಕ್ಷ್ಮಿ ವಿಲಾಸ್ ಬ್ಯಾಂಕ್ ಬಳಿ ಹಣ ಇದೆ: ಆಡಳಿತಾಧಿಕಾರಿ ಮನೋಹರನ್ ಸ್ಪಷ್ಟನೆ
ಆದಾಗ್ಯೂ 'ಬ್ಯಾಂಕ್ಗಳ ವಿಲೀನ ಪ್ರಕ್ರಿಯೆ ಬಳಿಕ, ಷೇರುಗಳು ನಷ್ಟ ಭರಿಸಿಕೊಂಡು ಸಹಜವಾಗಿ ಏರಿಕೆಯಾಗುವ ಸಾಧ್ಯತೆಗಳಿವೆ' ಎನ್ನುವುದು ಮಾರುಕಟ್ಟೆ ವಿಶ್ಲೇಷಕರ ಅಭಿಪ್ರಾಯ. ಬ್ಯಾಂಕ್ ಬಗೆಗೆ ವಿಶ್ವಾಸ ಉಳ್ಳವರಿಗೆ ಷೇರು ಖರೀದಿಸಲು ಇದು ಸಕಾಲ ಎಂದೂ ವಿಶ್ಲೇಷಿಸಲಾಗಿದೆ.
ಲಕ್ಷ್ಮೀ ವಿಲಾಸ್ ಬ್ಯಾಂಕ್ ಉಳಿಸಲು ಡಿಬಿಎಸ್ ಬ್ಯಾಂಕ್ ನೆರವು: ಆರ್ಬಿಐ ಘೋಷಣೆ!