ಆ್ಯಪ್ನಗರ

ಮೊರಟೋರಿಯಂ ಬಡ್ಡಿ ಮನ್ನಾ ಆಗುತ್ತಾ? ನ.5ಕ್ಕೆ ಸುಪ್ರೀಂ ವಿಚಾರಣೆ

ಸಾಲಗಳ ಮೊರಟೋರಿಯಂ ವಿಸ್ತರಣೆ ಮತ್ತು ಮೊರಟೋರಿಯಂ ಅವಧಿಯಲ್ಲಿನ ಬಡ್ಡಿ ಮನ್ನಾಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನ.5ಕ್ಕೆ ಮುಂದೂಡಿದೆ. ಆರು ತಿಂಗಳ ಮೊರಟೋರಿಯಂ ಅವಧಿಯ ಬಡ್ಡಿ ಮನ್ನಾ ಆಗಬಹುದೆಂಬ ನಿರೀಕ್ಷೆ ಗ್ರಾಹಕರಲ್ಲಿದೆ.

Vijaya Karnataka Web 4 Nov 2020, 10:18 am
ಹೊಸದಿಲ್ಲಿ: ಸಾಲಗಳ ಮೊರಟೋರಿಯಂ ವಿಸ್ತರಣೆ ಮತ್ತು ಮೊರಟೋರಿಯಂ ಅವಧಿಯಲ್ಲಿನ ಬಡ್ಡಿ ಮನ್ನಾಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನ.5ಕ್ಕೆ ಮುಂದೂಡಿದೆ.
Vijaya Karnataka Web loan moratorium


ಆರು ತಿಂಗಳ ಮೊರಟೋರಿಯಂ ಅವಧಿಯ ಬಡ್ಡಿ ಮನ್ನಾ ಆಗಬಹುದಾ ಎನ್ನುವ ಕುತೂಹಲ, ನಿರೀಕ್ಷೆ ಸಾಲ ಪಡೆದಿರುವ ಗ್ರಾಹಕರಲ್ಲಿದೆ. ಪ್ರಕರಣ ಸಂಬಂಧಿ ವಿಚಾರಣೆಯು ಮಂಗಳವಾರ ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ನೇತೃತ್ವದ ತ್ರಿ ಸದಸ್ಯ ಪೀಠದ ಮುಂದೆ ಬಂತು. ಆದರೆ, ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರ ಮನವಿ ಮೇರೆಗೆ ನ.5ಕ್ಕೆ ಮುಂದೂಡಲಾಯಿತು.

ಕೇಳಿದ್ದು ಬಡ್ಡಿಯನ್ನು, ಚಕ್ರಬಡ್ಡಿಯನ್ನಲ್ಲ!
ಕೋವಿಡ್‌-19 ಬಿಕ್ಕಟ್ಟಿನಿಂದ ಆರ್ಥಿಕತೆಗೆ ಹೊಡೆತ ಬಿದ್ದಿದ್ದು, ಲಾಕ್‌ಡೌನ್‌ಗಳಿಂದ ಬಿಸಿನೆಸ್‌ಗಳು ನೆಲಕಚ್ಚಿವೆ. ಹೀಗಾಗಿ ಮೊರಟೋರಿಯಂ ಅವಧಿಯಲ್ಲಿನ ಬಡ್ಡಿ ಮನ್ನಾ ಮಾಡಬೇಕು. ಲಾಕ್‌ಡೌನ್‌ ಏರಿದ ಸರಕಾರವೇ ಮೊರಟೋರಿಯಂ ಅವಧಿಯಲ್ಲಿನ ಬಡ್ಡಿ ಮನ್ನಾ ಮಾಡಿ, ಗ್ರಾಹಕರಿಗೆ ನೆರವು ನೀಡಬೇಕು ಎಂದು ಗಜೇಂದ್ರ ಶರ್ಮಾ ಸೇರಿದಂತೆ ಕೆಲವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಕಡಿತವಾಗಿದ್ದ ವೇತನ ಹಬ್ಬದ ವೇಳೆ ವಾಪಸ್‌

ಕೋರ್ಟ್‌ ಸಹ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಮೊರಟೋರಿಯಂ ಅವಧಿಯಲ್ಲಿ ಗ್ರಾಹಕರಿಗೆ ಹೊರೆಯಾಗದಂತೆ ಕ್ರಮ ಜರುಗಿಸುವಂತೆ ಕೇಂದ್ರಕ್ಕೆ ಸೂಚನೆ ನೀಡಿತ್ತು. ''ಆರ್‌ಬಿಐ ಹೇಳಿದ್ದನ್ನೇ ಇಲ್ಲಿ ಒಪ್ಪಿಸಬೇಡಿ. ಏನಾದರೂ ನೆರವಿನ ಯೋಜನೆ ಮಾಡಿ,'' ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು. ''ದೇಶದ ಜಿಡಿಪಿ ಪಾತಾಳಕ್ಕೆ ಕುಸಿದಿದ್ದು, ಇನ್ನಷ್ಟು ನೆರವು ಸಾಧ್ಯವೇ ಇಲ್ಲ,'' ಎಂದಿದ್ದ ಕೇಂದ್ರ ಸರಕಾರ, ಮೊರಟೋರಿಯಂ ಅವಧಿಯ ಚಕ್ರ ಬಡ್ಡಿ ಮನ್ನಾ ಮಾಡಲು ಬಳಿಕ ಒಪ್ಪಿತ್ತು.

ನಗದು ಠೇವಣಿ, ಹಿಂತೆಗೆತಕ್ಕೆ ಶುಲ್ಕ - ಸುತ್ತೋಲೆ ವಾಪಸ್‌ ಪಡೆದ ಬ್ಯಾಂಕ್‌ ಆಫ್‌ ಬರೋಡ

ಚಕ್ರ ಬಡ್ಡಿ ಮನ್ನಾದಿಂದ ಪ್ರಯೋಜನವಿಲ್ಲ
30 ಲಕ್ಷ ರೂ. ಸಾಲ ಪಡೆದಿರುವ ಗ್ರಾಹಕರಿಗೆ ಚಕ್ರಬಡ್ಡಿ ಮನ್ನಾದಿಂದಾಗಿ 1,700 ರೂಪಾಯಿ ಉಳಿಯಬಹುದು ಎನ್ನುವುದು ಒಂದು ಲೆಕ್ಕಾಚಾರ. ಅಂದರೇ, ಚಕ್ರಬಡ್ಡಿ ಮನ್ನಾದಿಂದ ಗ್ರಾಹಕರಿಗೆ ದೊಡ್ಡ ಅನುಕೂಲವಾಗುವುದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ