ಆ್ಯಪ್ನಗರ

ಸಣ್ಣ ಉದ್ದಿಮೆಗೆ 1.63 ಲಕ್ಷ ಕೋಟಿ ರೂ. ಕೋವಿಡ್‌ ಸಾಲ ವಿತರಣೆ; ಮತ್ತೊಂದು ಪ್ಯಾಕೇಜ್‌ ಘೋಷಣೆ ಸಾಧ್ಯತೆ

ಕಳೆದ ಏಪ್ರಿಲ್‌ 1ರಿಂದ ಸೆಪ್ಟೆಂಬರ್‌ 8ರ ತನಕ 27.55 ಲಕ್ಷ ತೆರಿಗೆದಾರರಿಗೆ 1.01 ಲಕ್ಷ ಕೋಟಿ ರೂ. ತೆರಿಗೆ ರಿಫಂಡ್‌ ಆಗಿದೆ. 25 ಲಕ್ಷ ಪ್ರಕರಣಗಳಲ್ಲಿ30,768 ಕೋಟಿ ರೂ. ಆದಾಯ ತೆರಿಗೆ ರಿಫಂಡ್‌ ಮಾಡಲಾಗಿದೆ. 1.71 ಲಕ್ಷ ಕಾರ್ಪೊರೇಟ್‌ ತೆರಿಗೆ ಪ್ರಕರಣಗಳಲ್ಲಿ70,540 ಕೋಟಿ ರೂ. ತೆರಿಗೆ ರಿಫಂಡ್‌ ಆಗಿದೆ

Vijaya Karnataka Web 14 Sep 2020, 11:06 am
ಹೊಸದಿಲ್ಲಿ: ಕೋವಿಡ್‌ ಬಿಕ್ಕಟ್ಟಿನಿಂದ ಸಂಕಷ್ಟದಲ್ಲಿರುವ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ 3 ಲಕ್ಷ ಕೋಟಿ ತುರ್ತು ಸಾಲದ ನೆರವಿನ ಯೋಜನೆಯಡಿಯಲ್ಲಿ ಇದುವರೆಗೆ ಒಟ್ಟು 1.63 ಲಕ್ಷ ಕೋಟಿ ರೂ.ಗಳ ಸಾಲವನ್ನು ವಿತರಿಸಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
Vijaya Karnataka Web ಸಾಲ
ಸಾಲ


ಒಟ್ಟು 42 ಲಕ್ಷ ಉದ್ದಿಮೆಗಳಿಗೆ ಎಮರ್ಜೆನ್ಸಿ ಕ್ರೆಡಿಟ್‌ ಲೈನ್‌ ಗ್ಯಾರಂಟಿ ಸ್ಕೀಮ್‌ ( ಇ ಸಿ ಎಲ್‌ಜಿಎಸ್‌) ಬ್ಯಾಂಕ್‌ಗಳಿಂದ ಸಾಲ ಮಂಜೂರಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಹಣಕಾಸು ಸಚಿವಾಲಯವು ನಬಾರ್ಡ್‌ಗೆ ಹೆಚ್ಚುವರಿ 30,000 ಕೋಟಿ ರೂ. ತುರ್ತು ನೆರವನ್ನು ಮಂಜೂರು ಮಾಡಿದ್ದು, ರೈತರಿಗೆ ಈಗಾಗಲೇ 25,000 ಕೋಟಿ ರೂ.ಗಳನ್ನು ವಿತರಿಸಲಾಗಿದೆ. ಉಳಿದಿರುವ 5,000 ಕೋಟಿ ರೂ.ಗಳನ್ನು ಎನ್‌ಬಿಎಫ್‌ಸಿ ಮತ್ತು ಎನ್‌ಬಿಎಫ್‌ಸಿ-ಎಂಎಫ್‌ಐಗಳಿಗೆ (ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಮತ್ತು ಕಿರು ಹಣಕಾಸು ಸಂಸ್ಥೆಗಳು) ಮಂಜೂರು ಮಾಡಲಾಗುವುದು ಎಂದು ತಿಳಿಸಿದೆ. ನಬಾರ್ಡ್‌ ಈ ಬಗ್ಗೆ ಶೀಘ್ರದಲ್ಲಿಯೇ ಮಾರ್ಗದರ್ಶಿಯನ್ನು ಪ್ರಕಟಿಸಲಿದೆ.

ಸಾರ್ವಜನಿಕ ವಲಯದ 23 ಬ್ಯಾಂಕ್‌ಗಳು ಮತ್ತು ಖಾಸಗಿ ಬ್ಯಾಂಕ್‌ಗಳು ಸೆಪ್ಟೆಂಬರ್‌ 10ರ ವೇಳೆಗೆ 1.63 ಲಕ್ಷ ಕೋಟಿ ರೂ. ಸಾಲವನ್ನು 42 ಲಕ್ಷ ಸಾಲಗಾರರಿಗೆ ವಿತರಿಸಿವೆ.

ಕೋವಿಡ್‌ ಬಿಕ್ಕಟ್ಟು ಎದುರಿಸುತ್ತಿರುವ ಸಣ್ಣ ಉದ್ದಿಮೆಗೆ ನೀಡುವ ಸಾಲಕ್ಕೆ ನ್ಯಶನಲ್‌ ಕ್ರೆಡಿಟ್‌ ಗ್ಯಾರಂಟಿ ಟ್ರಸ್ಟಿ ಕಂಪನಿ ( ಎನ್‌ಸಿಜಿಟಿಸಿ) ಶೇ.100ರಷ್ಟು ಖಾತರಿ ನೀಡುತ್ತದೆ. ಸಣ್ಣ ಉದ್ದಿಮೆಗೆ ಕಡಿಮೆ ಬಡ್ಡಿ ದರದಲ್ಲಿಸುಲಭ ಸಾಲ ನೀಡುವುದು ಇದರ ಉದ್ದೇಶ. 2020ರ ಅಕ್ಟೋಬರ್‌ 31ರ ತನಕ ಈ ಸಾಲ ಸೌಲಭ್ಯವು ಸಿಗಲಿದೆ.

ಸಾಲ ಯೋಜನೆ ವಿಸ್ತರಣೆ ಸಂಭವ

ಸಣ್ಣ ಉದ್ದಿಮೆಗಳಿಗೆ 3 ಲಕ್ಷ ಕೋಟಿ ರೂ. ತುರ್ತು ಸಾಲದ ನೆರವು ನೀಡುವ ಎಮರ್ಜೆನ್ಸಿ ಕ್ರೆಡಿಟ್‌ ಲೈನ್‌ ಗ್ಯಾರಂಟಿ ಸ್ಕೀಮ್‌ನ( ಇ ಸಿ ಎಲ್‌ಜಿಎಸ್‌) ಅವಧಿಯು ಅಕ್ಟೋಬರ್‌ 31 ರಿಂದ ನಂತರವೂ ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ತೆರಿಗೆ ರಿಫಂಡ್‌

ಕಳೆದ ಏಪ್ರಿಲ್‌ 1ರಿಂದ ಸೆಪ್ಟೆಂಬರ್‌ 8ರ ತನಕ 27.55 ಲಕ್ಷ ತೆರಿಗೆದಾರರಿಗೆ 1.01 ಲಕ್ಷ ಕೋಟಿ ರೂ. ತೆರಿಗೆ ರಿಫಂಡ್‌ ಆಗಿದೆ. 25 ಲಕ್ಷ ಪ್ರಕರಣಗಳಲ್ಲಿ30,768 ಕೋಟಿ ರೂ. ಆದಾಯ ತೆರಿಗೆ ರಿಫಂಡ್‌ ಮಾಡಲಾಗಿದೆ. 1.71 ಲಕ್ಷ ಕಾರ್ಪೊರೇಟ್‌ ತೆರಿಗೆ ಪ್ರಕರಣಗಳಲ್ಲಿ70,540 ಕೋಟಿ ರೂ. ತೆರಿಗೆ ರಿಫಂಡ್‌ ಆಗಿದೆ ಎಂದು ಹಣಕಾಸು ಇಲಾಖೆ ತಿಳಿಸಿದೆ.

ಮತ್ತೊಂದು ಪ್ಯಾಕೇಜ್‌ ನಿರೀಕ್ಷೆ


20 ಲಕ್ಷ ಕೋಟಿ ರೂ.ಗಳ ಆತ್ಮನಿರ್ಭರ್‌ ಭಾರತ ಪ್ಯಾಕೇಜ್‌ ನಂತರ ಎರಡನೇ ಪ್ಯಾಕೇಜ್‌ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ. ಪ್ರಧಾನಿಯವರ ಕಚೇರಿ ಶೀಘ್ರ ಹಣಕಾಸು ಸಚಿವಾಲಯದ ಜತೆಗೆ ಈ ಸಂಬಂಧ ಚರ್ಚಿಸಲಿದೆ. ಜಾಗತಿಕ ಪೂರೈಕೆಯ ಸರಣಿಗೆ ಭಾರತದಲ್ಲಿಹೂಡಿಕೆ ಮಾಡುವ ಉತ್ಪಾದಕರಿಗೆ ಇನ್ಸೆಂಟಿವ್‌ ಸೇರಿದಂತೆ ಮತ್ತೊಂದು ಪ್ಯಾಕೇಜ್‌ ಪ್ರಕಟವಾಗುವ ನಿರೀಕ್ಷೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ