ಆ್ಯಪ್ನಗರ

ಭಾರತದ ಆರ್ಥಿಕತೆಗೆ ಲಾಕ್‌ಡೌನ್‌ ಹಾನಿಕಾರಕ - ಆರ್ಥಿಕ ತಜ್ಞರ ಅಭಿಮತ

ಭಾರತದಂಥ ದೇಶದಲ್ಲಿ ಲಾಕ್‌ಡೌನ್‌ ಹೇರುವುದರಿಂದ ಜನರು ಕೊರೊನಾಕ್ಕಿಂತಲೂ ಹೆಚ್ಚಿನ ಸಂಕಷ್ಟ ಅನುಭವಿಸಲಿದ್ದಾರೆ. ಇದಕ್ಕೆ ಕಾರಣ ಸರಕಾರ ಸಣ್ಣ ಉದ್ಯಮಗಳಿಗೆ, ನಿರುದ್ಯೋಗಿಗಳಿಗೆ ಯಾವುದೇ ನೆರವು ಘೋಷಿಸಿಲ್ಲ ಎಂದು ಅವರು ವಿವರಿಸಿದ್ದಾರೆ.

Vijaya Karnataka 24 Apr 2020, 6:42 pm

ಭಾರತ ಮತ್ತು ಇಂಡೋನೇಷ್ಯಾದಂಥ ದೇಶಗಳ ಜನರು ಮತ್ತು ಆರ್ಥಿಕತೆಯ ಪಾಲಿಗೆ ಲಾಕ್‌ಡೌನ್‌ ದುರಂತವಾಗಲಿದೆ ಎಂಬುದಾಗಿ ಕ್ರಿಸ್ಟೋಫರ್ ವುಡ್‌ ಹೇಳಿದ್ದಾರೆ. ವುಡ್‌ ಅಮೆರಿಕಾದ ಖ್ಯಾತ ಹೂಡಿಕೆ ಬ್ಯಾಂಕ್‌ ಜೆಫೆರೀಸ್‌ನ ಅಂತಾರಾಷ್ಟ್ರೀಯ ಈಕ್ವಿಟಿ ಸ್ಟ್ರಾಟೆಜಿ ಮುಖ್ಯಸ್ಥರಾಗಿದ್ದಾರೆ.
Vijaya Karnataka Web Coronavirus Lockdown


ಇದಕ್ಕೆ ಕಾರಣ ಈ ದೇಶಗಳಲ್ಲಿನ ಸರಕಾರಗಳು ಸಣ್ಣ ಉದ್ಯಮಗಳಿಗೆ, ನಿರುದ್ಯೋಗಿಗಳಿಗೆ ಯಾವುದೇ ನೆರವು ಘೋಷಿಸಲಾಗಿಲ್ಲ ಎಂದು ಅವರು ವಿವರಿಸಿದ್ದಾರೆ. ಇಲ್ಲಿಯ ಪರಿಸ್ಥಿತಿಗೂ ಅಮೆರಿಕಾದ ಪರಿಸ್ಥಿತಿಗೂ ವ್ಯತ್ಯಾಸಗಳಿವೆ. ಕಾರಣ ಅಲ್ಲಿ ಸಣ್ಣ ಉದ್ಯಮಗಳಿಗೆ 8 ವಾರಗಳ ಕಾಲ ಉದ್ಯೋಗಿಗಳಿಗೆ ವೇತನ ನೀಡಲು ಅನುಕೂಲವಾಗುವಂತೆ 349 ಬಿಲಿಯನ್‌ ಡಾಲರ್‌ (26.6 ಲಕ್ಷ ಕೋಟಿ ರೂ.) ಸಬ್ಸಿಡಿ ರೂಪದ ಸಾಲವನ್ನು ನೀಡಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

ಭಾರತದಂಥ ದೇಶದಲ್ಲಿ ಲಾಕ್‌ಡೌನ್‌ ಹೇರುವುದರಿಂದ ಜನರು ಕೊರೊನಾಕ್ಕಿಂತಲೂ ಹೆಚ್ಚಿನ ಸಂಕಷ್ಟ ಅನುಭವಿಸಲಿದ್ದಾರೆ. ಸ್ಥಳೀಯ ಸಾಲಗಾರರಿಗೆ ಹಣ ಮರು ಪಾವತಿ ವಿಳಂಬವಾಗಲಿದೆ ಎಂದವರು ಎಚ್ಚರಿಸಿದ್ದಾರೆ.

ವಿಮಾನಯಾನ ಕ್ಷೇತ್ರದಲ್ಲಿ 29 ಲಕ್ಷ ಉದ್ಯೋಗ ನಷ್ಟದ ಭೀತಿಯಲ್ಲಿ!

ಭಾರತದ ಬ್ಯಾಂಕ್‌ಗಳಲ್ಲಿ ಇಲ್ಲಿಯವರೆಗೆ ಹೂಡಿಕೆಯ ಸಂಗ್ರಹ 2002ರ ನಂತರ ಯಾವತ್ತೂ ಋಣಾತ್ಮಕವಾಗಿಲ್ಲ. ಆದರೆ ಈ ಸ್ಥಿತಿ ಬದಲಾಗುವ ಸಾಧ್ಯತೆಗಳು ಕಾಣಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ ಇತ್ತೀಚೆಗೆ ಫೇಸ್‌ಬುಕ್‌ನಿಂದ ಹೂಡಿಕೆ ಪಡೆದಿರುವ ರಿಲಯನ್ಸ್‌ನ್ನು ತಾವು ತೈಲ ಸಂಸ್ಕರಣಾ ಕಂಪನಿಯ ಬದಲಾಗಿ ಇ ಕಾಮರ್ಸ್‌ ಕಂಪನಿಯಾಗಿ ನೋಡುವುದಾಗಿ ವುಡ್‌ ಹೇಳಿದ್ದು, ಭವಿಷ್ಯದಲ್ಲಿ ಕಂಪನಿ ಇಡಲಿರುವ ಹೆಜ್ಜೆಗಳ ಬಗ್ಗೆ ಸಂಕ್ಷಿಪ್ತ ಭವಿಷ್ಯ ನುಡಿದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ