ಆ್ಯಪ್ನಗರ

ಆಹಾರ ಉತ್ಪನ್ನ ಬೆಲೆ ಕುಸಿತ: ಮೋದಿ ಸರಕಾರಕ್ಕೆ ತೊಂದರೆ?

ಕೇಂದ್ರದ ಬಜೆಟ್‌ ಪ್ಲ್ಯಾನ್ ರೂಪಿಸುವಲ್ಲಿ ಕೃಷಿ ಆದಾಯದ ಕೊರತೆಯಾದರೆ ಅದರಿಂದ ಒಟ್ಟಾರೆ ಬಜೆಟ್ ಗಾತ್ರದಲ್ಲೂ ಇಳಿಕೆಯಾಗಲಿದೆ. ಆದರೆ ಮುಂದಿನ ಬಜೆಟ್‌ ಬಳಿಕ ಲೋಕಸಭಾ ಚುನಾವಣೆ ನಡೆಯಲಿರುವುದರಿಂದ ಕೇಂದ್ರ ಬಜೆಟ್‌ ರೂಪಿಸುವಲ್ಲೂ ಎಚ್ಚರ ವಹಿಸಬೇಕಾಗುತ್ತದೆ.

Vijaya Karnataka Web 16 Oct 2018, 4:11 pm
ಹೊಸದಿಲ್ಲಿ: ಆಹಾರ ಉತ್ಪನ್ನಗಳ ಬೆಲೆ ಕುಸಿತ ಮತ್ತು ಸಗಟು ಹಣದುಬ್ಬರ ಸಮಸ್ಯೆ ಸೃಷ್ಟಿಯಾಗಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಸರಕಾರದ ಬಜೆಟ್‌ ಯೋಜನೆಗೆ ತೊಂದರೆಯಾಗಲಿದೆ ಎನ್ನಲಾಗಿದೆ.
Vijaya Karnataka Web New Delhi: Prime Minister Narendra Modi addresses after the launch of Centre for...


ತರಕಾರಿ ಮತ್ತು ದವಸಧಾನ್ಯಗಳ ಬೆಲೆ ಇಳಿಕೆಯಾಗುತ್ತಿದ್ದು, ಬೆಲೆ ಇಳಿಕೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಜತೆಗೆ ಕೃಷಿ ಆದಾಯ ಕೂಡ ಇಳಿಕೆಯಾಗುತ್ತಿರುವುದು ಕೇಂದ್ರಕ್ಕೆ ಆದಾಯದ ಕೊರತೆಯಾಗಲಿದೆ. ಒಟ್ಟಾರೆ ಆರ್ಥಿಕ ಕೊರತೆ ಸೃಷ್ಟಿಯಾಗುವುದರಿಂದ ಕೇಂದ್ರದ ಬಜೆಟ್‌ ಪ್ಲ್ಯಾನ್ ಮೇಲೆ ಪರಿಣಾಂ ಬೀರಲಿದೆ.

ಕೇಂದ್ರದ ಬಜೆಟ್‌ ಪ್ಲ್ಯಾನ್ ರೂಪಿಸುವಲ್ಲಿ ಕೃಷಿ ಆದಾಯದ ಕೊರತೆಯಾದರೆ ಅದರಿಂದ ಒಟ್ಟಾರೆ ಬಜೆಟ್ ಗಾತ್ರದಲ್ಲೂ ಇಳಿಕೆಯಾಗಲಿದೆ.

ಆದರೆ ಮುಂದಿನ ಬಜೆಟ್‌ ಬಳಿಕ ಲೋಕಸಭಾ ಚುನಾವಣೆ ನಡೆಯಲಿರುವುದರಿಂದ ಕೇಂದ್ರ ಬಜೆಟ್‌ ರೂಪಿಸುವಲ್ಲೂ ಎಚ್ಚರ ವಹಿಸಬೇಕಾಗುತ್ತದೆ. ಹೀಗಾಗಿ ಪ್ರಧಾನಿ ಮೋದಿಯವರ ಬಜೆಟ್ ಯೋಜನೆಗೆ ಆಹಾರ ಉತ್ಪನ್ನಗಳ ಬೆಲೆ ಇಳಿಕೆ ಮತ್ತು ಸಗಟು ಹಣದುಬ್ಬರ ಸಮಸ್ಯೆಯಾಗಲಿದೆ ಎನ್ನಲಾಗಿದೆ.

ಪರಿಸ್ಥಿತಿ ಸುಧಾರಿಸಲು ಕೇಂದ್ರ ಸರಕಾರ ರೈತರಿಗೆ ಬೆಂಬಲ ಬೆಲೆ, ಮತ್ತಷ್ಟು ಹೆಚ್ಚಿನ ಯೋಜನೆ ಜಾರಿ ಮಾಡಿದರೆ ಅದರಿಂದ ಪ್ರಯೋಜನವಾಗಲಿದೆಯಾದರೂ, ಕೇಂದ್ರಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ