ಆ್ಯಪ್ನಗರ

ಮೈಂಡ್‌ ಟ್ರೀ ಖರೀದಿಗೆ ಎಲ್‌ಆ್ಯಂಡ್‌ ಸಜ್ಜು

ಎಂಜಿನಿಯರಿಂಗ್‌ ದಿಗ್ಗಜ ಎಲ್‌ಆ್ಯಂಡ್‌ಟಿ ಬೆಂಗಳೂರು ಮೂಲದ ಮಾಹಿತಿ ತಂತ್ರಜ್ಞಾನ ಕಂಪನಿಯಾದ ಮೈಂಡ್‌ ಟ್ರೀಯನ್ನು ಖರೀದಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಕಂಪನಿಯಲ್ಲಿ ಮೊದಲ ಹಂತದಲ್ಲಿ ಕೆಫೆ ಕಾಫಿ ಡೇಯ ಸ್ಥಾಪಕ ಹಾಗೂ ಮಾಜಿ ಮುಖ್ಯಮಂತ್ರಿ ಎಸ್‌.ಎಂ ಕೃಷ್ಣ ಅವರ ಅಳಿಯ ವಿ.ಜಿ ಸಿದ್ಧಾರ್ಥ ಅವರು ಹೊಂದಿರುವ ಶೇ.20.4ರಷ್ಟು ಷೇರುಗಳನ್ನು ಖರೀದಿಸಲಿದೆ.

Vijaya Karnataka Web 19 Mar 2019, 5:00 am
ಬೆಂಗಳೂರು : ಎಂಜಿನಿಯರಿಂಗ್‌ ದಿಗ್ಗಜ ಎಲ್‌ಆ್ಯಂಡ್‌ಟಿ ಬೆಂಗಳೂರು ಮೂಲದ ಮಾಹಿತಿ ತಂತ್ರಜ್ಞಾನ ಕಂಪನಿಯಾದ ಮೈಂಡ್‌ ಟ್ರೀಯನ್ನು ಖರೀದಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಕಂಪನಿಯಲ್ಲಿ ಮೊದಲ ಹಂತದಲ್ಲಿ ಕೆಫೆ ಕಾಫಿ ಡೇಯ ಸ್ಥಾಪಕ ಹಾಗೂ ಮಾಜಿ ಮುಖ್ಯಮಂತ್ರಿ ಎಸ್‌.ಎಂ ಕೃಷ್ಣ ಅವರ ಅಳಿಯ ವಿ.ಜಿ ಸಿದ್ಧಾರ್ಥ ಅವರು ಹೊಂದಿರುವ ಶೇ.20.4ರಷ್ಟು ಷೇರುಗಳನ್ನು ಖರೀದಿಸಲಿದೆ.
Vijaya Karnataka Web lts takeover bid of mindtree
ಮೈಂಡ್‌ ಟ್ರೀ ಖರೀದಿಗೆ ಎಲ್‌ಆ್ಯಂಡ್‌ ಸಜ್ಜು


ಈ ನಡುವೆ ಎಲ್‌ಆ್ಯಂಡ್‌ಟಿಯ ಈ ಪ್ರಯತ್ನವನ್ನು 'ಬಲವಂತದ ಖರೀದಿ' ಎಂದು ಮೈಂಡ್‌ ಟ್ರೀಯ ಸ್ಥಾಪಕ ಹಾಗೂ ಮಾಜಿ ಸಿಇಒ ಸುಬ್ರತೊ ಬಾಗ್ಚಿ ಆರೋಪಿಸಿದ್ದಾರೆ. ಅವರು ಒಡಿಶಾ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥ ಹುದ್ದೆಗೆ ರಾಜೀನಾಮೆ ನೀಡಿದ್ದು, ಬೆಂಗಳೂರಿಗೆ ಹಿಂತಿರುಗಲಿದ್ದಾರೆ.

'' ಮೈಂಡ್‌ ಟ್ರೀಯನ್ನು ಬಲವಂತವಾಗಿ ಖರೀದಿ ಮಾಡುವ ಅಪಾಯದ ಹಿನ್ನೆಲೆಯಲ್ಲಿ ಸರಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ. ಮೈಂಡ್‌ ಟ್ರೀ ಎಂಬ ಮರವನ್ನು ಕಡಿಯಲು ಬುಲ್ಡೋಜರ್‌ ಮತ್ತು ಗರಗಸಗಳೊಂದಿಗೆ ಬರುತ್ತಿರುವ ಜನ, ಮರವನ್ನು ಕಡಿದು ಆ ಜಾಗದಲ್ಲಿ ಶಾಪಿಂಗ್‌ ಮಾಲ್‌ ಕಟ್ಟಬಹುದು. ಇದನ್ನು ತಡೆಯಲೇಬೇಕಾಗಿದೆ'' ಎಂದು ಸುಬ್ರತೊ ಟ್ವೀಟ್‌ನಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

20 ವರ್ಷ ಹಳೆಯ ಮೈಂಡ್‌ ಟ್ರೀಯಲ್ಲಿ ವಿ.ಜಿ ಸಿದ್ಧಾರ್ಥ ಅವರು ಹೊಂದಿರುವ ಶೇ.20.4 ಷೇರುಗಳನ್ನು 3,000 ಕೋಟಿ ರೂ.ಗೆ ಎಲ್‌ಆ್ಯಂಡ್‌ಟಿ ಖರೀದಿಸಲಿದೆ. ಎರಡನೇ ಹಂತದಲ್ಲಿ ಶೇ.26 ಷೇರುಗಳನ್ನು ಇತರ ಷೇರುದಾರರಿಂದ ಖರೀದಿಸುವ ನಿರೀಕ್ಷೆ ಇದೆ. ಸುಮಾರು 100 ಕೋಟಿ ಡಾಲರ್‌ ಶಾದಾಯವಿರುವ ಮೈಂಡ್‌ ಟ್ರೀ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಐಟಿ ಕಂಪನಿಗಳಲ್ಲೊಂದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ