ಆ್ಯಪ್ನಗರ

ರಾಜ್ಯವನ್ನು ನಂಬರ್‌ ಒನ್‌ ಸ್ಥಾನಕ್ಕೇರಿಸುವುದೇ ನಮ್ಮ ಗುರಿ: ಬಿಎಸ್‌ವೈ

ವ್ಯಾಪಾರೋದ್ಯಮ ಚಟುವಟಿಕೆಗೆ ಪ್ರೋತ್ಸಾಹ ನೀಡಿದ ಕಾರಣ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಮೊದಲ ಸ್ಥಾನ ಲಭಿಸಿದೆ. 1.54 ಲಕ್ಷ ಕೋಟಿ ರೂ. ಮೊತ್ತದ 95 ಹೂಡಿಕೆ ಪ್ರಸ್ತಾಪ ಬಂದಿದೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

Vijaya Karnataka Web 1 Jan 2021, 2:41 pm
ಬೆಂಗಳೂರು: ಕೋವಿಡ್‌ ನಡುವೆಯೂ ವ್ಯಾಪಾರೋದ್ಯಮ ಚಟುವಟಿಕೆಗೆ ಪ್ರೋತ್ಸಾಹ ನೀಡಿದ ಕಾರಣ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಮೊದಲ ಸ್ಥಾನ ಲಭಿಸಿದೆ. 1.54 ಲಕ್ಷ ಕೋಟಿ ರೂ. ಮೊತ್ತದ 95 ಹೂಡಿಕೆ ಪ್ರಸ್ತಾಪ ಬಂದಿದೆ. ರಾಜ್ಯವನ್ನು ನಂಬರ್‌ ಒನ್‌ ಸ್ಥಾನಕ್ಕೇರಿಸುವುದೇ ನಮ್ಮ ಸರಕಾರದ ಗುರಿ ಎಂದು ಸಿಎಂ ಯಡಿಯೂರಪ್ಪ ಪ್ರಕಟಿಸಿದರು.
Vijaya Karnataka Web b s yediyurappa


ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಗುರುವಾರ ಮಾತನಾಡಿ,''ಬರಗಾಲ, ಪ್ರವಾಹ, ಕೋವಿಡ್‌ ನಿರ್ವಹಣೆಯ ಅಗ್ನಿ ಪರೀಕ್ಷೆ ನಡುವೆಯೂ ಬಜೆಟ್‌ ಭರವಸೆ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು. ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಸರ್ವ ಪ್ರಯತ್ನ ಮಾಡಲಾಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಿಲ್ಲದ ಕಾರಣ ಸುಮಾರು 35 ಸಾವಿರ ಕೋಟಿ ರೂ. ಕೊರತೆಯಾಗಬಹುದು. ಅದು ಮುಂದಿನ ಬಜೆಟ್‌ ಮೇಲೂ ಪರಿಣಾಮ ಬೀರಬಹುದು. ಈ ನಡುವೆಯೂ ರೈತ, ಎಸ್‌ಸಿ, ಎಸ್‌ಟಿ ಸೇರಿದಂತೆ ಎಲ್ಲರ ಅಭಿವೃದ್ಧಿಗೆ ಆದ್ಯತೆ ಕೊಡಲಾಗುವುದು. ಕೇಂದ್ರದ ಬಜೆಟ್‌ ನಂತರ ರಾಜ್ಯದ ಆಯವ್ಯಯ ಮಂಡಿಸಲಾಗುವುದು,'' ಎಂದು ಸಿಎಂ ಭರವಸೆ ನೀಡಿದರು.

ಇನ್ನೊಂದು ವರ್ಷದಲ್ಲಿ ಬೆಂಗಳೂರು ಚಿತ್ರಣ ಬದಲು ''ಬೆಂಗಳೂರು ಅಭಿವೃದ್ಧಿ ಸಂಬಂಧ ಪ್ರಧಾನಿಯವರ ಸಲಹೆಯಂತೆ 'ಬೆಂಗಳೂರು ಮಿಷನ್‌-2022'ಕ್ಕೆ ಚಾಲನೆ ನೀಡಲಾಗಿದೆ. ಇನ್ನೊಂದು ವರ್ಷದಲ್ಲಿ ಬೆಂಗಳೂರಿನ ಚಿತ್ರಣ ಬದಲಾಗಲಿದೆ. ಇದಕ್ಕೆ ಅಗತ್ಯವಾದ ಅನುದಾನ ನೀಡಲಾಗುವುದು. ಬೆಂಗಳೂರನ್ನು ದೇಶದಲ್ಲೆ ಮಾದರಿ ನಗರವಾಗಿ ರೂಪಿಸಲಾಗುವುದು. ಪ್ರವಾಸೋದ್ಯಕ್ಕೂ ಒತ್ತು ನೀಡಲಾಗುವುದು. ಜೋಗ್‌ ಜಲಪಾತ, ಕೆಮ್ಮಣ್ಣುಗುಂಡಿ, ಬೇಲೂರು, ಹಳೆಬೀಡು ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗು ವುದು,''ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ