ಆ್ಯಪ್ನಗರ

ವಾರದ ಆರಂಭ; ಷೇರು ಮಾರುಕಟ್ಟೆ ಶುಭಾರಂಭ, ಬ್ಯಾಂಕಿಂಗ್ ಶೈನ್, ಸೆನ್ಸೆಕ್ಸ್‌, ನಿಫ್ಟಿ ಗೇನ್‌

ನವರಾತ್ರಿಯ ಆರಂಭ ಹಾಗೂ ಮುಂದಿನ ದಿನಗಳಲ್ಲಿ ಬರುವ ದೀಪಾವಳಿ ಹಿನ್ನೆಲೆಯಲ್ಲಿ ಹಾಗೂ ಕೇಂದ್ರ ಸರಕಾರ ಎರಡನೇ ಹಂತದ ಆರ್ಥಿಕ ಪುನಶ್ಚೇತನ ಯೋಜನೆಗಳನ್ನು ಪ್ರಕಟಿಸುವ ನಿರೀಕ್ಷೆ ಇರುವುದರಿಂದ ಷೇರು ಮಾರುಕಟ್ಟೆಯಲ್ಲಿ ಸೋಮವಾರದ ವಹಿವಾಟಿನಲ್ಲಿ ಬೆಳಕು ಕಾಣಿಸಿದೆ.

Vijaya Karnataka Web 19 Oct 2020, 9:52 am
ಮುಂಬಯಿ: ಕಳೆದ ವಾರದ ಅಂತ್ಯದ ವೇಳೆಗೆ ತುಸು ಇಳಿಕೆ ಕಂಡಿದ್ದ ಷೇರು ಮಾರುಕಟ್ಟೆಯಲ್ಲಿ ವಾರದ ಆರಂಭದ ದಿನದಲ್ಲೇ ಚೇತರಿಕೆ ಕಂಡುಬಂದಿದೆ. ಇದು ಹೂಡಿಕೆದಾರರಿಗೆ ತುಸು ಸಮಾಧಾನ ತಂದಿದೆ.
Vijaya Karnataka Web ಷೇರು ಮಾರುಕಟ್ಟೆ
ಷೇರು ಮಾರುಕಟ್ಟೆ


ಸೋಮವಾರ ಬೆಳಗಿನ ವಹಿವಾಟಿನಲ್ಲಿ ಮುಂಬಯಿ ಷೇರು ವಿನಿಮಯ ಪೇಟೆ ಹಾಗೂ ಕಂಡಿದೆ. ರಾಷ್ಟ್ರೀಯ ಷೇರು ವಿನಿಮಯ ಮಾರುಕಟ್ಟೆ ಎರಡಲ್ಲೂ ಪ್ರಗತಿ ಇದ್ದು, ಒಟ್ಟಾರೆ ವಹಿವಾಟು ಏರುಮುಖದಲ್ಲಿ ಸಾಗಿದೆ.

ಆರಂಭಿಕ ವಹಿವಾಟಿನಲ್ಲಿ ಮುಂಬಯಿ ಷೇರು ವಿನಿಮಯ ಪೇಟೆಯಲ್ಲಿ 319 ಅಂಕಗಳ ಜಂಪ್‌ ಕಂಡುಬಂದಿದೆ. ವಾರದ ಆರಂಭ ದಿನ ಸೆನ್ಸೆಕ್ಸ್‌ 40,302 ಅಂಕ ತಲುಪಿದ್ದು, ದಲಾಲ್‌ ಸ್ಟ್ರೀಟ್‌ನಲ್ಲಿ ಶುಭಸೂಚನೆ ನೀಡಿದೆ.

ರಾಷ್ಟ್ರೀಯ ಷೇರು ವಿನಿಮಯ ಪೇಟೆಯಲ್ಲೂ ವಾರದ ಆರಂಭ ಶುಭಾರಂಭವಾಗಿದೆ. ನಿಫ್ಟಿ 86 ಅಂಕಗಳ ಏರಿಕೆ ಕಂಡು 11,848 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ. ಇದು ಪ್ರಗತಿಯ ಹಾದಿಯತ್ತ ಮುಖ ಮಾಡುವ ಮುನ್ಸೂಚನೆ ತೋರಿದೆ.

ಸೆನ್ಸೆಕ್ಸ್‌ 300 ಕ್ಕೂ ಹೆಚ್ಚುಗಳ ಅಂಕ ಏರಿಕೆ ಕಾಣಲು ಕೆಲವು ಕಂಪನಿಗಳ ಚೇತರಿಕೆಯೂ ಕಾರಣವಾಗಿದೆ. ಪ್ರಮುಖವಾಗಿ ಬ್ಯಾಂಕಿಂಗ್‌ ಷೇರು ಮೌಲ್ಯ ಹೆಚ್ಚಾಗಿದ್ದು ಚೇತರಿಕೆಗೆ ಇದು ನಾಂದಿ ಹಾಡಿದೆ.

ಭಾರತೀಯ ಸ್ಟೇಟ್‌ ಬ್ಯಾಂಕ್‌, ಎಚ್‌ಡಿಎಫ್‌ಸಿ, ಯೆಸ್‌ ಬ್ಯಾಂಕ್‌, ಫೆಡರಲ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ಗಳ ಷೇರುಗಳ ಗ್ರಾಫ್‌ ಆಕಾಶಮುಖಿಯಾಗಿದೆ.

ಕಳೆದ ವಾರದಲ್ಲಿ ಭಾರಿ ಏರಿಳಿತ ಕಂಡಿದ್ದ ಷೇರು ಮಾರುಕಟ್ಟೆ ಈ ವಾರದಲ್ಲಿ ಇನ್ನಷ್ಟು ನಿರೀಕ್ಷೆಯನ್ನು ಮಾಡಬಹುದಾಗಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.

ನವರಾತ್ರಿಯ ಆರಂಭ ಹಾಗೂ ಮುಂದಿನ ದಿನಗಳಲ್ಲಿ ಬರುವ ದೀಪಾವಳಿ ಹಿನ್ನೆಲೆಯಲ್ಲಿ ಹಾಗೂ ಕೇಂದ್ರ ಸರಕಾರ ಎರಡನೇ ಹಂತದ ಆರ್ಥಿಕ ಪುನಶ್ಚೇತನ ಯೋಜನೆಗಳನ್ನು ಪ್ರಕಟಿಸುವ ನಿರೀಕ್ಷೆ ಇರುವುದರಿಂದ ಷೇರು ಮಾರುಕಟ್ಟೆಯಲ್ಲಿ ಸೋಮವಾರದ ವಹಿವಾಟಿನಲ್ಲಿ ಬೆಳಕು ಕಾಣಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ