ಆ್ಯಪ್ನಗರ

ಸರಕಾರದ ಧೋರಣೆಯಿಂದ 6 ಸಾವಿರ ಉದ್ಯೋಗಿಗಳು ಬೀದಿಪಾಲು: ಚೋಕ್ಸಿ

ಪಿಎನ್‌ಬಿ ಹಗರಣದ ಆರೋಪಿ ಮೆಹುಲ್‌ ಚೋಕ್ಸಿಯಿಂದ ಎರಡನೇ ವಿಡಿಯೊ ಬಿಡುಗಡೆ

TNN 13 Sep 2018, 5:00 am
ಹೊಸದಿಲ್ಲಿ: ಒಂದೇ ವಾರದಲ್ಲಿ ನನ್ನ ಎಲ್ಲ ಕಂಪನಿಗಳನ್ನು ಮುಚ್ಚಲಾಗಿದ್ದು, ಇದರಿಂದ 6 ಸಾವಿರ ಉದ್ಯೋಗಿಗಳು ಬೀದಿಪಾಲಾಗಿದ್ದಾರೆ.ಇದಕ್ಕೆಲ್ಲ ಕೇಂದ್ರ ಸರಕಾರದ ಅವಸರದ ಕ್ರಮವೇ ಕಾರಣ ಎಂದು ಪಿಎನ್‌ಬಿ ಹಗರಣದ ಆರೋಪಿ ಮೆಹುಲ್‌ ಚೋಕ್ಸಿ ಆರೋಪಿಸಿದ್ದಾರೆ.
Vijaya Karnataka Web mehul choksi says he is worried about shareholders employees and handicapped workers
ಸರಕಾರದ ಧೋರಣೆಯಿಂದ 6 ಸಾವಿರ ಉದ್ಯೋಗಿಗಳು ಬೀದಿಪಾಲು: ಚೋಕ್ಸಿ


'ನಮ್ಮ ಗೀತಾಂಜಲಿ ಗ್ರೂಪ್‌ನ ನನ್ನ ಉದ್ಯೋಗಿಗಳು, ಅದರಲ್ಲೂ ವಿಶೇಷಚೇತನ ಉದ್ಯೋಗಿಗಳ ಭವಿಷ್ಯದ್ದೇ ಚಿಂತೆ. ಕಂಪನಿ ನಂಬಿ ಹಣ ಹೂಡಿಕೆ ಮಾಡಿದ್ದ ಷೇರುದಾರರ ಬಗೆಗೂ ಚಿಂತೆಯಾಗಿದೆ,'' ಎಂದಿದ್ದಾರೆ. ಆಂಟಿಗುವಾದಲ್ಲಿ ಅಡಗಿರುವ ಅವರು ವಿಡಿಯೊ ಸಂದರ್ಶನದಲ್ಲಿ ಸರಕಾರದ ವಿರುದ್ಧ ಗುಡುಗಿದ್ದಾರೆ. ''ಜಾರಿ ನಿರ್ದೇಶನಾಲಯ ಮಾಡಿರುವ ಎಲ್ಲ ಆರೋಪಗಳೂ ಸುಳ್ಳು,'' ಎಂದು ಅವರು ಹೇಳಿದ್ದಾರೆ.

ವಂಚನೆ ಮೂಲಕ ಕೂಡಿಸಿದ್ದ 3,250 ಕೋಟಿ ರೂ. ಹಣವನ್ನು ವಿದೇಶಗಳ ಡಮ್ಮಿ ಕಂಪನಿಗಳ ಮೂಲಕ ಚೋಕ್ಸಿ ವರ್ಗಾವಣೆ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ದೂರಿತ್ತು. ಆದರೆ, ಆರೋಪವನ್ನು ಚೋಕ್ಸಿ ತಳ್ಳಿಹಾಕಿದ್ದಾರೆ.

''ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದೆ. ಈ ಸಂದರ್ಭದಲ್ಲಿ ನನ್ನ ಪಾಸ್‌ ಪೋರ್ಟ್‌ ರದ್ದು ಮಾಡಲಾಗಿದೆ. ದೇಶದ ಭದ್ರತೆಗೆ ಧಕ್ಕೆ ತಂದ ಸಂಬಂಧ ಪಾಸ್‌ಪೋರ್ಟ್‌ ತಡೆಹಿಡಿದಿರುವುದಾಗಿ ಅಧಿಕಾರಿಗಳು ಇ-ಮೇಲ್‌ ಮಾಡಿದ್ದಾರೆ.ಅಂಥ ಕೆಲಸವನ್ನು ನಾನು ಏನು ಮಾಡಿದ್ದೇನೆ? ಈ ಬಗ್ಗೆ ನಾನು ಬರೆದ ಪತ್ರಕ್ಕೆ ಉತ್ತರ ಬಂದಿಲ್ಲ,'' ಎಂದು ಚೋಕ್ಸಿ ಮೊದಲ ವಿಡಿಯೊ ಸಂದರ್ಶನದಲ್ಲಿ ದೂರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ