ಆ್ಯಪ್ನಗರ

ಹಾಲು ಖರೀದಿ ದರ 2 ರೂ. ಕಡಿತ: ಮಂಡ್ಯದ 20 ಲಕ್ಷ ಹೈನುಗಾರರಿಗೆ ತೊಂದರೆ!

ಹಾಲು ಖರೀದಿ ದರದಲ್ಲಿ 2 ರೂ. ಕಡಿತಗೊಳಿಸಿರುವ ಮಂಡ್ಯ ಹಾಲು ಒಕ್ಕೂಟದ ಆಡಳಿತ ಮಂಡಳಿಯ ಕ್ರಮದಿಂದಾಗಿ ಹೈನುಗಾರಿಕೆಯನ್ನೇ ಅವಲಂಬಿಸಿಕೊಂಡಿರುವ ಜಿಲ್ಲೆಯ 20 ಲಕ್ಷಕ್ಕೂ ಹೆಚ್ಚು ರೈತರಿಗೆ ತೊಂದರೆಯಾಗಲಿದೆ ಎಂದು ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.

Vijaya Karnataka 15 Nov 2021, 7:34 pm
ನಾಗಮಂಗಲ: ಹಾಲು ಖರೀದಿ ದರದಲ್ಲಿ 2 ರೂ. ಕಡಿತಗೊಳಿಸಿರುವ ಮಂಡ್ಯ ಹಾಲು ಒಕ್ಕೂಟದ ಆಡಳಿತ ಮಂಡಳಿಯ ಕ್ರಮದಿಂದಾಗಿ ಹೈನುಗಾರಿಕೆಯನ್ನೇ ಅವಲಂಬಿಸಿಕೊಂಡಿರುವ ಜಿಲ್ಲೆಯ 20 ಲಕ್ಷಕ್ಕೂ ಹೆಚ್ಚು ರೈತರಿಗೆ ತೊಂದರೆಯಾಗಲಿದೆ ಎಂದು ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.
Vijaya Karnataka Web milk production


ತಾಲೂಕಿನ ಇಜ್ಜಲಘಟ್ಟ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಯಾವೊಂದು ಹಾಲು ಒಕ್ಕೂಟವೂ ತೆಗೆದುಕೊಳ್ಳದ ನಿರ್ಧಾರವನ್ನು ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ತೆಗದುಕೊಂಡು ಹಾಲಿನ ದರ ಕಡಿತ ಮಾಡುವ ಮೂಲಕ ರೈತರ ಗಾಯದ ಮೇಲೆ ಬರೆ ಎಳೆದಿದೆ ಎಂದು ಮನ್‌ಮುಲ್‌ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೋಚಿಮುಲ್‌ ಹಾಲು ಒಕ್ಕೂಟ ಹೋಳು! ರೈತರಿಗೆ ತಪ್ಪದ ಗೋಳು!

ಕಳೆದ ಒಂದೂವರೆ ವರ್ಷದಿಂದ ಹಾಲಿಗೆ ನೀರು ಮಿಶ್ರಿತ ಹಗರಣದಲ್ಲಿ ಮುಳುಗಿರುವ ಜಿಲ್ಲಾ ಹಾಲು ಒಕ್ಕೂಟ ಕೋಟ್ಯಂತರ ರೂ. ನಷ್ಟದ ಹಣವನ್ನು ಸರಿದೂಗಿಸಲು ರೈತರಿಗೆ ತೊಂದರೆ ಕೊಟ್ಟು ಹಾಲು ಖರೀದಿ ದರದಲ್ಲಿ 2 ರೂ. ಕಡಿತಗೊಳಿಸಿರುವ ಕ್ರಮ ಸರಿಯಲ್ಲ. ಜಿಲ್ಲೆಯ ರೈತರು ಈಗಾಗಲೇ ಕೋವಿಡ್‌ನಿಂದಾಗಿ ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿದ್ದಾರೆ. ಜೊತೆಗೆ ಪೆಟ್ರೋಲ್‌, ಡೀಸೆಲ್‌ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಅನೇಕ ಬಗೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ರೈತರ ಹಿತ ಕಾಯುವ ಸಲುವಾಗಿ ಸಾಧ್ಯವಾದರೆ 1 ರೂ. ಹೆಚ್ಚು ಮಾಡುವ ಬದಲು 2 ರೂ. ಕಡಿತ ಮಾಡಿರುವುದು ಜಿಲ್ಲೆಯ ರೈತರ ದುರಾದೃಷ್ಟ. ಹಾಗಾಗಿ ಈ ಕೂಡಲೇ ಮನ್‌ಮುಲ್‌ ಆಡಳಿತ ಮಂಡಳಿ ಹಾಲಿನ ದರ ಪರಿಷ್ಕರಣೆ ಮಾಡಿ ರೈತರ ನೆರವಿಗೆ ನಿಲ್ಲಬೇಕು ಎಂದರು.

ಮನೆಗಳಲ್ಲಿ ಸಾಕುವ ಹಸುಗಳಿಗೆ ಅನುಮತಿ ಬೇಕಿಲ್ಲ - ಮಾಲಿನ್ಯ ನಿಯಂತ್ರಣ ಮಂಡಳಿ ಸ್ಪಷ್ಟನೆ

ಹಾಲಿನ ದರ ಕಡಿತದ ಬಗ್ಗೆ ಜಿಲ್ಲೆಯ ಮುಗ್ದ ರೈತರು ಆಕ್ರೋಶ ವ್ಯಕ್ತಪಡಿಸಿ ಹೋರಾಟ ನಡೆಸದಿದ್ದರೆ ಮನ್‌ಮುಲ್‌ ಆಡಳಿತ ಮಂಡಳಿಯವರು ತಾವು ಮಾಡಿದ್ದೇ ಸರಿ ಎಂಬ ತೀರ್ಮಾನದಿಂದ ಇಂತಹ ನಿರ್ಧಾರ ತೆಗೆದುಕೊಳ್ಳುತ್ತಿದೆ. ಆದ್ದರಿಂದ ಹಾಲಿನ ದರ ಕಡಿತವನ್ನು ವಿರೋಧಿಸಿ ಪ್ರತಿಯೊಬ್ಬ ರೈತರೂ ಪ್ರತಿಭಟಿಸುವ ಅನಿವಾರ್ಯತೆಯಿದೆ ಎಂದು ತಿಳಿಸಿದರು.

ಬಿಟ್‌ಕಾಯಿನ್‌ ಹಗರಣ ಕುರಿತು ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, ದೊಡ್ಡ ಪ್ರಮಾಣದ ಸರಪಳಿ ಕೊಂಡಿಯಂತಿರುವ ಬಿಟ್‌ಕಾಯಿನ್‌ ಹಗರಣವನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಉನ್ನತಮಟ್ಟದ ತನಿಖೆ ನಡೆಸುವ ಮೂಲಕ ಯಾರು ತಪ್ಪಿತಸ್ಥರಿದ್ದಾರೋ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದರು.

ಡಿ.10ರಂದು ನಡೆಯುವ ವಿಧಾನಪರಿಷತ್‌ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್‌ ಪಕ್ಷದಿಂದ ಜಿಲ್ಲೆಯ ಪುಟ್ಟೇಗೌಡ, ಬಿ.ರಾಮಕೃಷ್ಣ ಮತ್ತು ಶಿವಕುಮಾರ್‌ ಎಂಬ ಮೂವರು ಅಭ್ಯರ್ಥಿಗಳು ಆಕಾಂಕ್ಷಿತರಾಗಿದ್ದು, ಈ ಮೂವರಲ್ಲಿ ಯಾರು ಅಭ್ಯರ್ಥಿಯಾಗಬೇಕೆಂಬುದನ್ನು ಪಕ್ಷದ ಹಿರಿಯ ನಾಯಕರು ನಿರ್ಧರಿಸಲಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಹಾಲು ಉತ್ಪಾದನೆಯಲ್ಲಿ ಚನ್ನರಾಯಪಟ್ಟಣಕ್ಕೆ ಮೊದಲ ಸ್ಥಾನ: ಸಿ.ಎನ್‌. ಬಾಲಕೃಷ್ಣ!

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಸಹ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಬಲಿಷ್ಠವಾಗಿಲ್ಲ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಪ್ರಭಲವಾದ ಪೈಪೋಟಿಯಿದೆ. ಆದರೆ ಜೆಡಿಎಸ್‌ ಇದನ್ನು ಒಪ್ಪಿಕೊಳ್ಳದೆ ಕಾಂಗ್ರೆಸ್‌ ಜೊತೆ ಪೈಪೋಟಿ ಇಲ್ಲ ಎಂದು ಹೇಳಿಕೊಳ್ಳುತ್ತಾರೆ. ಜಿಲ್ಲೆಯ ಮತದಾರರಿಗೆ ಯಾರನ್ನು ಬೆಂಬಲಿಸಬೇಕೆಂದು ಗೊತ್ತಿದೆ. ಡಿ.15ರಂದು ಚುನಾವಣೆ ಫಲಿತಾಂಶ ಬಂದಾಗಲಷ್ಟೆ ಏನೆಂಬುದು ಗೊತ್ತಾಗುತ್ತದೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ