ಆ್ಯಪ್ನಗರ

ಸಾಲ ಹಗರಣ: 6 ತಿಂಗಳಲ್ಲಿ 15 ಮಂದಿ ಸಾವು

ತಮಿಳುನಾಡಿನಲ್ಲಿ 60 ಕೋಟಿ ರೂ.ಗಳ ಎಸ್‌ಬಿಐ ಸಾಲ ಹಗರಣ ಬಯಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.

Vijaya Karnataka 5 Sep 2018, 9:47 am
ಚೆನ್ನೈ : ತಮಿಳುನಾಡಿನಲ್ಲಿ 60 ಕೋಟಿ ರೂ.ಗಳ ಎಸ್‌ಬಿಐ ಸಾಲ ಹಗರಣ ಬಯಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.
Vijaya Karnataka Web Death


ಪ್ರಕರಣಕ್ಕೆ ಸಂಬಂಧಿಸಿದಂತೆ ವಿರುಧುನಗರ್‌ ಮತ್ತು ಥೇನಿ ಜಿಲ್ಲೆಗಳಿಗೆ ಸೇರಿದ ಕನಿಷ್ಠ 15 ಮಂದಿ ಸಾಲಗಾರರು 6 ತಿಂಗಳಿನಲ್ಲಿ ಸಂಶಯಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಈ ರೀತಿ ಸಾವಿಗೀಡಾದವರು ರೈತರು, ದಿನಗೂಲಿ ಕಾರ್ಮಿಕರಾಗಿದ್ದು ಅವರ ಹೆಸರಿನಲ್ಲಿ ಸಾಲ ಪಡೆಯಲಾಗಿತ್ತು. ಅಲ್ಲದೇ ಪ್ರಕರಣದ ಇನ್ನೊಬ್ಬ ಆರೋಪಿ ನಾಪತ್ತೆಯಾಗಿದ್ದಾನೆ.

ಪ್ರಕರಣ ಇಷ್ಟೊಂದು ಗಂಭೀರವಾಗಿದ್ದರೂ ಸಾವುಗಳ ಬಗ್ಗೆ ಯಾವುದೇ ತನಿಖೆ ಆರಂಭಗೊಂಡಿಲ್ಲ. 2017ರ ಅಕ್ಟೋಬರ್‌ನಲ್ಲಿ ಹಗರಣ ನಡೆದಿದೆ. ಈ ಸಂಬಂಧ 169 ದೂರುಗಳು ದಾಖಲಾಗಿವೆ. 169 ರೈತರಿಗೆ 25 ಲಕ್ಷದಿಂದ 40 ಲಕ್ಷ ರೂ. ಒಳಗಿನ ಮಾರುಕಟ್ಟೆ-ಉತ್ಪನ್ನದ ಸಾಲಗಳನನ್ನು ನೀಡಲಾಗಿದೆ. ಇವರಲ್ಲಿ ಬಹುತೇಕರು ದಿನಗೂಲಿ ಕಾರ್ಮಿಕರಾಗಿದ್ದಾರೆ. ಸರಕಾರದ ಪಿಂಚಣಿ ಕೊಡಿಸುವುದಾಗಿ ಸಹಿ ಪಡೆದು ಒ.ಎಂ.ಎಸ್‌ ವೇಲುಮುರುಗನ್‌ ಮತ್ತು ಅವರ ಸೋದರಳಿಯ ಆರ್‌.ಶಂಬಗನ್‌ ವಂಚಿಸಿದ್ದಾರೆ ಎನ್ನಲಾಗಿದೆ. ಸಾಲ ವಸೂಲಿಗೆ ನೋಟಿಸ್‌ಗಳು ಬಂದ ಕಾರಣ, ವಾಸ್ತವ ಸಂಗತಿ ರೈತರಿಗೆ ಅರಿವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ