ಆ್ಯಪ್ನಗರ

ಬಾಂಬ್ ಬೆದರಿಕೆ: ಮುಂಬಯಿ - ಲಖನೌ ವಿಮಾನ ತುರ್ತು ಭೂ ಸ್ಪರ್ಶ

ವಿಮಾನದಲ್ಲಿ ಬಾಂಬ್‌ ಬೆದರಿಕೆ ಇದೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದು, ಈ ಹಿನ್ನೆಲೆ ಇಂಡಿಗೋ ವಿಮಾನವೊಂದು ತುರ್ತು ಭೂ ಸ್ಪರ್ಶವಾಗಿರುವ ಘಟನೆ ಮುಂಬಯಿ ವಿಮಾನ ನಿಲ್ದಾಣದಲ್ಲಿ ನಡೆದಿದೆ. ವಿಮಾನ ತಪಾಸಣೆ ಮಾಡಲಾಗಿದ್ದು, ಯಾವುದೇ ಬಾಂಬ್ ದೊರೆತಿಲ್ಲ ಎಂದು ಸಹ ತಿಳಿದು ಬಂದಿದೆ. ಆದರೆ, ಆ ಮಹಿಳೆ ಹುಸಿ ಬೆದರಿಕೆ ಹಾಕಲು ಆ ರೀತಿ ಹೇಳಿದ್ದರಾ ಎಂಬ ಬಗ್ಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ. ಇತ್ತೀಚೆಗೆ ವಿಮಾನದಲ್ಲಿ ಬಾಂಬ್ ಇದೆ ಎಂದು ಹುಸಿ ಬೆದರಿಕೆ ಹಾಕಿರುವ ಪ್ರಕರಣಗಳು ಸಹ ನಡೆದಿವೆ.

THE ECONOMIC TIMES 15 Dec 2018, 12:02 pm
ಮುಂಬಯಿ: ಮುಂಬಯಿಯಿಂದ ಲಖನೌಗೆ ಹೊರಟಿದ್ದ ಇಂಡಿಗೋ ವಿಮಾನ ತುರ್ತು ಭೂ ಸ್ಪರ್ಶವಾಗಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ವಿಮಾನದಲ್ಲಿ ಬಾಂಬ್‌ ಇದೆ ಎಂದು ಬೆದರಿಕೆ ಹಾಕಿದ್ದಕ್ಕೆ ವಿಮಾನ ತುರ್ತು ಭೂ ಸ್ಪರ್ಶವಾಗಿದೆ ಎಂದು ಏರ್‌ಪೋರ್ಟ್ ಮೂಲಗಳು ಮಾಹಿತಿ ನೀಡಿವೆ.
Vijaya Karnataka Web indigo flight


ನಂತರ, ವಿಮಾನವನ್ನು ಪ್ರತ್ಯೇಕ ಸ್ಥಳದಲ್ಲಿ ತೆಗೆದುಕೊಂಡು ಹೋಗಿ ತಪಾಸಣೆ ನಡೆಸಲಾಗಿದೆ. ಬಳಿಕ, ಬಾಂಬ್‌ ಥ್ರೆಟ್ ಅಸೆಸ್ಮೆಂಟ್‌ ಸಮಿತಿ, ನಿರ್ದಿಷ್ಟ ವಿಮಾನಕ್ಕೆ ಬೆದರಿಕೆ ಎಂದು ಪರಿಗಣಿಸಿದ್ದು, ವಿಮಾನ ಸುರಕ್ಷಿತವಾಗಿದೆ ಎಂದು ಭದ್ರತಾ ಏಜೆನ್ಸಿಗಳು ಘೋಷಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.


ಈ ಬೆಳವಣಿಗೆ ಬಗ್ಗೆ ಇಂಡಿಗೋ ಪ್ರತಿಕ್ರಿಯೆ ಪಡೆಯಲು ಮಾಧ್ಯಮದವರು ಯತ್ನಿಸಿದರೂ ಅವರು ಪ್ರತಿಕ್ರಿಯೆಗೆ ಸಿಗಲಿಲ್ಲ. ಬೆಳಗ್ಗೆ 6 .05ಕ್ಕೆ ಹೊರಡಬೇಕಿದ್ದ ವಿಮಾನದಲ್ಲಿ ಎಷ್ಟು ಮಂದಿ ಪ್ರಯಾಣಿಕರಿದ್ದರು ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ.

''ದಿಲ್ಲಿಗೆ ಹೊರಡಬೇಕಿದ್ದ ಮಹಿಳಾ ಪ್ರಯಾಣಿಕರೊಬ್ಬರು ಇಂಡಿಗೋ ವಿಮಾನ 6E 3612 ( ಮುಂಬಯಿ - ದಿಲ್ಲಿ / ಲಖನೌ ಮಾರ್ಗ )ದಲ್ಲಿ ಬಾಂಬ್‌ ಇದೆ ಎಂದು ತಿಳಿಸಿದ್ದರು. ಜತೆಗೆ, ಕೆಲವರ ಫೋಟೋಗಳನ್ನು ತೋರಿಸಿದ್ದ ಮಹಿಳೆ ಅವರು ದೇಶದ ಭದ್ರತೆಗೆ ಮಾರಕ ಎಂದು ತಿಳಿಸಿದ್ದರು'' ಎಂದು ಏರ್‌ಪೋರ್ಟ್ ಮೂಲಗಳು ತಿಳಿಸಿವೆ.

ನಂತರ, ಆ ಮಹಿಳೆಯನ್ನು ಸಿಐಎಸ್‌ಎಫ್‌ನವರು ಏರ್‌ಪೋರ್ಟ್ ಪೊಲೀಸ್‌ ಠಾಣೆಗೆ ಕರೆದೊಯ್ದು ಪ್ರಶ್ನೆ ಮಾಡಿದ್ದಾರೆ. ಈ ಬೆದರಿಕೆ ನಿರ್ದಿಷ್ಟ ವಿಮಾನಕ್ಕೆ ಮಾತ್ರ ಎಂದು ಬಿಟಿಎಸಿ ತಿಳಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ.


ಆ ಮಹಿಳೆಯನ್ನು ಸಿಐಎಸ್‌ಎಫ್‌ನವರು ಪ್ರಶ್ನೆ ಮಾಡಿದ್ದು, ಆಕೆ ಮಾನಸಿಕವಾಗಿ ಸ್ಥಿಮಿತದಲ್ಲಿಲ್ಲ ಎಂದು ತಿಳಿದುಬಂದಿದೆ. ನಂತರ, ವಿಮಾನ ಮುಂಬಯಿಯಿಂದ ಲಖನೌಗೆ ಒಂದು ಗಂಟೆಗೂ ಹೆಚ್ಚು ತಡವಾಗಿ ಹೊರಟಿದೆ ಎನ್ನಲಾಗಿದೆ. ಅಲ್ಲದೆ, ವಿಮಾನದಲ್ಲಿ ಬಾಂಬ್‌ ಇದೆ ಎಂದು ದೂರು ನೀಡಿದ ಮಹಿಳೆ ಮತ್ತೊಂದು ಖಾಸಗಿ ವಿಮಾನದಲ್ಲಿ ತೆರಳುತ್ತಿದ್ದಳು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ, ಆ ಬಾಂಬ್ ಬೆದರಿಕೆ ಕರೆಯನ್ನು ಹುಸಿ ಬಾಂಬ್ ಕರೆ ಎಂದು ಪರಿಗಣಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ