ಆ್ಯಪ್ನಗರ

ಭುಗಿಲೆದ್ದ 'ಪೌರತ್ವ' ಪ್ರತಿಭಟನೆ: ಮೋದಿ- ಅಬೆ ಶೃಂಗಸಭೆ ಮುಂದೂಡಿಕೆ

ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಈಶಾನ್ಯ ಭಾರತದಲ್ಲಿಪ್ರತಿಭಟನೆ ಭುಗಿಲೆದ್ದಿರುವ ಹಿನ್ನೆಲೆಯಲ್ಲಿಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್‌ ಪ್ರಧಾನಿ ಶಿಂಜೊ ಅಬೆ ಅವರು ಗುವಾಹಟಿಯಲ್ಲಿಡಿ.15 ರಿಂದ 17ರವರೆಗೆ ನಡೆಸಬೇಕಿದ್ದ ವಾರ್ಷಿಕ ಶೃಂಗಸಭೆ ತಾತ್ಕಾಲಿಕವಾಗಿ ರದ್ದುಗೊಂಡಿದೆ.

Vijaya Karnataka Web 13 Dec 2019, 9:32 pm
ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಈಶಾನ್ಯ ಭಾರತದಲ್ಲಿಪ್ರತಿಭಟನೆ ಭುಗಿಲೆದ್ದಿರುವ ಹಿನ್ನೆಲೆಯಲ್ಲಿಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್‌ ಪ್ರಧಾನಿ ಶಿಂಜೊ ಅಬೆ ಅವರು ಗುವಾಹಟಿಯಲ್ಲಿಡಿ.15 ರಿಂದ 17ರವರೆಗೆ ನಡೆಸಬೇಕಿದ್ದ ವಾರ್ಷಿಕ ಶೃಂಗಸಭೆ ತಾತ್ಕಾಲಿಕವಾಗಿ ರದ್ದುಗೊಂಡಿದೆ. ಸದ್ಯದ ಪರಿಸ್ಥಿಯಲ್ಲಿಸಭೆ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿಸರಕಾರ ಸಭೆಯನ್ನು ರದ್ದುಪಡಿಸಿದ್ದರೂ ಅದು ತಾತ್ಕಾಲಿಕ. ಉಭಯ ದೇಶಗಳು ಸಭೆಯನ್ನು ಮುಂದೂಡಿದ್ದು , ಮುಂದಿನ ದಿನಗಳಲ್ಲಿಸೂಕ್ತ ದಿನಾಂಕ ನಿಗದಿಪಡಿಸಲು ಭಾರತ-ಜಪಾನ್‌ ಒಪ್ಪಿಕೊಂಡಿವೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
Vijaya Karnataka Web citizenship law


ಶಾ ಭೇಟಿ ರದ್ದು: ಗೃಹ ಸಚಿವ ಅಮಿತ್‌ ಶಾ ಅವರ ಭಾನುವಾರ ಹಾಗೂ ಸೋಮವಾರ ಮೇಘಾಲಯ ಮತ್ತು ಅರುಣಾಚಲ ಪ್ರದೇಶಕ್ಕೆ ನೀಡಬೇಕಿದ್ದ ಭೇಟಿ ರದ್ದುಗೊಂಡಿದೆ. ಸಚಿವರು ಭಾನುವಾರ ಮೇಘಾಲಯದ ಶಿಲ್ಲಾಂಗ್‌ ಪೊಲೀಸ್‌ ಅಕಾಡೆಮಿಯಲ್ಲಿಹಾಗೂ ಸೋಮವಾರ ಅರುಣಾಚಲ ಪ್ರದೇಶದ ತವಾಂಗ್‌ ಪೊಲೀಸ್‌ ಅಕಾಡೆಮಿಯ ಕಾರ‍್ಯಕ್ರಮಗಳಲ್ಲಿಭಾಗವಹಿಸಬೇಕಿತ್ತು. ವ್ಯಾಪಕ ಪ್ರತಿಭಟನೆ ಹಿನ್ನೆಲೆಯಲ್ಲಿಅವರು ಭೇಟಿ ರದ್ದುಪಡಿಸಿದ್ದಾರೆಂದು ಮೂಲಗಳು ಹೇಳಿವೆ.

ಬಿಜೆಪಿ ಅಭಿಯಾನ: ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ಪ್ರತಿಪಕ್ಷಗಳು ಅಪಪ್ರಚಾರ ನಡೆಸುತ್ತಿದ್ದು ಇದಕ್ಕೆ ಪ್ರತಿಯಾಗಿ ಕಾನೂನಿನಲ್ಲಿರುವ ಉತ್ತಮ ಅವಕಾಶಗಳಿಂದ ಜನರಿಗೆ ಹಾಗೂ ದೇಶಕ್ಕೆ ಆಗುವ ಲಾಭಗಳನ್ನು ತಿಳಿಪಡಿಸಲು ದೇಶಾದ್ಯಂತ ಅಭಿಯಾನ ಕೈಗೊಳ್ಳುವುದಾಗಿ ಬಿಜೆಪಿ ಹೇಳಿದೆ. 2014ರ ಡಿಸೆಂಬರ್‌ 31ಕ್ಕೆ ಮುನ್ನ ಪಾಕಿಸ್ತಾನ, ಬಾಂಗ್ಲಾದೇಶ, ಅಫಘಾನಿಸ್ತಾನದಿಂದ ಬಂದು ನೆಲೆಸಿರುವ ಹಿಂದೂ, ಸಿಖ್‌, ಬೌದ್ಧ, ಜೈನ, ಪಾರ್ಸಿ, ಕ್ರಿಶ್ಚಿಯನ್‌ ಅಕ್ರಮ ವಲಸಿಗರಿಗೆ ಪೌರತ್ವ ನೀಡುವುದು ಈ ಕಾನೂನಿನ ಉದ್ದೇಶವಾಗಿದೆ. ಈ ತ್ರಿವಳಿ ದೇಶಗಳಲ್ಲಿಈ ಆರು ಧರ್ಮದವರೂ ಅಲ್ಪಸಂಖ್ಯಾತರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ