ಆ್ಯಪ್ನಗರ

ಕ್ರೆಡಿಟ್‌, ಡೆಬಿಟ್‌ ಕಾರ್ಡುಗಳಿಗೆ ಹೊಸ ನಿಯಮ ಜಾರಿ: ತಿಳಿಯಲೇಬೇಕಾದ ಮಾಹಿತಿ ಇದು!

ಎಟಿಎಂ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ವಂಚನೆ ತಡೆಯುವ ಸಲುವಾಗಿ ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೊಳಿಸಿದೆ.

Vijaya Karnataka Web 1 Oct 2020, 3:10 pm
ಹೊಸದಿಲ್ಲಿ: ಈಗಾಗಲೇ ನಿಮ್ಮಲ್ಲಿ ಹಲವರಿಗೆ ಎಟಿಎಂ ವಂಚನೆ ಸಂಭವಿಸಿರಬಹುದು ಅಥವಾ ಎಟಿಎಂ ವಂಚನೆ ಬಗ್ಗೆ ಕೇಳಿರಬಹುದು. ಇಂಥಹ ವಂಚನೆಗಳನ್ನು ನಿಯಂತ್ರಿಸಲೆಂದೇ ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೊಳಿಸಿದೆ.
Vijaya Karnataka Web credit card


ಈ ನಿಯಮಗಳು ಮಾರ್ಚ್‌ 16ರಂದೇ ಜಾರಿಯಾಗಬೇಕಿತ್ತು. ಆದರೆ, ಅದೇ ಸಮಯದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡ ಕಾರಣದಿಂದ ಈ ನಿಯಮಗಳ ಜಾರಿಯನ್ನು ಮುಂದೂಡಲಾಗಿತ್ತು. ಇದೀಗ ಅಕ್ಟೋಬರ್‌ 1ರಿಂದಲೇ ನೂತನ ನಿಯಮಗಳು ಜಾರಿಯಾಗಿವೆ.

ನೀವು ಕ್ರೆಡಿಟ್‌ ಕಾರ್ಡ್‌ ಮತ್ತು ಡಿಬಿಟ್‌ ಕಾರ್ಡ್‌ ಹೊಂದಿದ್ದರೆ, ಅದರಲ್ಲೂ ನೀವು ಅಂತಾರಾಷ್ಟ್ರೀಯ ವಹಿವಾಟಿನ ಸೌಲಭ್ಯ ಹೊಂದಿದ್ದರೆ, ಆರ್‌ಬಿಐನ ನೂತನ ನಿಯಮಗಳನ್ನು ಸೂಕ್ಷ್ಮವಾಗಿ ಗಮನಿಸಲೇಬೇಕು.

2018-19ರ ಜಿಎಸ್‌ಟಿ ಪಾವತಿಗೆ ಅ.31ರವರೆಗೆ ಗಡುವು ವಿಸ್ತರಿಸಿದ ಕೇಂದ್ರ ಸರಕಾರ

ಎಟಿಎಂ ಕಾರ್ಡ್‌ಗೆ ಸಂಬಂಧಿಸಿದಂತೆ ಆರ್‌ಬಿಐನ ನೂತನ ನಿಯಮಗಳು:
  • 1. ಡೆಬಿಟ್ ಕಾರ್ಡ್ (ಎಟಿಎಂ) ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುವಾಗ ಅದನ್ನು ದೇಶೀಯ ವಹಿವಾಟಿಗೆ ಸೀಮಿತಗೊಳಿಸುವಂತೆ ಆರ್‌ಬಿಐ (RBI) ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ. ಕಾರ್ಡ್ ಮೂಲಕ ಎಟಿಎಂ ಅಥವಾ ಪಿಒಎಸ್ ಯಂತ್ರದ ಮೂಲಕ ಯಾವುದೇ ಅಂತರರಾಷ್ಟ್ರೀಯ ವ್ಯವಹಾರ ಇರಬಾರದು. ಒಂದು ವೇಳೆ ಅಂತಾರಾಷ್ಟ್ರೀಯ ವಹಿವಾಟ ಮಾಡಬೇಕಾದರೆ ಪೂರ್ವಾನುಮತಿ ಕಡ್ಡಾಯವಾಗಿದೆ.
  • 2. ಗ್ರಾಹಕರು ಭಾರತದ ಹೊರಗೆ ವಹಿವಾಟು ನಡೆಸಬೇಕೆಂದರೆ, ಆಯಾ ಬ್ಯಾಂಕುಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಬ್ಯಾಂಕಿನಿಂದ ಅನುಮತಿ ಪಡೆದ ನಂತರವೇ ವಿದೇಶಿ ವಹಿವಾಟು ನಡೆಸಲು ಸಾಧ್ಯವಾಗಲಿದೆ.
  • 3. ಈಗಾಗಲೇ ಕ್ರೆಡಿಟ್‌ ಕಾರ್ಡ್‌ ಮತ್ತು ಡೆಬಿಟ್‌ ಕಾರ್ಡ್‌ ಹೊಂದಿರುವ ಬ್ಯಾಂಕುಗಳಿಂದ ಹೊಸ ಕಾರ್ಡ್‌ ಪಡೆಯಬಹುದು.
  • 4. ಗ್ರಾಹಕರು ಅಂತಾರಾಷ್ಟ್ರೀಯ ವಹಿವಾಟು, ಆನ್‌ಲೈನ್ ವಹಿವಾಟು ಮತ್ತು ಸಂಪರ್ಕವಿಲ್ಲದ ಕಾರ್ಡ್ ವಹಿವಾಟುಗಳನ್ನು ಬಯಸಿದರೆ, ಅವನು ತನ್ನ ಆಯ್ಕೆಯನ್ನು ಪ್ರತ್ಯೇಕವಾಗಿ ನಮೂದಿಸಬೇಕು. ಗ್ರಾಹಕನು ಬಯಸಿದಾಗ ಮಾತ್ರ ಅಂತರರಾಷ್ಟ್ರೀಯ ಕಾರ್ಡ್ ಸೇವೆಗಳನ್ನು ಪಡೆಯಬಹುದು.
  • 5. ಯಾವುದೇ ಸೇವೆಯನ್ನು ಸಕ್ರಿಯಗೊಳಿಸಿದಾಗ ಅಥವಾ ನಿಲ್ಲಿಸಿದಾಗಲೆಲ್ಲಾ ಗ್ರಾಹಕರು ಎಟಿಎಂ ಕಾರ್ಡ್ ವಹಿವಾಟನ್ನು ಆನ್ ಅಥವಾ ಆಫ್ ಮಾಡಬಹುದು.
  • 6. ಗ್ರಾಹಕರು ಬಯಸಿದಾಗಲೆಲ್ಲಾ ತನ್ನ ಎಟಿಎಂ ವಹಿವಾಟಿನ ಮಿತಿಯನ್ನು ನಿರ್ಧರಿಸಬಹುದು.
  • 7. ಕಾರ್ಡ್‌ನ ಸ್ಥಿತಿಯಲ್ಲಿ ಏನಾದರೂ ಬದಲಾವಣೆಗಳಿದ್ದರೆ ಕಾರ್ಡ್‌ಹೋಲ್ಡರ್ ತಕ್ಷಣವೇ ಎಸ್‌ಎಂಎಸ್ ಎಚ್ಚರಿಕೆಯನ್ನು ಪಡೆಯಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ