ಆ್ಯಪ್ನಗರ

ತೆರಿಗೆ ವಂಚಕರರಿನ್ನು ದಂಡ ಕಟ್ಟಿ ತಪ್ಪಿಸಿಕೊಳ್ಳಲಾಗದು!

ವಿದೇಶಿ ಬ್ಯಾಂಕ್‌ ಖಾತೆಗಳಲ್ಲಿ ಕಾಳ ಧನವನ್ನು ಹೂಡಿಕೆ ಮಾಡಿರುವವರು, ಬೇನಾಮಿ ವರ್ಗಾವಣೆ, ನಕಲಿ ಕಂಪನಿಗಳನ್ನು ನಡೆಸುತ್ತಿರುವರು ಇನ್ನು ಮುಂದೆ ...

THE ECONOMIC TIMES 18 Jun 2019, 5:00 am
ಮುಂಬಯಿ: ವಿದೇಶಿ ಬ್ಯಾಂಕ್‌ ಖಾತೆಗಳಲ್ಲಿ ಕಾಳ ಧನವನ್ನು ಹೂಡಿಕೆ ಮಾಡಿರುವವರು, ಬೇನಾಮಿ ವರ್ಗಾವಣೆ, ನಕಲಿ ಕಂಪನಿಗಳನ್ನು ನಡೆಸುತ್ತಿರುವರು ಇನ್ನು ಮುಂದೆ ಕೇವಲ ದಂಡ ಕಟ್ಟಿ ವಿಚಾರಣೆಯಿಂದ ತಪ್ಪಿಸಿಕೊಳ್ಳದಂತೆ ಸರಕಾರ ನಿಯಮಾವಳಿಗಳನ್ನು ಬಿಗಿಗೊಳಿಸಿದೆ.
Vijaya Karnataka Web new income tax rules from today no escape just by paying penalty
ತೆರಿಗೆ ವಂಚಕರರಿನ್ನು ದಂಡ ಕಟ್ಟಿ ತಪ್ಪಿಸಿಕೊಳ್ಳಲಾಗದು!


ಹೊಸ ನಿಯಮಗಳು ಸೋಮವಾರದಿಂದ ಅನ್ವಯವಾಗಲಿದ್ದು, 2014ರ ಡಿಸೆಂಬರ್‌ನಲ್ಲಿ ಜಾರಿಗೊಳಿಸಿದ್ದ ಹಳೆಯ ಮಾರ್ಗದರ್ಶಿಯನ್ನು ಬದಲಿಸಲಾಗಿದೆ. 'ನೇರ ತೆರಿಗೆ ಕಾನೂನುಗಳ ಅಡಿಯಲ್ಲಿ ಅಪರಾಧಗಳ ಇತ್ಯರ್ಥ' ಎಂಬ 30 ಪುಟಗಳ ಮಾರ್ಗದರ್ಶಿ ಜೂನ್‌ 17ರಿಂದ ಜಾರಿಯಾಗಿದೆ. ಇದರಲ್ಲಿ ವಿದೇಶಗಳಲ್ಲಿ ಅಕ್ರಮ ಆದಾಯ, ಬೇನಾಮಿ ವರ್ಗಾವಣೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

ಹೊಸ ಮಾರ್ಗದರ್ಶಿಯ ಮುಖ್ಯಾಂಶಗಳು
- ವಿದೇಶಿ ಬ್ಯಾಂಕ್‌ ಖಾತೆಗಳಲ್ಲಿ ಅಕ್ರಮ ಸಂಪತ್ತು ಮತ್ತು ಆಸ್ತಿ ಹೊಂದಿರುವವರು ದಂಡ ಕಟ್ಟಿ ವಿಚಾರಣೆಯಿಂದ ತಪ್ಪಿಸಿಕೊಳ್ಳುವಂತಿಲ್ಲ.
-ಬೇನಾಮಿ ವರ್ಗಾವನೆ ಕೇಸ್‌ಗಳಲ್ಲಿಯೂ ದಂಡ ಪಾವತಿಸಿ ವಿಚಾರಣೆಯಿಂದ ದೂರವಿರಲು ಅವಕಾಶ ಇಲ್ಲ.
-ನಕಲಿ ಕಂಪನಿ, ಬೋಗಸ್‌ ಇನ್‌ವಾಯ್ಸ್‌ ಇತ್ಯಾದಿಗಳ ಮೂಲಕ ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ವಿಚಾರಣೆ ಎದುರಿಸಲೇಬೇಕು.

''ಈ ಹಿಂದೆ ವಿದೇಶಿ ಬ್ಯಾಂಕ್‌ ಖಾತೆಗಳಲ್ಲಿ ಅಕ್ರಮ ಠೇವಣಿ, ಸಂಪತ್ತು ಇಟ್ಟಿದ್ದವರು ತೆರಿಗೆ ಮತ್ತು ದಂಡ ಕಟ್ಟಿದರೆ ವಿಚಾರಣೆ ಎದುರಿಸುವ ಅಗತ್ಯ ಇರುತ್ತಿರಲಿಲ್ಲ. ಸಿಬಿಡಿಟಿ ಕಾನೂನುಗಳ ಅಡಿಯಲ್ಲಿ ಇದಕ್ಕೆ ಅನುಮತಿ ಇತ್ತು. ಆದರೆ ಈಗ ಹಾಗಿಲ್ಲ. ಆರೋಪಿಗಳು ವಿಚಾರಣೆಗೆ ಕೂಡ ಒಳಗಾಗಬೇಕಾಗುತ್ತದೆ'' ಎನ್ನುತ್ತಾರೆ ತೆರಿಗೆ ತಜ್ಞ ಸಂದೀಪ್‌ ಬಾಲಾ.

ಕಾಳ ಧನಿಕರು ನಕಲಿ ಕಂಪನಿಗಳನ್ನು ಸೃಷ್ಟಿಸಿ ಕಪ್ಪುಹಣವನ್ನು ಷೇರು ಬಂಡವಾಳದ ರೂಪದಲ್ಲಿ ಹೂಡಿಕೆ ಮಾಡುತ್ತಾರೆ. ತೆರಿಗೆ ತಪ್ಪಿಸುವುದು ಇದರ ಮತ್ತೊಂದು ಉದ್ದೇಶ.ನಕಲಿ ಸಾಲಗಳನ್ನೂ ಪಡೆಯಲಾಗುತ್ತದೆ. ಇದನ್ನು ತಡೆಯಲು ಕಾನೂನು ಕ್ರಮವನ್ನು ಬಿಗಿಗೊಳಿಸಲಾಗಿದೆ.

2017ರ ನವೆಂಬರ್‌ಗೆ ಅಂತ್ಯವಾಗುವಂತೆ 8 ತಿಂಗಳಿನ ಅವಧಿಯಲ್ಲಿ ಸಾವಿರಾರು ಆದಾಯ ತೆರಿಗೆ ವಂಚನೆ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಅನೇಕ ಮಂದಿ ತೆರಿಗೆ ಮತ್ತು ದಂಡವನ್ನು ಕಟ್ಟಿ ಮುಂದಿನ ವಿಚಾರಣೆಯಿಂದ ಪಾರಾಗಿದ್ದರು. ಪರಿಷ್ಕೃತ ನೀತಿ ಜಾರಿಯ ನಂತರ ವಿಚಾರಣೆಯ ಪ್ರಕರಣಗಳ ಸಂಖ್ಯೆ ಏರಿಕೆಯಾಗುವ ನಿರೀಕ್ಷೆ ಇದೆ.

ಹೊಸ ಮಾರ್ಗದರ್ಶಿಯಲ್ಲಿ ತೆರಿಗೆ ವಂಚನೆ ಪ್ರಕರಣಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಎ-ವಿಭಾಗದಲ್ಲಿ ಟಿಡಿಎಸ್‌ ಪಾವತಿಸದಿರುವುದು, ಐಟಿಆರ್‌ ಸಲ್ಲಿಸದಿರುವುದು ಇತ್ಯಾದಿಗಳನ್ನು ಪರಿಗಣಿಸಲಾಗುವುದು. ಬಿ-ವಿಭಾಗದಲ್ಲಿ ಉದ್ದೇಶ ಪೂರ್ವಕವಾಗಿ ತೆರಿಗೆ ವಂಚನೆ, ಲೆಕ್ಕಪತ್ರಗಳನ್ನು ತಿರುಚುವುದು ಇತ್ಯಾದಿ ಗಂಭೀರ ಪ್ರಕರಣಗಳಿರುತ್ತವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ