ಆ್ಯಪ್ನಗರ

ಆರ್ಥಿಕ ಸುಧಾರಣೆಗೆ ಒತ್ತು ನೀಡಿ, ಬಾಕಿ ಹಣ ಉಳಿಸಿಕೊಳ್ಳಬೇಡಿ: ನಿರ್ಮಲಾ ಸೀತಾರಾಮನ್‌

ಜಾಗತಿಕ ಆರ್ಥಿಕ ಹಿನ್ನಡೆ ಭಾರತದ ಮೇಲೆ ಭಾರಿ ಪರಿಣಾಮ ಬೀರಿದೆ. ಎಷ್ಟೇ ಕ್ರಮಗಳನ್ನು ತೆಗೆದುಕೊಂಡರೂ ಸುಧಾರಣೆ ಕಾಣದಾಗಿದೆ. ಈ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮ ಕೈಗೊಳ್ಳಲು ನಿರ್ಮಲಾ ಸೀತಾರಾಮನ್‌ ಸೂಚಿಸಿದ್ದಾರೆ.

Vijaya Karnataka Web 27 Sep 2019, 9:22 pm
ಹೊಸದಿಲ್ಲಿ: ಮುಂದಿನ ನಾಲ್ಕು ತ್ರೈಮಾಸಿಕ ಅವಧಿಗಳಿಗಾಗಿ ಬಂಡವಾಳ ವೆಚ್ಚ ಸಮಗ್ರ ಯೋಜನಾ ವಿವರಗಳನ್ನು ಸಲ್ಲಿಸುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎಲ್ಲಾ ಸಚಿವಾಲಯಗಳಿಗೆ ಇಂದು ಸೂಚಿಸಿದ್ದಾರೆ.
Vijaya Karnataka Web ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್


ಪ್ರಮುಖ ಸಚಿವಾಲಯಗಳ ಕಾರ್ಯದರ್ಶಿಗಳು ಹಾಗೂ ಹಣಕಾಸು ಸಲಹೆಗಾರರೊಂದಿಗೆ ಸಭೆ ನಡೆಸಿದ ನಂತರ ಸಚಿವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಸೇವಾದಾತರಿಗೆ ಯಾವುದೇ ರೀತಿಯ ಬಾಕಿ ಹಣ ಉಳಿಸಿಕೊಳ್ಳದಂತೆ ಪಾವತಿಗಳನ್ನು ಖಾತರಿ ಪಡಿಸಲು ಈ ಸೂಚನೆ ನೀಡಲಾಗಿದೆ ಎಂದರು.

ಸಣ್ಣ ಪ್ರಮಾಣದ ಬಾಕಿ ಪಾವತಿಗಳನ್ನು ಸಹ ತ್ವರಿತವಾಗಿ ಇತ್ಯರ್ಥ ಪಡಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸಲಹೆ ನೀಡಿದರು.

ಸರಕಾರದ ಬಂಡವಾಳ ವೆಚ್ಚ ಸರಿದಾರಿಯಲ್ಲಿದ್ದು, ವಿವಿಧ ಸಚಿವಾಲಯಗಳ ವ್ಯಾಪ್ತಿಗೆ ಬರುವ ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ಇತರ ಏಜೆನ್ಸಿಗಳೊಂದಿಗೂ ಪ್ರತ್ಯೇಕ ಸಭೆ ನಡೆಸುವುದಾಗಿ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ