ಆ್ಯಪ್ನಗರ

ರದ್ದಾದ ನೋಟಿನ ಮೊತ್ತದ ಮಾಹಿತಿ ಇಲ್ಲ

ನೋಟು ಅಮಾನ್ಯೀಕರಣ ಕುರಿತು ಮುಂದಿನ ಮುಂಗಾರು ಅಧಿವೇಶನದಲ್ಲಿ ವರದಿ ಮಂಡಿಸಲಿರುವ ಸಂಸತ್ತಿನ ಹಣಕಾಸು ಸಮಿತಿ, ನೋಟ್‌ ರದ್ಧತಿ ವಿಷಯಕ್ಕೆ ಸಂಬಂಧಿಸಿದಂತೆ ಬುಧವಾರ ಆರ್‌ಬಿಐ ...

ಏಜೆನ್ಸೀಸ್ 13 Jul 2017, 7:34 am

ಹೊಸದಿಲ್ಲಿ: ನೋಟು ಅಮಾನ್ಯೀಕರಣ ಕುರಿತು ಮುಂದಿನ ಮುಂಗಾರು ಅಧಿವೇಶನದಲ್ಲಿ ವರದಿ ಮಂಡಿಸಲಿರುವ ಸಂಸತ್ತಿನ ಹಣಕಾಸು ಸಮಿತಿ, ನೋಟ್‌ ರದ್ಧತಿ ವಿಷಯಕ್ಕೆ ಸಂಬಂಧಿಸಿದಂತೆ ಬುಧವಾರ ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ರಿಂದ ಎರಡನೇ ಬಾರಿ ವಿವರ ಪಡೆಯಿತು.

Vijaya Karnataka Web no information on old notes after demonetisation
ರದ್ದಾದ ನೋಟಿನ ಮೊತ್ತದ ಮಾಹಿತಿ ಇಲ್ಲ


ಸುಮಾರು 3 ಗಂಟೆಗಳ ಕಾಲ ಊರ್ಜಿತ್‌ ಪಟೇಲ್‌ ವಿವರ ನೀಡಿದರು. ಇಷ್ಟೆಲ್ಲ ವಿವರದ ಹೊರತಾಗಿಯೂ ಅವರು ಅಮಾನ್ಯೀಕರಣದ ಬಳಿಕ ಸಂಗ್ರಹವಾದ ಹಳೆಯ ನೋಟುಗಳ ಮೊತ್ತದ ನಿಖರ ಮಾಹಿತಿ ನೀಡಲು ವಿಫಲರಾದರು ಎಂದು ಸಮಿತಿಯ ಕೆಲವು ಸದಸ್ಯರು ತಿಳಿಸಿದ್ದಾರೆ.

ರದ್ದಾದ 500 ಮತ್ತು 1000 ಮುಖಬೆಲೆಯ ನೋಟುಗಳ ಎಣಿಕೆ ಇನ್ನೂ ಮುಗಿದಿಲ್ಲ. ಆರ್‌ಬಿಐನ 15 ಸಾವಿರ ಸಿಬ್ಬಂದಿ ಹಗಲಿರುಳು ಈ ಕಾರ್ಯದಲ್ಲಿ ನಿರತರಾಗಿದ್ದಾರೆ. ಭಾನುವಾರ ಹೊರತುಪಡಿಸಿ ಎಲ್ಲಾ ಸರಕಾರಿ ರಜಾದಿನಗಳಲ್ಲೂ ತಮ್ಮ ಸಿಬ್ಬಂದಿ ಕಾರ್ಯನಿರತರಾಗಿದ್ದಾರೆ ಎಂದು ಪಟೇಲ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ