ಆ್ಯಪ್ನಗರ

ಪಿಪಿಎಫ್‌, ಆರ್‌ಡಿ ಖಾತೆಯಲ್ಲಿ ಕನಿಷ್ಠ ಹೂಡಿಕೆ ಇಲ್ಲದಿದ್ದರೂ ಪೆನಾಲ್ಟಿ ಇಲ್ಲ

ಕೊರೊನಾ ವೈರಸ್‌ ದಾಳಿಯ ಪರಿಣಾಮ ದೇಶಾದ್ಯಂತ ಲಾಕ್‌ಡೌನ್‌ ಇರುವುದರಿಂದ ಸಣ್ಣ ಉಳಿತಾಯಗಾರರಿಗೆ ಖಾತೆಗಳಲ್ಲಿ ಸಕಾಲಕ್ಕೆ ಅಗತ್ಯ ಠೇವಣಿ ಇಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೂಡಿಕೆಗೆ ಹೆಚ್ಚುವರಿ ಕಾಲಾವಧಿಯನ್ನು ನೀಡಲಾಗಿದೆ.

THE ECONOMIC TIMES 9 Apr 2020, 8:53 pm

ಹೊಸದಿಲ್ಲಿ: ಅಂಚೆ ಇಲಾಖೆಯು ನಾನಾ ಸಣ್ಣ ಉಳಿತಾಯ ಯೋಜನೆಗಳಿಗೆ 2019-20ರಲ್ಲಿ ಕನಿಷ್ಠ ಹೂಡಿಕೆಯನ್ನು ಮಾಡದವರಿಗೆ ವಿಧಿಸುವ ದಂಡವನ್ನು ರದ್ದುಪಡಿಸಿದೆ. 2020ರ ಜೂನ್‌ 30ರ ತನಕ ಈ ದಂಡ ರದ್ದತಿ ಅನ್ವಯವಾಗಲಿದೆ.
Vijaya Karnataka Web Post office


ಸಾರ್ವಜನಿಕ ಭವಿಷ್ಯನಿಧಿ (ಪಿಪಿಎಫ್‌), ರಿಕರಿಂಗ್‌ ಡೆಪಾಸಿಟ್‌ (ಆರ್‌.ಡಿ) ಇತ್ಯಾದಿ ಸಣ್ಣ ಉಳಿತಾಯ ಯೋಜನೆಗಳಲ್ಲಿ 2019-20ರ ಸಾಲಿನ ಬಾಬ್ತು ಏಪ್ರಿಲ್‌ ಒಳಗೆ ಕನಿಷ್ಠ ಹೂಡಿಕೆಯನ್ನು ಮಾಡಬೇಕು ಎಂಬ ನಿಯಮಗಳಿದ್ದರೂ, 2020ರ ಜೂನ್‌ 30ರ ತನಕ ಯಾವುದೇ ನವೀಕರಣ ಶುಲ್ಕ ಅಥವಾ ದಂಡ ಪಾವತಿಸದೆ ಹೂಡಿಕೆ ಮಾಡಬಹುದು ಎಂದು ಇಲಾಖೆ ತಿಳಿಸಿದೆ.

ಎಸ್‌ಬಿಐ ಸಾಲ, ಠೇವಣಿಯ ಬಡ್ಡಿದರ ಕಟ್‌: ಉಳಿತಾಯ ಖಾತೆ ಬಡ್ಡಿ ಶೇ.2.75ಕ್ಕೆ ಇಳಿಕೆ!

ಕೊರೊನಾ ವೈರಸ್‌ ದಾಳಿಯ ಪರಿಣಾಮ ದೇಶಾದ್ಯಂತ ಲಾಕ್‌ಡೌನ್‌ ಇರುವುದರಿಂದ ಸಣ್ಣ ಉಳಿತಾಯಗಾರರಿಗೆ ಖಾತೆಗಳಲ್ಲಿ ಸಕಾಲಕ್ಕೆ ಅಗತ್ಯ ಠೇವಣಿ ಇಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೂಡಿಕೆಗೆ ಹೆಚ್ಚುವರಿ ಕಾಲಾವಧಿಯನ್ನು ನೀಡಲಾಗಿದೆ. ಪಿಪಿಎಫ್‌ನಲ್ಲಿ ವರ್ಷಕ್ಕೆ ಕನಿಷ್ಠ 500 ರೂ. ಹೂಡಿಕೆ ಅಗತ್ಯ. ಒಂದು ವೇಳೆ ಅಷ್ಟು ಮೊತ್ತ ಪಾವತಿಸದಿದ್ದರೆ ಖಾತೆ ನಿಷ್ಕ್ರಿಯ ಎಂದು ಪರಿಗಣನೆಯಾಗುತ್ತದೆ. ನಂತರ ವರ್ಷಕ್ಕೆ 50 ರೂ. ಗಳಂತೆ ದಂಡ ಕಟ್ಟಿ ಸಕ್ರಿಯಗೊಳಿಸಬಹುದು. ಇದೇ ರೀತಿ ಆರ್‌.ಡಿಗೂ ವಿಳಂಬ ಪಾವತಿಗೆ ದಂಡ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ