ಆ್ಯಪ್ನಗರ

ಚಿನ್ನ ಕ್ಷಮಾದಾನ ಯೋಜನೆ ಪ್ರಸ್ತಾಪ ಇಲ್ಲ, ಕಾಳಧನಿಕರಿಗೆ ನಿರಾಸೆ

ಕಾಳಧನಿಕರು ಬಂಗಾರದ ಮೂಲಕ ಸಂಗ್ರಹಿಸಿರುವ ಅಕ್ರಮ ಸಂಪತ್ತನ್ನು ಘೋಷಿಸಿ, ತೆರಿಗೆ ಪಾವತಿಸಿದರೆ, ವಿಚಾರಣೆಯಿಂದ ವಿನಾಯಿತಿ ನೀಡುವ ಕ್ಷಮಾದಾನ ಯೋಜನೆಯೊಂದನ್ನು ಸರಕಾರ ಜಾರಿಗೊಳಿಸಲಿದೆ ಎಂದು ಈ ಹಿಂದೆ ವರದಿಯಾಗಿತ್ತು.

PTI 31 Oct 2019, 8:09 pm
ಹೊಸದಿಲ್ಲಿ: ಕೇಂದ್ರ ಸರಕಾರ ಬಂಗಾರದ ರೂಪದಲ್ಲಿರುವ ಕಾಳಧನ ನಿಯಂತ್ರಿಸಲು ಚಿನ್ನದ ಕ್ಷಮಾದಾನ (ಆಮ್ನೆಸ್ಟಿ) ಯೋಜನೆ ಮಾದರಿಯ ಪ್ರಸ್ತಾಪವನ್ನು ಹೊಂದಿಲ್ಲ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.
Vijaya Karnataka Web Gold


ಕಾಳಧನಿಕರು ಬಂಗಾರದ ಮೂಲಕ ಸಂಗ್ರಹಿಸಿರುವ ಅಕ್ರಮ ಸಂಪತ್ತನ್ನು ಘೋಷಿಸಿ, ತೆರಿಗೆ ಪಾವತಿಸಿದರೆ, ವಿಚಾರಣೆಯಿಂದ ವಿನಾಯಿತಿ ನೀಡುವ ಕ್ಷಮಾದಾನ ಯೋಜನೆಯೊಂದನ್ನು ಸರಕಾರ ಜಾರಿಗೊಳಿಸಲಿದೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಇದನ್ನು ಮೂಲಗಳು ನಿರಾಕರಿಸಿದ್ದು, ಬಜೆಟ್‌ ಸಮೀಪಿಸುತ್ತಿರುವ ವೇಳೆ ಇಂಥ ವದಂತಿಗಳು ಸಹಜ ಎಂದು ಹೇಳಿವೆ.

ಹಳದಿ ಲೋಹ ಭಾರತೀಯರ ಅಚ್ಚು ಮೆಚ್ಚಿನ ಸರಕಾಗಿದ್ದು, ಅಕ್ರಮ ಸಂಪತ್ತನ್ನು ಬಚ್ಚಿಡಲೂ ಇದನ್ನು ದೇಶದಲ್ಲಿ ಉಪಯೋಗಿಸಲಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ಭಾರತೀಯರು ಒಟ್ಟು 20,000 ಟನ್‌ ಚಿನ್ನ ಹೊಂದಿದ್ದಾರೆ. ಆದರೆ ಅಕ್ರಮ ಆಮದು, ಪಿತ್ರಾರ್ಜಿತವಾಗಿ ಲಭಿಸಿರುವ ಬಂಗಾರ ಸೇರಿದರೆ ಇದರ ಪ್ರಮಾಣ 25,000-30,000 ಟನ್‌ ಆಗುವ ನಿರೀಕ್ಷೆ ಇದೆ.

ಕೇಂದ್ರ ಸರಕಾರ ಅಮ್ನೆಸ್ಟಿ ಪ್ರಸ್ತಾಪ ಇಲ್ಲ ಎಂದಿರುವುದರಿಂದ ಕಾಳಧನಿಕರಿಗೆ ನಿರಾಸೆಯಾಗಿದೆ. ಅಕ್ರಮ ಸಂಪತ್ತನ್ನು ಸಕ್ರಮಗೊಳಿಸಬಹುದು ಎಂದು ಕಾದಿದ್ದವರು ಇದರಿಂದ ಪೆಚ್ಚು ಮೋರೆ ಹಾಕುವಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ