ಆ್ಯಪ್ನಗರ

ಮೊರಾಟೋರಿಯಂ ಅವಧಿ ವಿಸ್ತರಣೆಗೆ ಆರ್‌ಬಿಐ ನಕಾರ

ಸಾಲ ಮರು ಪಾವತಿ ಅವಧಿ ಮುಂದೂಡಿದರೆ ಸಾಲದ ಶಿಸ್ತಿಗೆ ಭಂಗ ಬರುತ್ತದೆ ಎಂದು ವಾದಿಸಿರುವ ಆರ್‌ಬಿಐ, ಚಕ್ರ ಬಡ್ಡಿ ಮನ್ನಾ ಮಾಡುವುದೂ ಬ್ಯಾಂಕ್‌ಗಳಿಗೆ ವೆಚ್ಚದಾಯಕ ಎಂದು ಸುಪ್ರೀಂ ಕೋರ್ಟ್‌ಗೆ ಹೇಳಿದೆ.

THE ECONOMIC TIMES 10 Oct 2020, 9:19 pm
ಹೊಸದಿಲ್ಲಿ: ಕೋವಿಡ್‌ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಾಲದ ಮರು ಪಾವತಿಯ ಅವಧಿ ಮುಂದೂಡಿಕೆಯನ್ನು 6 ತಿಂಗಳಿನಿಂದಾಚೆಗೆ ವಿಸ್ತರಿಸುವುದು ಸಾಲದ ಶಿಸ್ತಿಗೆ ಭಂಗ ತರಲಿದೆ. ಹಾಗೂ ಆರ್ಥಿಕತೆಗೆ ಧಕ್ಕೆಯಾಗುವ ಅಪಾಯ ಇದೆ ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿಪಾದಿಸಿದೆ.
Vijaya Karnataka Web RBI


ಸಾಲದ ಬಡ್ಡಿಯ ಮೇಲಿನ ಬಡ್ಡಿಯನ್ನು (ಚಕ್ರ ಬಡ್ಡಿ) ಮನ್ನಾ ಮಾಡುವುದರಿಂದಲೂ ಭಾರಿ ಆರ್ಥಿಕ ವೆಚ್ಚಕ್ಕೆ ಕಾರಣವಾಗಲಿದೆ. ಇದನ್ನು ಬ್ಯಾಂಕಿಂಗ್‌ ವ್ಯವಸ್ಥೆಗೆ ಭರಿಸಲು ಕಷ್ಟಕರವಾಗಬಹುದು. ಠೇವಣಿದಾರರ ಮೇಲೆ ಇದು ಪ್ರಭಾವ ಬೀರಬಹುದು ಎಂದು ತಿಳಿಸಿದೆ.

ದೀರ್ಘಕಾಲ ಸಾಲ ಮರು ಪಾವತಿಯ ಅವಧಿಯನ್ನು ಮುಂದೂಡಿದರೆ, ಸಾಲಗಾರರ ಶಿಸ್ತು, ವರ್ತನೆಯ ಮೇಲೆ ನಕಾರಾತ್ಮಕ ಪ್ರಭಾವ ಬೀರಬಹುದು. ಇಎಂಐ ಮತ್ತೆ ಆರಂಭವಾದಾಗ ಕಟ್ಟದೆ ಇರುವ ಪ್ರವೃತ್ತಿಯೂ ಹೆಚ್ಚಬಹುದು ಎಂದು ಹೇಳಿದೆ.
ಕೋವಿಡ್‌-19 ಬಿಕ್ಕಟ್ಟಿನ ನಂತರ ಸಾಲ ಪುನಾರಚನೆಗೆ ಸಂಬಂಧಿಸಿ ಕೆ.ವಿ ಕಾಮತ್‌ ನೇತೃತ್ವದ ಸಮಿತಿ ಸಲ್ಲಿಸಿರುವ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಆರ್‌ಬಿಐ, 6 ತಿಂಗಳಿನ ನಂತರವೂ ಸಾಲ ಮರು ಪಾವತಿ ಅವಧಿಯ ವಿಸ್ತರಣೆ ಸಮಂಜಸವಲ್ಲ ಎಂದು ಹೇಳಿದೆ.

ಬಡ್ಡಿ ಮನ್ನಾ ವಿಷಯದಲ್ಲಿ ಶೀಘ್ರ ನಿರ್ಧಾರ, ಮೊರಾಟೋರಿಯಂ ಪಡೆದವರಿಗೆ ಸಿಗುತ್ತಾ ರಿಲೀಫ್‌?
ಎನ್‌ಪಿಎ ವರ್ಗೀಕರಣ ಬ್ಯಾಂಕ್‌ಗಳಿಗೆ ಬಿಡಿ

ಸುಪ್ರಿಂಕೋರ್ಟ್‌ ಕಳೆದ ಸೆಪ್ಟೆಂಬರ್‌ 4ರಂದು, ಮುಂದಿನ ಆದೇಶದ ತನಕ ಯಾವುದೇ ಸಾಲದ ಖಾತೆಯನ್ನು ಅನುತ್ಪಾದಕ ಸಾಲ (ಎನ್‌ಪಿಎ) ಎಂದು ಘೋಷಿಸುವಂತಿಲ್ಲ ಎಂದು ಬ್ಯಾಂಕ್‌ಗಳಿಗೆ ನಿರ್ಬಂಧಿಸಿತ್ತು. ಆದರೆ ಈ ನಿರ್ಬಂಧವನ್ನು ತೆರವುಗೊಳಿಸಬೇಕು ಎಂದು ಆರ್‌ಬಿಐ ಮನವಿ ಮಾಡಿದೆ. ಸುಪ್ರೀಂ ಕೋರ್ಟ್‌ ಮುಂದಿನ ವಿಚಾರಣೆಯನ್ನು ಅಕ್ಟೋಬರ್‌ 13ಕ್ಕೆ ನಿಗದಿಪಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ