ಆ್ಯಪ್ನಗರ

Dasara - ಹಬ್ಬದ ಸೀಸನ್‌ನಲ್ಲಿ ಹೆಚ್ಚಿದ ಮನೆ ಖರೀದಿ

ಹಬ್ಬದ ಸೀಸನ್‌ಗಳಲ್ಲಿ ಅನೇಕ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಬೋನಸ್‌, ಸಂಬಳ ಏರಿಕೆ ಇತ್ಯಾದಿಗಳನ್ನು ಮಾಡುವ ಮೂಲಕ ಅವರ ಆರ್ಥಿಕ ಮಟ್ಟ ಚೇತರಿಕೆ ಕಾಣುವಂತೆ ಮಾಡುತ್ತವೆ. ಹೆಚ್ಚಿನ ಕಾರ್ಪೊರೇಟ್‌ ಉದ್ಯಮಗಳಲ್ಲಿಹಬ್ಬದ ಸಂದರ್ಭದಲ್ಲಿಯೇ ಸಂಬಳ ಏರಿಕೆ ಪ್ರಕ್ರಿಯೆ ನಡೆಯುತ್ತದೆ. ಇದು ಕೂಡ ಜನರಿಗೆ ರಿಯಲ್‌ ಎಸ್ಟೇಟ್‌ನಲ್ಲಿಹೂಡಿಕೆ ಮಾಡಲು ಸಹಾಯವಾಗುತ್ತದೆ. ಕೊರೊನಾ ಸಾಂಕ್ರಾಮಿಕದ ನಂತರ ಮನೆ ಖರೀದಿಗೆ ಹೆಚ್ಚಿನ ಜನರು ಒಲವು ತೋರುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿಕೂಡಿಟ್ಟ ಹಣ, ಮಾಡಿದ ಯೋಜನೆಗಳು ಸಹ ಈ ನಿಟ್ಟಿನಲ್ಲಿಕೆಲಸ ಮಾಡಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

Edited byಚೇತನ್ ಓ.ಆರ್. | Vijaya Karnataka Web 30 Sep 2022, 10:16 am
ಬೆಂಗಳೂರು: ಭಾರತೀಯರು ಹಬ್ಬದ ಸೀಸನ್‌ನಲ್ಲಿಮನೆ ಖರೀದಿ, ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿಹಣ ಹೂಡಿಕೆ ಮಾಡಲು ಹೆಚ್ಚು ಉತ್ಸಾಹ ತೋರುತ್ತಾರೆ. ಈ ಸಮಯ ಅತ್ಯಂತ ಮಂಗಳಕರವಾಗಿರುವ ಕಾರಣ ಚಿನ್ನ, ಕಾರು, ಆಸ್ತಿ ಖರೀದಿಗೆ ಹೆಚ್ಚು ಸೂಕ್ತವೆನ್ನಲಾಗುತ್ತದೆ. ಆದ್ದರಿಂದ ದಸರಾದಿಂದ ಆರಂಭವಾಗಿ ದೀಪಾವಳಿವರೆಗೆ ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿಹೆಚ್ಚು ಮಂದಿ ಹಣ ಹೂಡಿಕೆ ಮಾಡುವ ಟ್ರೆಂಡ್‌ ಕಂಡುಬಂದಿದೆ.
Vijaya Karnataka Web Increase in home buyers this festival season
ಸಾಂದರ್ಭಿಕ ಚಿತ್ರ


ಶುಭಾರಂಭ

ಹಬ್ಬದ ಸಮಯದಲ್ಲಿಖರೀದಿಯ ವಿಷಯದಲ್ಲಿಭಾರತೀಯರು ಯಾವಾಗಲೂ ಒಂದು ಹೆಜ್ಜೆ ಮುಂದಿರುತ್ತಾರೆ. ಪ್ರಸ್ತುತ ಹಣದುಬ್ಬರದ ಕಾರಣದಿಂದ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೂ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಇದು ಗ್ರಾಹಕರ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಈ ನಡುವೆಯೂ ಮನೆ ಕೊಳ್ಳುವವರ ಸಂಖ್ಯೆ ಏರಿಕೆಯಾಗುತ್ತಿದೆ. ಖರೀದಿದಾರರಿಗೆ ಬೆಲೆ ಏರಿಕೆಯ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸುವ ನಿಟ್ಟಿನಲ್ಲಿಯೂ ಹಬ್ಬಗಳ ಸೀಸನ್‌ ಪ್ರಾಮುಖ್ಯತೆ ಪಡೆಯುತ್ತದೆ. ಯಾಕೆಂದರೆ ಈ ಸೀಸನ್‌ ಜನರಲ್ಲಿಹೆಚ್ಚು ಧನಾತ್ಮಕ ಭಾವನೆಗಳನ್ನು ಮೂಡಿಸುತ್ತದೆ. ಈ ಸಮಯದಲ್ಲಿಖರೀದಿ ಮಾಡುವುದು ಅದೃಷ್ಟ, ಆರೋಗ್ಯ ಮತ್ತು ಸಂಪತ್ತನ್ನು ಹೆಚ್ಚಿಸಿಕೊಳ್ಳುವುದು, ಸಕಾರಾತ್ಮಕತೆಯ ಜತೆಗೆ ಸಂತೋಷವನ್ನು ನೀಡುತ್ತದೆ ಎನ್ನಲಾಗಿದೆ. ಯಾವುದೇ ಶುಭಾರಂಭಕ್ಕೂ ಹಬ್ಬದ ಸೀಸನ್‌ ಉತ್ತಮ ಸಮಯ. ಆದ್ದರಿಂದ ಮನೆ, ಆಸ್ತಿ ಕೊಳ್ಳುವವರಿಗೂ ಇದು ಉತ್ತಮ ಆರಂಭವಾಗಿದೆ.

Mysuru Dasara | ಯುವ ದಸರಾದಲ್ಲಿ ಕನ್ನಿಕಾ ಕಪೂರ್ ಗಾಯನ ಝಲಕ್: ಕುಣಿದು ಕುಪ್ಪಳಿಸಿದ ಫ್ಯಾನ್ಸ್
ಆಕರ್ಷಕ ಕೊಡುಗೆ

ಹಬ್ಬದ ಸಮಯದಲ್ಲಿಗ್ರಾಹಕರಿಗೆ ಉತ್ತಮ ಆಫರ್‌ ನೀಡುವ ಮೂಲಕ ಅವರನ್ನು ಆಕರ್ಷಿಸುವ ಕೆಲಸವನ್ನು ಅನೇಕ ಸಂಸ್ಥೆಗಳು ಮಾಡುತ್ತವೆ. ರಿಯಲ್‌ ಎಸ್ಟೇಟ್‌ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಮನೆ ಖರೀದಿ ಮಾಡಲು ಬಯಸುವವರಿಗೂ ಫೆಸ್ಟಿವಲ್‌ ಸೀಸನ್‌ನಲ್ಲಿತರಹೇವಾರಿ ಆಫರ್‌ಗಳನ್ನು ನೀಡಲಾಗುತ್ತದೆ. ಜನರು ವಿಶೇಷ ರಿಯಾಯಿತಿಗಳನ್ನು ಪಡೆದುಕೊಳ್ಳುವ ಜತೆಗೆ ಈ ಸಮಯದಲ್ಲಿಬ್ಯಾಂಕ್‌ಗಳು ಸಹ ಕಡಿಮೆ ಬಡ್ಡಿದರದ ಸಾಲಗಳನ್ನು ನೀಡಲು ಮುಂದಾಗುತ್ತವೆ.

ಬೋನಸ್‌ ಭಾಗ್ಯ

ಹಬ್ಬದ ಸೀಸನ್‌ಗಳಲ್ಲಿ ಅನೇಕ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಬೋನಸ್‌, ಸಂಬಳ ಏರಿಕೆ ಇತ್ಯಾದಿಗಳನ್ನು ಮಾಡುವ ಮೂಲಕ ಅವರ ಆರ್ಥಿಕ ಮಟ್ಟ ಚೇತರಿಕೆ ಕಾಣುವಂತೆ ಮಾಡುತ್ತವೆ. ಹೆಚ್ಚಿನ ಕಾರ್ಪೊರೇಟ್‌ ಉದ್ಯಮಗಳಲ್ಲಿಹಬ್ಬದ ಸಂದರ್ಭದಲ್ಲಿಯೇ ಸಂಬಳ ಏರಿಕೆ ಪ್ರಕ್ರಿಯೆ ನಡೆಯುತ್ತದೆ. ಇದು ಕೂಡ ಜನರಿಗೆ ರಿಯಲ್‌ ಎಸ್ಟೇಟ್‌ನಲ್ಲಿಹೂಡಿಕೆ ಮಾಡಲು ಸಹಾಯವಾಗುತ್ತದೆ. ಕೊರೊನಾ ಸಾಂಕ್ರಾಮಿಕದ ನಂತರ ಮನೆ ಖರೀದಿಗೆ ಹೆಚ್ಚಿನ ಜನರು ಒಲವು ತೋರುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿಕೂಡಿಟ್ಟ ಹಣ, ಮಾಡಿದ ಯೋಜನೆಗಳು ಸಹ ಈ ನಿಟ್ಟಿನಲ್ಲಿಕೆಲಸ ಮಾಡಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಲೇಖಕರ ಬಗ್ಗೆ
ಚೇತನ್ ಓ.ಆರ್.
ಪ್ರಸ್ತುತ, ವಿಜಯ ಕರ್ನಾಟಕ ವೆಬ್ ನಲ್ಲಿ ಪತ್ರಕರ್ತನಾಗಿ 2022ರಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಲ್ಲಿ ತುಮಕೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ 5ನೇ ರ‍್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಮೈಸೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಜಿಲ್ಲಾ ಸುದ್ದಿಗಳಿಂದ ಹಿಡಿದು ಕ್ರೀಡೆ, ದೇಶ- ವಿದೇಶ, ಸಿನಿಮಾ, ವಿಜ್ಞಾನ- ತಂತ್ರಜ್ಞಾನ ಇತ್ಯಾದಿ ವೈವಿಧ್ಯಯಮ ವಿಷಯಗಳ ಬಗ್ಗೆ ಬರೆಯುವ ಇವರಿಗೆ, ನಾನಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈವರೆಗೆ 16 ವರ್ಷ ಕೆಲಸ ಮಾಡಿದ ಅನುಭವವಿದೆ. ಫೋಟೋಗ್ರಫಿ ಇವರ ಅಚ್ಚುಮೆಚ್ಚಿನ ಹವ್ಯಾಸ. ಸಿನಿಮಾ, ಸಾಕ್ಷ್ಯಚಿತ್ರ, ಸಾಹಿತ್ಯ, ವಿಡಿಯೋ ಸಂಕಲನ, ಪತ್ರಿಕೆ ಪುಟ ವಿನ್ಯಾಸ, ಹಾಡುಗಾರಿಕೆ, ಚಿತ್ರಕಲೆ, ಅನಿಮೇಶನ್, ಸಂಗೀತದಲ್ಲಿಯೂ ಆಸಕ್ತಿಯಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ