ಆ್ಯಪ್ನಗರ

ರತನ್‌ ಟಾಟಾ ವಿರುದ್ಧ ದಾಖಲಿಸಿದ್ದ ಎಲ್ಲ ಮಾನಹಾನಿ ಪ್ರಕರಣಗಳನ್ನೂ ಹಿಂಪಡೆದ ನುಸ್ಲಿವಾಡಿಯಾ

ಮುಂಬಯಿ ಟಾಟಾ ಗ್ರೂಪ್‌ ಮುಖ್ಯಸ್ಥ ರತನ್‌ ಟಾಟಾ ಮತ್ತು ಇತರರ ವಿರುದ್ಧ ದಾಖಲಿಸಿದ್ದ 3,000 ಕೋಟಿ ರೂ. ಮೌಲ್ಯದ ಎಲ್ಲ ಮಾನಹಾನಿ ಪ್ರಕರಣಗಳನ್ನೂ ಬಾಂಬೆ ಡೈಯಿಂಗ್‌ ಅಧ್ಯಕ್ಷ ನುಸ್ಲಿವಾಡಿಯಾ ವಾಪಸ್‌ ಪಡೆದುಕೊಂಡಿದ್ದಾರೆ.

Vijaya Karnataka Web 14 Jan 2020, 4:41 pm
ಮುಂಬೈ: ಮುಂಬಯಿ ಟಾಟಾ ಗ್ರೂಪ್‌ ಮುಖ್ಯಸ್ಥ ರತನ್‌ ಟಾಟಾ ಮತ್ತು ಇತರರ ವಿರುದ್ಧ ದಾಖಲಿಸಿದ್ದ 3,000 ಕೋಟಿ ರೂ. ಮೌಲ್ಯದ ಎಲ್ಲ ಮಾನಹಾನಿ ಪ್ರಕರಣಗಳನ್ನೂ ಬಾಂಬೆ ಡೈಯಿಂಗ್‌ ಅಧ್ಯಕ್ಷ ನುಸ್ಲಿ ವಾಡಿಯಾ ವಾಪಸ್‌ ಪಡೆದುಕೊಂಡಿದ್ದಾರೆ.
Vijaya Karnataka Web nusliwada


ಪ್ರಕರಣಗಳನ್ನು ವಾಪಸ್‌ ಪಡೆಯಲು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯ­ಮೂರ್ತಿ ಎಸ್‌.ಎ.ಬೊಬ್ಡೆ ನೇತೃತ್ವದ ನ್ಯಾಯಪೀಠ ಸಮ್ಮತಿ ಸೂಚಿಸಿದೆ. ವಾಡಿಯಾ ಮತ್ತು ಟಾಟಾ ಅವರು ಪರಸ್ಪರ ಮಾತುಕತೆ ಮೂಲಕ ಭಿನ್ನಾಭಿಪ್ರಾಯ­ಗಳನ್ನು ಬಗೆಹರಿ­ಸಿ­­ಕೊಳ್ಳ­ಬೇಕು ಎಂದು ಜನವರಿ 6ರಂದು ಕೋರ್ಟ್‌ ತಿಳಿಸಿತ್ತು.

ವಾಡಿಯಾ ಅವರನ್ನು ಅವಹೇಳನ ಮಾಡುವ ಉದ್ದೇಶ ಇರಲಿಲ್ಲ ಎಂದು ಟಾಟಾ ಮತ್ತು ಇತರರು ನ್ಯಾಯಾಲಯಕ್ಕೆ ತಿಳಿಸಿದ ನಂತರ ಎಲ್ಲ ಮಾನಹಾನಿ ಪ್ರಕರಣವನ್ನು ವಾಡಿಯಾ ಹಿಂಪಡೆದಿದ್ದಾರೆ. ವಾಡಿಯಾ-ಟಾಟಾ ಜಟಾಪಟಿ ಟಾಟಾ ಸಮೂಹದ ನಾನಾ ಕಂಪನಿಗಳಲ್ಲಿ ನಿರ್ದೇಶಕರಾಗಿದ್ದ ನುಸ್ಲಿವಾಡಿಯಾ ಅವರನ್ನು 2016ರಲ್ಲಿ ಆಡಳಿತ ಮಂಡಳಿ ಪದಚ್ಯುತಗೊಳಿಸಿತ್ತು. ವಾಡಿಯಾ ಮತ್ತು ರತನ್‌ ಟಾಟಾ ನಡುವಿನ ಭಿನ್ನಾಭಿಪ್ರಾಯಗಳು ನ್ಯಾಯಾಲಯದ ಮೆಟ್ಟಿಲೇರಿತ್ತು. ತಮ್ಮ ವಿರುದ್ಧ ರತನ್‌ ಟಾಟಾ ಮತ್ತು ಇತರರು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ವಾಡಿಯಾ ದೂರಿ 3,000 ಕೋಟಿ ರೂ. ಮೌಲ್ಯದ ಕ್ರಿಮಿನಲ್‌ ಮಾನಹಾನಿ ಪ್ರಕರಣಗಳನ್ನೂ ದಾಖಲಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ