ಆ್ಯಪ್ನಗರ

ಇನ್ಮುಂದೆ ನಿಮ್ಮ ರೈಡ್‌ ಕ್ಯಾನ್ಸಲ್‌ ಆಗಲ್ಲ, ಬೆಂಗಳೂರಿನಲ್ಲಿ 'ಪ್ರೈಮ್ ಪ್ಲಸ್' ಸೇವೆ ಆರಂಭಿಸಿದ ಓಲಾ

ಆಪ್‌ ಮೂಲಕ ಕ್ಯಾಬ್‌ ಸೇವೆ ನೀಡುವ ಓಲಾ ಕಂಪನಿಯು ಸೋಮವಾರದಿಂದ ಬೆಂಗಳೂರಿನಲ್ಲಿ ಹೊಸ ಪ್ರೀಮಿಯಂ ಸೇವೆಯನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಿದೆ. ಕಂಪನಿ ಸಿಇಒ ಭವಿಶ್ ಅಗರ್ವಾಲ್ ಈ ವಿಷಯ ತಿಳಿಸಿದ್ದು, ಹೊಸ ಆಯ್ಕೆಯು ಆರಂಭದಲ್ಲಿ ಆಯ್ದ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ ಎಂದು ತಿಳಿಸಿದ್ದಾರೆ. ಇದರಲ್ಲಿ ಬುಕ್‌ ಮಾಡಿದ ಕ್ಯಾಬ್‌ ರದ್ದಾಗುವುದಿಲ್ಲ ಎಂದು ಅವರು ಟ್ವೀಟ್‌ನಲ್ಲಿ ಮಾಹಿತಿ ನೀಡಿದ್ದಾರೆ.

Written byಎನ್‌. ಸಚ್ಚಿದಾನಂದ | ET Online 29 May 2023, 6:05 pm

ಹೈಲೈಟ್ಸ್‌:

  • ಸೋಮವಾರದಿಂದ ಬೆಂಗಳೂರಿನಲ್ಲಿ ಹೊಸ ಪ್ರೀಮಿಯಂ ಸೇವೆಯನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಿದ ಓಲಾ
  • ಆಪ್‌ ಮೂಲಕ ಕ್ಯಾಬ್‌ ಸೇವೆ ನೀಡುವ ಓಲಾ ಕಂಪನಿಯಿಂದ ನಗರದಲ್ಲಿ ಹೊಸ ಫೀಚರ್‌
  • ಹೊಸ ಆಯ್ಕೆಯು ಆರಂಭದಲ್ಲಿ ಆಯ್ದ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ ಎಂದ ಸಿಇಒ ಭವಿಶ್ ಅಗರ್ವಾಲ್
  • ಹೊಸ ಫೀಚರ್‌ನಲ್ಲಿ ಬುಕ್‌ ಮಾಡಿದ ಕ್ಯಾಬ್‌ ರದ್ದಾಗುವುದಿಲ್ಲ ಎಂದ ಸಿಇಒ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Ola cab
ಬೆಂಗಳೂರು: ಕ್ಯಾಬ್‌ ಅಗ್ರಗೇಟರ್‌ ಓಲಾ ಕಂಪನಿಯು ಸೋಮವಾರದಿಂದ ಬೆಂಗಳೂರಿನಲ್ಲಿ ಹೊಸ ಪ್ರೀಮಿಯಂ ಸೇವೆಯನ್ನು ಪ್ರಾಯೋಗಿಕವಾಗಿ ಪ್ರಾರಂಭಿಸುತ್ತಿದೆ ಎಂದು ಕಂಪನಿ ಸಿಇಒ ಭವಿಶ್ ಅಗರ್ವಾಲ್ ತಿಳಿಸಿದ್ದಾರೆ. ಈ ಹೊಸ ಆಯ್ಕೆಯು ಆರಂಭದಲ್ಲಿ ಆಯ್ದ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಕಂಪನಿಯ ಹೊಸ ಪ್ರೀಮಿಯಂ ಸೇವೆಗೆ ‘ಪ್ರೈಮ್ ಪ್ಲಸ್’ ಎಂದು ಹೆಸರಿಡಲಾಗಿದೆ ಎಂದು ತಿಳಿಸಿದ್ದಾರೆ. ಇದರ ಪ್ರಯೋಜನಗಳನ್ನು ವಿವರಿಸಿರುವ ಅವರು, ಸೇವೆಯು ‘ಅತ್ಯುತ್ತಮ ಚಾಲಕರು, ಉತ್ಕೃಷ್ಟ ದರ್ಜೆಯ ಕಾರುಗಳು, ಯಾವುದೇ ರದ್ದತಿ ಅಥವಾ ಕಾರ್ಯಾಚರಣೆಯ ತೊಂದರೆಗಳು ಇದರಲ್ಲಿ ಇರುವುದಿಲ್ಲ,’ ಎಂದಿದ್ದಾರೆ.

ಟ್ವೀಟ್‌ನಲ್ಲಿ ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಹಂಚಿಕೊಂಡಿರುವ ಅವರು, “ಓಲಾ ಕ್ಯಾಬ್ಸ್‌ನಿಂದ ಹೊಸ ಪ್ರೀಮಿಯಂ ಸೇವೆಯನ್ನು ಪರೀಕ್ಷಿಸಲಾಗುತ್ತಿದೆ. ಪ್ರೈಮ್ ಪ್ಲಸ್‌ನಲ್ಲಿ ಅತ್ಯುತ್ತಮ ಚಾಲಕರು, ಉತ್ಕೃಷ್ಟ ದರ್ಜೆಯ ಕಾರುಗಳು, ಯಾವುದೇ ರದ್ದತಿ ಅಥವಾ ಕಾರ್ಯಾಚರಣೆಯ ತೊಂದರೆಗಳಿಲ್ಲ. ಇಂದು (ಮೇ 29, ಸೋಮವಾರ) ಬೆಂಗಳೂರಿನಲ್ಲಿ ಆಯ್ದ ಗ್ರಾಹಕರಿಗೆ ಲೈವ್ ಆಗಲಿದೆ. ಇದನ್ನು ಪ್ರಯತ್ನಿಸಿ ನೋಡಿ. ನಾನು ಇದನ್ನು ಆಗಾಗ್ಗೆ ಬಳಸುತ್ತಿದ್ದೇನೆ ಮತ್ತು ನನ್ನ ಅನುಭವಗಳನ್ನು ಇಲ್ಲಿ ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳುತ್ತೇನೆ,” ಎಂದು ಅವರು ತಿಳಿಸಿದ್ದಾರೆ.


ಓಲಾ ಸಿಇಒ ಭವಿಷ್‌ ಅಗರ್‌ವಾಲ್‌ ಅವರು ಕ್ಯಾಬ್ ಸೇವೆಯ ಸ್ಕ್ರೀನ್‌ಶಾಟ್‌ನ್ನೂ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಗ್ರೀನ್ ಸಿಟಿ ಸೂಪರ್‌ ಮಾರ್ಕೆಟ್‌ ಇಮ್ಮಡಿಹಳ್ಳಿಯಿಂದ ಅರಾಕು ಕಾಫಿ 12 ನೇ ಮುಖ್ಯ ರಸ್ತೆಗೆ ಕ್ಯಾಬ್‌ ಬುಕ್‌ ಮಾಡಿರುವುದು ಕಾಣಿಸುತ್ತಿದೆ.

ಈ ಸ್ಕ್ರೀನ್‌ಶಾಟ್‌ನ ಪ್ರಕಾರ, ‘ಮಿನಿ’ ಅಥವಾ ‘ಯಾವುದೇ ಕಾರ್ ಬುಕ್ ಮಾಡಿ’ ವರ್ಗಕ್ಕೆ ಹೋಲಿಸಿದರೆ ಪ್ರೈಮ್ ಪ್ಲಸ್ ಸೇವೆಯ ದರ ಕಡಿಮೆ ಇದೆ. ಪ್ರೈಮ್ ಪ್ಲಸ್ ಅಡಿಯಲ್ಲಿ ಗ್ರಾಹಕರು 455 ರೂ. ದರ ತೋರಿಸುತ್ತಿದ್ದರೆ, ಮಿನಿಕ್ಯಾಬ್ ಗ್ರಾಹಕರಿಗೆ 535 ರೂ. ಶುಲ್ಕ ಕಾಣಿಸುತ್ತಿದೆ. ಯಾವುದಾದರೂ ಕಾರು ವರ್ಗದ ಅಡಿಯಲ್ಲಿ 535 - 664 ರೂ. ನಡುವಿನ ದರ ಇದೆ.

ಭವಿಷ್‌ ಅಗರ್‌ವಾಲ್‌ ಅವರು ಭಾರತವು ‘ಎಐ ಅನ್ನು ತೆರೆದ ಕೈಗಳಿಂದ ಅಳವಡಿಸಿಕೊಳ್ಳಬೇಕು’ ಎಂದು ಹಿಂದೊಮ್ಮೆ ಹೇಳಿದ್ದರು. ಎಐನಂತಹ ತಂತ್ರಜ್ಞಾನದ ಟ್ರೆಂಡ್‌ಗಳು ತುಂಬಾ ವಿಚ್ಛಿದ್ರಕಾರಕವಾಗಿವೆ. ಇದು ಉದ್ಯೋಗಗಳಿಗೆ ಅಪಾಯವನ್ನುಂಟುಮಾಡುತ್ತದೆ ಎಂದು ಜನರು ಭಾವಿಸಬಹುದಾದರೂ, ‘ಉತ್ಪಾದನೆಯನ್ನು ಹೆಚ್ಚಿಸುವ ಬೃಹತ್ ತಂತ್ರಜ್ಞಾನದ ಸಾಧನವಾಗಿ ನಾನು ಇದನ್ನು ನೋಡುತ್ತೇನೆ. ಮತ್ತು ಭಾರತದಲ್ಲಿ ನಾವು, ಆರ್ಥಿಕತೆಯಾಗಿ ಮತ್ತು ಆರ್ಥಿಕತೆಯ ಮಧ್ಯಸ್ಥಗಾರರಾಗಿ ಎಲ್ಲರೂ ಮುಕ್ತವಾಗಿ ಎಐ ಅನ್ನು ಅಳವಡಿಸಿಕೊಳ್ಳಬೇಕು’ ಎಂದು ಭವಿಷ್‌ ಅಗರ್‌ವಾಲ್‌ ಹೇಳಿದ್ದರು.
ಲೇಖಕರ ಬಗ್ಗೆ
ಎನ್‌. ಸಚ್ಚಿದಾನಂದ
2019ರಿಂದ ವಿಜಯ ಕರ್ನಾಟಕ ವೆಬ್‌ನಲ್ಲಿ ಉಪಸಂಪಾದಕರಾಗಿದ್ದಾರೆ. 2015ರಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಇವರು ಸದ್ಯ ‘ವಿಕ’ ವೆಬ್‌ನ ವಾಣಿಜ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ ಇವರ ಆಸಕ್ತಿಯ ಕ್ಷೇತ್ರಗಳಾಗಿವೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ