ಆ್ಯಪ್ನಗರ

ಜಿಎಸ್‌ಟಿ ರೀಫಂಡ್‌ ಸುಲಭಗೊಳಿಸಲು ಒಂದೇ ಪ್ರಾಧಿಕಾರ

ಪ್ರಸ್ತುತ ವ್ಯವಸ್ಥೆಯಲ್ಲಿ ಜಿಎಸ್‌ಟಿ ರೀಫಂಡ್‌ಗೆ ಅನುಮೋದನೆ ನೀಡಲು ಕೇಂದ್ರ ಮತ್ತು ರಾಜ್ಯ ತೆರಿಗೆ ಅಧಿಕಾರಿಗಳ ಎರಡು ಪ್ರಾಧಿಕಾರಗಳಿವೆ. ಇವುಗಳ ಜಾಗದಲ್ಲಿ ಆಗಸ್ಟ್‌ನಿಂದ ಏಕ ಪ್ರಾಧಿಕಾರ ರೂಪುಗೊಳ್ಳಲಿದೆ.

PTI 27 May 2019, 10:02 am
ಹೊಸದಿಲ್ಲಿ: ಜಿಎಸ್‌ಟಿ ರೀಫಂಡ್‌ ಪ್ರಕ್ರಿಯೆಗಳಿಗೆ ಮತ್ತು ಅನುಮೋದನೆಗೆ ಸಂಬಂಧಿಸಿದಂತೆ ಏಕ ಪ್ರಾಧಿಕಾರವನ್ನು ಕೇಂದ್ರ ಹಣಕಾಸು ಸಚಿವಾಲಯವು ಆಗಸ್ಟ್‌ನಲ್ಲಿ ರೂಪಿಸಲಿದೆ. ರಫ್ತುದಾರರಿಗೆ ಜಿಎಸ್‌ಟಿ ರೀಫಂಡ್‌ಗಳನ್ನು ತ್ವರಿತ ಮತ್ತು ಸರಳಗೊಳಿಸುವ ನಿಟ್ಟಿನಲ್ಲಿ ಸಚಿವಾಲಯ ಈ ಕ್ರಮಕ್ಕೆ ಮುಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Vijaya Karnataka Web GST


ಪ್ರಸ್ತುತ ವ್ಯವಸ್ಥೆಯಲ್ಲಿ ಜಿಎಸ್‌ಟಿ ರೀಫಂಡ್‌ಗೆ ಅನುಮೋದನೆ ನೀಡಲು ಕೇಂದ್ರ ಮತ್ತು ರಾಜ್ಯ ತೆರಿಗೆ ಅಧಿಕಾರಿಗಳ ಎರಡು ಪ್ರಾಧಿಕಾರಗಳಿವೆ. ಇವುಗಳ ಜಾಗದಲ್ಲಿ ಆಗಸ್ಟ್‌ನಿಂದ ಏಕ ಪ್ರಾಧಿಕಾರ ರೂಪುಗೊಳ್ಳಲಿದೆ. ಈಗಿನ ವ್ಯವಸ್ಥೆಯಲ್ಲಿ ತೆರಿಗೆದಾರರು ಜಿಎಸ್‌ಟಿ ರೀಫಂಡ್‌ಗೆ ಅರ್ಜಿ ಸಲ್ಲಿಸಿದರೆ, ಶೇ.50ರಷ್ಟನ್ನು ಕೇಂದ್ರ ಮತ್ತು ಉಳಿದದ್ದನ್ನು ರಾಜ್ಯ ತೆರಿಗೆ ಅಧಿಕಾರಿಗಳು ಪೂರ್ಣ ಪರಿಶೀಲನೆ ಬಳಿಕ ಬಿಡುಗಡೆ ಮಾಡುತ್ತಾರೆ. ಜಿಎಸ್‌ಟಿ ತೆರಿಗೆದಾರರಿಗೆ ಇರುವ ತೊಡಕುಗಳು ಹೊಸ ವ್ಯವಸ್ಥೆಯಲ್ಲಿ ತಪ್ಪಲಿವೆ.

''ಸ್ವಾಯತ್ತ ಮತ್ತು ಪ್ರಜಾಸತ್ತಾತ್ಮಕ ಆರ್ಥಿಕತೆಯಲ್ಲಿ ಏಕಗವಾಕ್ಷಿಯ ತೆರಿಗೆ ರೀಫಂಡ್‌ ವ್ಯವಸ್ಥೆಯು ಮಹತ್ವದ ಬೆಳವಣಿಗೆಯಾಗಲಿದೆ. ಉದ್ಯಮ ವಹಿವಾಟುಗಳನ್ನು ಸುಲಭಗೊಳಿಸಲು ನೆರವಾಗಲಿದೆ,'' ಎಂದು ಎಎಂಆರ್‌ಜಿ ಆ್ಯಂಡ್‌ ಅಸೋಸಿಯೇಟ್ಸ್‌ನ ಪಾಲುದಾರರಾದ ರಜನ್‌ ಮೋಹನ್‌ ಅಭಿಪ್ರಾಯಪಟ್ಟಿದ್ದಾರೆ.

''ಐಟಿ ರೀಫಂಡ್‌ಗಾಗಿ ಇನ್ನು ಮುಂದೆ ಹೆಚ್ಚು ಕಾಯುವ ಅಗತ್ಯವಿಲ್ಲ. ತಂತ್ರಜ್ಞಾನದ ಸಮರ್ಪಕ ಬಳಕೆಗೆ ತೆರಿಗೆ ಇಲಾಖೆ ಮುಂದಾಗಿದ್ದು, ಐಟಿ ರೀಫಂಡ್‌ ಅನ್ನು ಕೇವಲ 24ಗಳಲ್ಲಿ ವಿತರಿಸಲಾಗುವುದು,'' ಎಂದು ಬಜೆಟ್‌ನಲ್ಲಿ ಪಿಯೂಷ್‌ ಗೋಯಲ್‌ ಘೋಷಿಸಿದ್ದರು.

ತೆರಿಗೆ ವಿವರಗಳ ಪರಿಶೀಲನೆಯು ಸಂಪೂರ್ಣವಾಗಿ ಆನ್‌ಲೈನ್‌ ಮೂಲಕ ನಡೆಯಲಿದೆ. ಅಧಿಕಾರಿಗಳು ಮತ್ತು ತೆರಿಗೆದಾರರ ನೇರ ಮುಖಾಮುಖಿ ತಪ್ಪಲಿದೆ. ಕಚೇರಿಗಳಿಗೆ ಅಲೆದಾಡುವ ಕಷ್ಟವೂ ಇನ್ನಿಲ್ಲ ಎಂದು ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ