ಆ್ಯಪ್ನಗರ

ಈರುಳ್ಳಿ ದರ ಏರಿಕೆ ತಡೆಗೆ ದಾಸ್ತಾನಿಗೆ ಮಿತಿ ಹೇರಿದ ಕೇಂದ್ರ

ಈರುಳ್ಳಿ ಬೆಲೆ ತೀವ್ರವಾಗಿ ಏರಿಕೆಯಾಗುತ್ತಿರುವುದರಿಂದ ಕೇಂದ್ರ ಸರಕಾರ ದಾಸ್ತಾನಿಗೆ ಮಿತಿ ಹೇರಿದೆ. ಚಿಲ್ಲರೆ ಮಾರಾಟಗಾರರು 2 ಟನ್‌ ತನಕ ಹಾಗೂ ಸಗಟು ಮಾರಾಟದಾರರು 25 ಟನ್‌ ತನಕ ಮಾತ್ರ ದಾಸ್ತಾನು ಇಟ್ಟುಕೊಳ್ಳಬಹುದಾಗಿದೆ.

PTI 23 Oct 2020, 9:20 pm
ಹೊಸದಿಲ್ಲಿ: ಏರುತ್ತಿರುವ ಈರುಳ್ಳಿ ದರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದಾಸ್ತಾನು ಮಿತಿಯನ್ನು ಕೇಂದ್ರ ಸರಕಾರವು ವಿಧಿಸಿದೆ. ಚಿಲ್ಲರೆ ಮತ್ತು ಸಗಟು ಮಾರಾಟಗಾರರಿಗೆ ತಕ್ಷಣದಿಂದಲೇ ದಾಸ್ತಾನು ಮಿತಿ ಅನ್ವಯವಾಗಲಿದೆ. ಇದು ಡಿ.31ರ ತನಕ ಮುಂದುವರಿಯಲಿದೆ.
Vijaya Karnataka Web Onion


ಚಿಲ್ಲರೆ ಮಾರಾಟಗಾರರು ಕೇವಲ 2 ಟನ್‌ ತನಕ, ಸಗಟು ಮಾರಾಟದಾರರು 25 ಟನ್‌ ತನಕ ದಾಸ್ತಾನು ಮಾಡಬಹುದಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಲೀನಾ ನಂದನ್‌, "ದಾಸ್ತಾನುಗಳ ಮೇಲೆ ಅಧಿಕಾರಿಗಳು ನಿಗಾ ವಹಿಸಲಿದ್ದಾರೆ. ಮಾರುಕಟ್ಟೆಗೆ ಸ್ವಲ್ಪವಷ್ಟೇ ಈರುಳ್ಳಿ ಬಿಡುಗಡೆ ಮಾಡಿ, ಕೃತಕ ಅಭಾವ ಸೃಷ್ಟಿಸುವ ಪ್ರಯತ್ನಗಳನ್ನು ತಡೆಯಲಾಗುವುದು. ದಾಸ್ತಾನಿನ ಮಿತಿ ನಿಯಮವು ತಕ್ಷಣದಿಂದಲೇ ಜಾರಿಯಾಗಲಿದೆ," ಎಂದಿದ್ದಾರೆ.

ದಾಸ್ತಾನಿಗೆ ಅನುಕೂಲಗಳ ಕೊರತೆ ಮತ್ತು ಹೆಚ್ಚಿನ ಮಳೆಯಿಂದಾಗಿ ಈರುಳ್ಳಿ ಬೆಳೆ ಹಾಳಾಗಿದ್ದು, ಕಳೆದ ಕೆಲವು ವಾರಗಳಿಂದ ದರ ಕೆ.ಜಿಗೆ 75 ರೂ. ದಾಟಿದೆ. ಬೆಂಗಳೂರು ಸೇರಿದಂತೆ ಕೆಲವೆಡೆ ರಿಟೇಲ್‌ನಲ್ಲಿ ಈರುಳ್ಳಿ ದರ 80-90 ರೂ. ತನಕ ಇದೆ.

ಈರುಳ್ಳಿ ಆಮದು ಸಲೀಸು -ಬೆಲೆ ಏರಿಕೆ ತಡೆಗೆ ಆಮದು ನಿರ್ಬಂಧ ಸಡಿಲಿಸಿದ ಕೇಂದ್ರ
ಮುಂದಿನ ತಿಂಗಳು ಈರುಳ್ಳಿಯ ಖಾರಿಫ್‌ ಫಸಲು ಮಾರುಕಟ್ಟೆಗೆ ಬರಲಿದೆ. 37 ಲಕ್ಷ ಟನ್‌ ಫಸಲು ಬರುವ ನಿರೀಕ್ಷೆ ಇದ್ದು, ದರ ಏರಿಕೆಯು ನಿಯಂತ್ರಣಕ್ಕೆ ಬರಲಿದೆ.

ಆಲೂಗಡ್ಡೆ ದರವೂ ಏರಿಕೆ

ಕಳೆದ 10 ದಿನಗಳ ಹಿಂದೆ ಕೆ.ಜಿಗೆ 25-35 ರೂ. ಇದ್ದ ಆಲೂಗಡ್ಡೆ ದರವು, ಈಗ 40-45 ರೂ.ಗೆ ಏರಿದೆ. "ಕರ್ನಾಟಕದಲ್ಲಿಆಲೂಗಡ್ಡೆ ಬೆಳೆಯು ಅಕಾಲಿಕ ಮಳೆಯಿಂದ ಹಾಳಾಗಿದೆ. ಹೀಗಾಗಿ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಇತ್ತ ಮಾರ್ಚ್‌-ಏಪ್ರಿಲ್‌ನಲ್ಲಿ ಮಳೆಯಿಂದಾಗಿ ಪಂಜಾಬ್‌ನಲ್ಲಿ ಆಲೂಗಡ್ಡೆ ದಾಸ್ತಾನು ಕಡಿಮೆಯಾಗಿದೆ. ಈ ಅಂಶಗಳು ಆಲೂ ದರ ಏರಿಕೆಗೆ ಕಾರಣವಾಗಿವೆ,’’ ಎಂದು ವರ್ತಕರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ