ಬೆಂಗಳೂರು: ಮೂಳೆ ಚಿಕಿತ್ಸೆ ಮತ್ತು ಕೀಲು ಬದಲಿ ಸೇವೆಗೆ ನಾರಾಯಣ ಹೆಲ್ತ್ಕೇರ್ ಗುರುವಾರ ಚಾಲನೆ ನೀಡಿದೆ.
''ಹೃದಯ ಚಿಕಿತ್ಸೆ ಮತ್ತು ಆಂಕಾಲಜಿ ಸೇವೆಯಲ್ಲಿ ನಮ್ಮ ಆರೋಗ್ಯ ಸಂಸ್ಥೆ ಈಗಾಗಲೇ ಗುರ್ತಿಸಿಕೊಂಡಿದ್ದು, ಅಸ್ಥಿಮಜ್ಜೆ ಕಸಿ ಸೇರಿದಂತೆ ಮೂಳೆ ಚಿಕಿತ್ಸೆ ಮತ್ತು ಕೀಲು ಬದಲಿ ಸೇವೆಗೆ ಸಂಬಂಧಿಸಿದಂತೆ ಅತ್ಯನ್ನತ ಸೇವೆಯನ್ನು ನೀಡುವ ಆಲೋಚನೆ ನಮ್ಮ ಮುಂದಿದೆ,'' ಎಂದು ನಾರಾಯಣ ಹೆಲ್ತ್ ಮುಖ್ಯಸ್ಥ ದೇವಿ ಶೆಟ್ಟಿ ಹೇಳಿದರು.
ವೈಟ್ಫಿಲ್ಡ್ನಲ್ಲಿನ ನಾರಾಯಣ ಹೆಲ್ತ್ಕೇರ್ನ ಕೇಂದ್ರವು ಒಳ ರೋಗಿಗಳು ಮತ್ತು ಹೊರರೋಗಿಗಳಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ಘಟಕಗಳನ್ನು ಹೊಂದಿದೆ. ನುರಿತ ವೈದ್ಯರು, ಶಸ್ತ್ರಚಿಕಿತ್ಸಾ ತಜ್ಞರನ್ನು ಹೊಂದಿದ್ದು, ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗಳು, ಒಟ್ಟು ಮತ್ತು ಭಾಗಶಃ ಮೊಣಕಾಲಿನ ಕೀಲು ಮತ್ತು ಹಿಪ್ ಬದಲಿ ಚಿಕಿತ್ಸೆಗಳು ಇಲ್ಲಿ ಲಭ್ಯ.