ಆ್ಯಪ್ನಗರ

ದಿವಾಳಿ ಕಾಯ್ದೆ ಭೀತಿ: 2,100ಕ್ಕೂ ಹೆಚ್ಚು ಕಂಪನಿಗಳಿಂದ 83,000 ಕೋಟಿ ರೂ ಸಾಲ ಮರುಪಾವತಿ

ಹೊಸದಾಗಿ ಜಾರಿಗೊಳಿಸಲಾದ ಋಣಬಾಧ್ಯತೆ ಮತ್ತು ದಿವಾಳಿತನ ಕಾಯ್ದೆ ಅನುಸಾರ ಕಂಪನಿಗಳ ಮೇಲಿನ ನಿಯಂತ್ರಣ ಕಳೆದುಕೊಳ್ಳುವ ಭೀತಿಯಿಂದಾಗಿ ಕಂಪನಿಗಳ ಪ್ರವರ್ತಕರು ಬಾಕಿ ಉಳಿಸಿಕೊಂಡ 83,000 ಕೋಟಿ ರೂ.ಗಳನ್ನು ಬ್ಯಾಂಕುಗಳಿಗೆ ಮರುಪಾವತಿ ಮಾಡಿದ್ದಾರೆ.

Vijaya Karnataka Web 23 May 2018, 9:37 am
ಹೊಸದಿಲ್ಲಿ: ಹೊಸದಾಗಿ ಜಾರಿಗೊಳಿಸಲಾದ ಋಣಬಾಧ್ಯತೆ ಮತ್ತು ದಿವಾಳಿತನ ಕಾಯ್ದೆ ಅನುಸಾರ ಕಂಪನಿಗಳ ಮೇಲಿನ ನಿಯಂತ್ರಣ ಕಳೆದುಕೊಳ್ಳುವ ಭೀತಿಯಿಂದಾಗಿ ಕಂಪನಿಗಳ ಪ್ರವರ್ತಕರು ಬಾಕಿ ಉಳಿಸಿಕೊಂಡ 83,000 ಕೋಟಿ ರೂ.ಗಳನ್ನು ಬ್ಯಾಂಕುಗಳಿಗೆ ಮರುಪಾವತಿ ಮಾಡಿದ್ದಾರೆ.
Vijaya Karnataka Web NPAs


ಕಳೆದ ತಿಂಗಳು ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯ ಸಂಗ್ರಹಿಸಿದ ಮಾಹಿತಿಗಳ ಪ್ರಕಾರ, 2,100ಕ್ಕೂ ಹೆಚ್ಚು ಕಂಪನಿಗಳು ಹಳೆ ಬಾಕಿಗಳನ್ನೆಲ್ಲ ಚುಕ್ತಾ ಮಾಡಿವೆ.

ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಾಧಿಕರಣದಲ್ಲಿ ದಿವಾಳಿ ಪ್ರಕ್ರಿಯೆಗಳ ಅನುಸಾರ ಕ್ರಮಕ್ಕೆ ಮುಂದಾದ ಹಿನ್ನೆಲೆಯಲ್ಲಿ, ಅನುತ್ಪಾದಕ ಸೊತ್ತುಗಳೆಂದು ಪಟ್ಟಿ ಮಾಡಲಾದ ಕಂಪನಿಗಳ ಪ್ರವರ್ತಕರು ತಮ್ಮ ಬಾಕಿ ಸಾಲಗಳನ್ನು ಮರು ಪಾವತಿಸಿದ್ದಾರೆ.

ನೂತನ ಕಾಯ್ದೆ ಅನುಸಾರ, 90 ದಿನಗಳ ಕಾಲ ಪಾವತಿಯಾಗದೆ ಉಳಿದ ಸಾಲವನ್ನು ಅನುತ್ಪಾದಕ ಸೊತ್ತುಗಳೆಂದು ವರ್ಗೀಕರಿಸಲಾಗುತ್ತದೆ.

NEW DELHI: The fear of losing control over their companies has prompted promoters, who have defaulted on repayment of loans to banks, to settle their dues of around Rs 83,000 crore before action was initiated under the newly-enacted Insolvency and Bankruptcy Code (IBC).

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ