ಆ್ಯಪ್ನಗರ

ಇದು ಟ್ರೇಲರ್‌, ಸ್ಫೋಟ ಖಚಿತ: ಉದ್ಯಮಿ ಮುಕೇಶ್‌ ಅಂಬಾನಿ, ಪತ್ನಿಗೆ ಬೆದರಿಕೆ; ಕಾರು ಮಾಲೀಕ ಪತ್ತೆ!

ಪೊಲೀಸರು ಸ್ಥಳದಲ್ಲಿ ಬಿಗಿ ಬಂದೋಬಸ್ತ್‌ ಕೈಗೊಂಡಿದ್ದಾರೆ. ಕಾರಿನ ಚಲನವಲನ ಗ್ರಹಿಸಲು ನಗರದ ಪ್ರಮುಖ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡುತ್ತಿದ್ದಾರೆ. ಕಳುವು ಮಾಡಲಾಗಿದ್ದ ಕಾರಿನಲ್ಲಿ ಜಿಲೆಟಿನ್‌ ಕಡ್ಡಿಗಳು ಹೇಗೆ ಬಂದವು? ಅದನ್ನು ಅಂಬಾನಿ ನಿವಾಸದ ಬಳಿ ತಂದು ನಿಲ್ಲಿಸಿದ್ದು ಯಾರು? ಇತ್ಯಾದಿ ಮಾಹಿತಿಗಳನ್ನು ಕಲೆಹಾಕಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Vijaya Karnataka Web 27 Feb 2021, 7:08 am
ಮುಂಬಯಿ: ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿ-ಟೆಡ್‌ ಮುಖ್ಯಸ್ಥ , ಉದ್ಯಮಿ ಮುಕೇಶ್‌ ಅಂಬಾನಿ ಅವರ ಐಷಾರಾಮಿ ನಿವಾಸ 'ಆ್ಯಂಟಿ-ಲಿಯಾ' ಬಳಿ ಗುರುವಾರ ಸಂಜೆ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೊ ಎಸ್‌ಯುವಿ ಪತ್ತೆಯಾದ ಪ್ರಕರಣ ಸಂಬಂಧ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
Vijaya Karnataka Web ambani


ಕಾರಿನಲ್ಲಿ ಅನಾಮಧೇಯ ಪತ್ರ ದೊರೆತಿದ್ದು, ಅದರಲ್ಲಿ'ಇದು ಜಸ್ಟ್‌ ಟ್ರೇಲರ್‌' ಎಂದು ಧಮ್ಕಿ ಹಾಕಲಾಗಿದೆ. ''ನೀತಾ ಭಾಬಿ (ಮುಕೇಶ್‌ ಅವರ ಪತ್ನಿ) ಔರ್‌ ಮುಕೇಶ್‌ ಭಾಯ್‌, ಅಲರ್ಟ್‌ ಆಗಿರಿ. ಇದು ಜಸ್ಟ್‌ ಟ್ರೇಲರ್‌. ನಾವು ನಿಮ್ಮ ಇಡೀ ಕುಟುಂಬವನ್ನು ಸ್ಫೋಟದಲ್ಲಿ ಸರ್ವನಾಶ ಮಾಡಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಶುಭರಾತ್ರಿ,'' ಎಂಬ ಬೆದರಿಕೆ ಸಂದೇಶ ಪತ್ರದಲ್ಲಿದೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದಿ ಒಕ್ಕಣೆಯ ಪತ್ರವು ಇಂಗ್ಲಿಷ್‌ ಭಾಷೆಯಲ್ಲಿದೆ. ಸ್ಕಾರ್ಪಿಯೊದ ನಂಬರ್‌ ಪ್ಲೇಟ್‌ ನಕಲಿಯಾಗಿದೆ. ಮುಕೇಶ್‌ ಅವರ ಭದ್ರತಾ ವಿಭಾಗದಲ್ಲಿ ಬರುವ ಕಾರುಗಳು ಹೊಂದಿರುವ ನಂಬರ್‌ ಪ್ಲೇಟ್‌ಗೂ ಇದು ಹೊಂದಾಣಿಕೆಯಾಗಿದೆ. ಆದರೆ ಚಾಸೀಸ್‌ ನಂಬರ್‌ನ ಮೂಲಕ ಮೂಲ ಮಾಲೀಕ ಹಿರೇನ್‌ ಮನ್ಸುಕ್‌ನನ್ನು ಪತ್ತೆ ಹಚ್ಚಲಾಗಿದೆ.

ಮುಕೇಶ್‌ ಅಂಬಾನಿಯ ಮುಂಬಯಿ ನಿವಾಸದ ಪಕ್ಕ ಸ್ಫೋಟಕ ತಂಬಿದ್ದ ಕಾರು ಪತ್ತೆ

ಕಳುವಾಗಿತ್ತು!
20ಕ್ಕೂ ಹೆಚ್ಚು ಜಿಲೆಟಿನ್‌ ಕಡ್ಡಿಗಳಿದ್ದ ಈ ಎಸ್‌ಯುವಿಯ ಮಾಲೀಕ ಮನ್ಸುಕ್‌ ಅವರು, ಕಳೆದೊಂದು ವಾರದಿಂದ ತಮ್ಮ ಕಾರು ನಾಪತ್ತೆಯಾಗಿತ್ತು ಎಂದು ಕ್ರೈಂ ಬ್ಯಾಂಚ್‌ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಅಲ್ಲದೇ ವಿಕ್ರೋಲಿ ಪೊಲೀಸ್‌ ಠಾಣೆಯಲ್ಲಿಈ ಬಗ್ಗೆ ದೂರು ಕೊಟ್ಟಿದ್ದಾಗಿಯೂ ಅವರು ಸ್ಪಷ್ಟಪಡಿಸಿದ್ದಾರೆ.

''ಫೆಬ್ರವರಿ 17ರಂದು ಕುಟುಂಬ ಸದಸ್ಯರೊಬ್ಬರ ಮದುವೆ ಕಾರ್ಯಕ್ರಮಕ್ಕಾಗಿ ಮುಳುಂದ್‌ಗೆ ತೆರಳುತ್ತಿದ್ದ ವೇಳೆ ಐರೋಲಿ-ಮುಳುಂದ್‌ ಸೇತುವೆ ಬಳಿ ನನ್ನ ಎಸ್‌ಯುವಿಯ ಸ್ಟೀರಿಂಗ್‌ ಜಾಮ್‌ ಆಗಿದ್ದರಿಂದ ಅದನ್ನು ಅಲ್ಲಿಯೇ ಬಿಟ್ಟು ತೆರಳಿದ್ದೆ. ಮರುದಿನ ಬಂದು ನೋಡಿದಾಗ ಸ್ಥಳದಲ್ಲಿ ಕಾರು ಇರಲಿಲ್ಲ. ನಾಲ್ಕು ತಾಸು ಹುಡುಕಿದರೂ ಸಿಗಲಿಲ್ಲ. ಕೊನೆಗೆ ವಿಕ್ರೋಲಿ ಪೊಲೀಸ್‌ ಠಾಣೆಗೆ ಬಂದು ಕಾರು ಕಳುವಾಗಿದೆ ಎಂದು ದೂರುಕೊಟ್ಟಿದ್ದೆ,'' ಎಂದೂ ಅವರು ಹೇಳಿದ್ದಾರೆ.

ವ್ಯಾಪಕ ಶೋಧ!ಪೊಲೀಸರು ಸ್ಥಳದಲ್ಲಿ ಬಿಗಿ ಬಂದೋಬಸ್ತ್‌ ಕೈಗೊಂಡಿದ್ದಾರೆ. ಕಾರಿನ ಚಲನವಲನ ಗ್ರಹಿಸಲು ನಗರದ ಪ್ರಮುಖ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡುತ್ತಿದ್ದಾರೆ. ಕಳುವು ಮಾಡಲಾಗಿದ್ದ ಕಾರಿನಲ್ಲಿ ಜಿಲೆಟಿನ್‌ ಕಡ್ಡಿಗಳು ಹೇಗೆ ಬಂದವು? ಅದನ್ನು ಅಂಬಾನಿ ನಿವಾಸದ ಬಳಿ ತಂದು ನಿಲ್ಲಿಸಿದ್ದು ಯಾರು? ಇತ್ಯಾದಿ ಮಾಹಿತಿಗಳನ್ನು ಕಲೆಹಾಕಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಇದೇ ವೇಳೆ ಅವರು, ದೊರೆತ ಜಿಲೆಟಿನ್‌ ಕಡ್ಡಿಗಳು ಮೈನಿಂಗ್‌ಗೆ ಬಳಸುವ ಜಿಲೆಟಿನ್‌ ಆಗಿದೆ ಎಂದಿದ್ದಾರೆ. ಶ್ವಾನದಳವೂ ಅಂಬಾನಿ ನಿವಾಸದ ಸುತ್ತ ತಪಾಸಣೆ ನಡೆಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ