ಮುಂಬಯಿ: ಕೇಂದ್ರ ವಾಣಿಜ್ಯ ಇಲಾಖೆ ಸೋಮವಾರ ಏಕಾಏಕಿ 'ತಕ್ಷಣದಿಂದ ಜಾರಿಗೆ ಬರುವಂತೆ' ಈರುಳ್ಳಿ ರಫ್ತಿಗೆ ನಿಷೇಧ ಹೇರಿದ್ದು ಅಚ್ಚರಿ ಹುಟ್ಟುಹಾಕಿದೆ. ಜೊತೆಗೆ ವಿರೋಧಕ್ಕೂ ಕಾರಣವಾಗಿದೆ.
ದೇಶದ ಅತೀ ದೊಡ್ಡ ಈರುಳ್ಳಿ ವಹಿವಾಟು ತಾಣ ಮಹಾರಾಷ್ಟ್ರದ ಲಸಲ್ಗಾಂವ್ ಮಾರುಕಟ್ಟೆಯಲ್ಲಿ ಸರಾಸರಿ ಈರುಳ್ಳಿಯ ದರ ಕೆಜಿಗೆ 30 ರೂಪಾಯಿ ತಲುಪುತ್ತಿದ್ದಂತೆ ಕೇಂದ್ರ ಸರಕಾರ ಈ ನಿರ್ಧಾರಕ್ಕೆ ಬಂದಿದೆ.
ಒಂದೆಡೆ ಇದು ಈರುಳ್ಳಿ ಪ್ರಿಯರಿಗೆ ಸಿಹಿ ಸುದ್ದಿ ನೀಡಿದ್ದರೆ, ಇತ್ತ ರೈತರು ಆತಂಕಿತರಾಗಿದ್ದಾರೆ. ಆರಂಭದಲ್ಲಿ ಭಾರಿ ಮುಂಗಾರು ಮಳೆ ಹಿನ್ನೆಲೆಯಲ್ಲಿ ಮಧ್ಯ ಪ್ರದೇಶ, ಗುಜರಾತ್, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಈರುಳ್ಳಿ ಬೆಳೆ ಹಾಳಾಗಿತ್ತು. ಬಳಿಕ ಈಗಷ್ಟೆ ರೈತರು ಉತ್ತಮ ಬೆಲೆ ಪಡೆಯುತ್ತಿದ್ದಾರೆ.
ಏಕಾಏಕಿ ಎಲ್ಲಾ ವಿಧಧ ಈರುಳ್ಳಿ ರಫ್ತುನ್ನು ನಿಷೇಧಿಸಿದ ಭಾರತ, ಬಾಂಗ್ಲಾದೇಶ ಸೇರಿ ಕೆಲವು ದೇಶಗಳಿಗೆ ಹೊಡೆತ?
ಈ ಹಿನ್ನೆಲೆಯಲ್ಲಿ ಕೇಂದ್ರದ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡಿರುವ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಈ ಬಗ್ಗೆ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಜೊತೆ ಈ ವಿಚಾರವನ್ನು ಚರ್ಚಿಸಿದ್ದು, ತಮ್ಮತೀರ್ಮಾನದ ಬಗ್ಗೆ ಮರುಪರಿಶೀಲನೆ ನಡೆಸುವಂತೆ ಹೇಳಿದ್ದಾಗಿ ತಿಳಿಸಿದ್ದಾರೆ.
ಈ ನಿರ್ಧಾರದಿಂದ ಕೊಲ್ಲಿ ರಾಷ್ಟ್ರಗಳು, ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಈರುಳ್ಳಿ ಮಾರುಕಟ್ಟೆಯಲ್ಲಿ ಭಾರತದ ರಫ್ತುಪಾಲು ಅಪಾಯ ಎದುರಿಸಲಿದ್ದು, ಭಾರತದ ಸ್ಥಾನವನ್ನು ಪಾಕಿಸ್ತಾನ ತುಂಬುತ್ತದೆ ಎಂದು ಪವಾರ್ ಎಚ್ಚರಿಕೆ ನೀಡಿದ್ದಾರೆ.
"ಕೇಂದ್ರ ಸರಕಾರ ಏಕಾಏಕಿ ಈರುಳ್ಳಿ ರಫ್ತು ನಿಷೇಧವನ್ನು ಘೋಷಿಸಿದೆ. ಇದಕ್ಕೆ ಮಹಾರಾಷ್ಟ್ರದಲ್ಲಿ ಈರುಳ್ಳಿ ಬೆಳೆಯುವ ಭಾಗದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ವಿವಿಧ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಕಳೆದ ರಾತ್ರಿ ನನ್ನನ್ನು ಸಂಪರ್ಕಿಸಿ ಅವರ ಪ್ರತಿಕ್ರಿಯೆಯನ್ನು ಕೇಂದ್ರ ಸರಕಾರದ ಗಮನಕ್ಕೆ ತರುವಂತೆ ವಿನಂತಿಸಿಕೊಂಡಿದ್ದಾರೆ. ಈರುಳ್ಳಿ ರಫ್ತು ನಿಷೇಧಿಸುವ ಈ ನಿರ್ಧಾರವನ್ನು ಪುನರ್ ವಿಮರ್ಶಿಸಲು ನಾನು ಪಿಯೂಷ್ ಗೋಯಲ್ ಅವರನ್ನು ಒತ್ತಾಯಿಸುತ್ತೇನೆ,” ಎಂದು ಅವರು ತಮ್ಮ ಸರಣಿ ಟ್ಟೀಟ್ಗಳಲ್ಲಿ ಹೇಳಿದ್ದಾರೆ.
ದಾಖಲೆಗಳ ಪ್ರಕಾರ ಲಾಸಲ್ಗಾಂವ್ ಮಾರುಕಟ್ಟೆಯಲ್ಲಿ ಮಾರ್ಚ್ನಲ್ಲಿದ್ದ ಈರುಳ್ಳಿ ಬೆಲೆ ಸೆಪ್ಟೆಂಬರ್ನಲ್ಲಿ ದುಪ್ಪಟ್ಟಾಗಿದೆ. ಇನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ ಈ ಹಿಂದೆ ಕೆಜಿಗೆ 20 ರೂಪಾಯಿ ಇದ್ದ ದರ ಸದ್ಯ 35-40ರೂಪಾಯಿವರೆಗೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ರಫ್ತಿಗೆ ನಿಷೇಧ ಹೇರಿದೆ.
ಈ ನಿಷೇಧದಿಂದ ಮಹಾರಾಷ್ಟ್ರ ಅಷ್ಟೇ ಅಲ್ಲ, ಇಡೀ ದೇಶದ ಈರುಳ್ಳಿ ಬೆಳೆಗಾರರಿಗೆ ತೊಂದರೆಯಾಗಲಿದೆ ಎನ್ನುತ್ತಾರೆ ಅಖಿಲ ಭಾರತ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಡಾ. ಅಜಿತ್ ನವಾಲೆ.
ಕೇಂದ್ರದ ನಿರ್ಧಾರದಿಂದ ರೈತರು ಆಕ್ರೋಶಿತರಾಗಿದ್ದು, ಬೀದಿಗಿಳಿದು ಹೋರಾಟ ಮಾಡಲು ನಿರ್ಧರಿಸಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಬಿಹಾರ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ತೀರ್ಮಾನ ತೆಗೆದುಕೊಂಡಿದೆ ಎಂದು ದೂರಿರುವ ಅವರು, ಒಂದೊಮ್ಮೆ ಬೆಲೆ ಏರಿಕೆಯಾದರೆ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ಕೇಂದ್ರ ಆತುರದಲ್ಲಿ ಈ ತೀರ್ಮಾನ ತೆಗೆದುಕೊಂಡಿದೆ ಎಂದು ಆರೋಪಿಸಿದ್ದಾರೆ.
ದೇಶದ ಅತೀ ದೊಡ್ಡ ಈರುಳ್ಳಿ ವಹಿವಾಟು ತಾಣ ಮಹಾರಾಷ್ಟ್ರದ ಲಸಲ್ಗಾಂವ್ ಮಾರುಕಟ್ಟೆಯಲ್ಲಿ ಸರಾಸರಿ ಈರುಳ್ಳಿಯ ದರ ಕೆಜಿಗೆ 30 ರೂಪಾಯಿ ತಲುಪುತ್ತಿದ್ದಂತೆ ಕೇಂದ್ರ ಸರಕಾರ ಈ ನಿರ್ಧಾರಕ್ಕೆ ಬಂದಿದೆ.
ಒಂದೆಡೆ ಇದು ಈರುಳ್ಳಿ ಪ್ರಿಯರಿಗೆ ಸಿಹಿ ಸುದ್ದಿ ನೀಡಿದ್ದರೆ, ಇತ್ತ ರೈತರು ಆತಂಕಿತರಾಗಿದ್ದಾರೆ. ಆರಂಭದಲ್ಲಿ ಭಾರಿ ಮುಂಗಾರು ಮಳೆ ಹಿನ್ನೆಲೆಯಲ್ಲಿ ಮಧ್ಯ ಪ್ರದೇಶ, ಗುಜರಾತ್, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಈರುಳ್ಳಿ ಬೆಳೆ ಹಾಳಾಗಿತ್ತು. ಬಳಿಕ ಈಗಷ್ಟೆ ರೈತರು ಉತ್ತಮ ಬೆಲೆ ಪಡೆಯುತ್ತಿದ್ದಾರೆ.
ಏಕಾಏಕಿ ಎಲ್ಲಾ ವಿಧಧ ಈರುಳ್ಳಿ ರಫ್ತುನ್ನು ನಿಷೇಧಿಸಿದ ಭಾರತ, ಬಾಂಗ್ಲಾದೇಶ ಸೇರಿ ಕೆಲವು ದೇಶಗಳಿಗೆ ಹೊಡೆತ?
ಈ ಹಿನ್ನೆಲೆಯಲ್ಲಿ ಕೇಂದ್ರದ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡಿರುವ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಈ ಬಗ್ಗೆ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಜೊತೆ ಈ ವಿಚಾರವನ್ನು ಚರ್ಚಿಸಿದ್ದು, ತಮ್ಮತೀರ್ಮಾನದ ಬಗ್ಗೆ ಮರುಪರಿಶೀಲನೆ ನಡೆಸುವಂತೆ ಹೇಳಿದ್ದಾಗಿ ತಿಳಿಸಿದ್ದಾರೆ.
ಈ ನಿರ್ಧಾರದಿಂದ ಕೊಲ್ಲಿ ರಾಷ್ಟ್ರಗಳು, ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಈರುಳ್ಳಿ ಮಾರುಕಟ್ಟೆಯಲ್ಲಿ ಭಾರತದ ರಫ್ತುಪಾಲು ಅಪಾಯ ಎದುರಿಸಲಿದ್ದು, ಭಾರತದ ಸ್ಥಾನವನ್ನು ಪಾಕಿಸ್ತಾನ ತುಂಬುತ್ತದೆ ಎಂದು ಪವಾರ್ ಎಚ್ಚರಿಕೆ ನೀಡಿದ್ದಾರೆ.
"ಕೇಂದ್ರ ಸರಕಾರ ಏಕಾಏಕಿ ಈರುಳ್ಳಿ ರಫ್ತು ನಿಷೇಧವನ್ನು ಘೋಷಿಸಿದೆ. ಇದಕ್ಕೆ ಮಹಾರಾಷ್ಟ್ರದಲ್ಲಿ ಈರುಳ್ಳಿ ಬೆಳೆಯುವ ಭಾಗದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ವಿವಿಧ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಕಳೆದ ರಾತ್ರಿ ನನ್ನನ್ನು ಸಂಪರ್ಕಿಸಿ ಅವರ ಪ್ರತಿಕ್ರಿಯೆಯನ್ನು ಕೇಂದ್ರ ಸರಕಾರದ ಗಮನಕ್ಕೆ ತರುವಂತೆ ವಿನಂತಿಸಿಕೊಂಡಿದ್ದಾರೆ. ಈರುಳ್ಳಿ ರಫ್ತು ನಿಷೇಧಿಸುವ ಈ ನಿರ್ಧಾರವನ್ನು ಪುನರ್ ವಿಮರ್ಶಿಸಲು ನಾನು ಪಿಯೂಷ್ ಗೋಯಲ್ ಅವರನ್ನು ಒತ್ತಾಯಿಸುತ್ತೇನೆ,” ಎಂದು ಅವರು ತಮ್ಮ ಸರಣಿ ಟ್ಟೀಟ್ಗಳಲ್ಲಿ ಹೇಳಿದ್ದಾರೆ.
ದಾಖಲೆಗಳ ಪ್ರಕಾರ ಲಾಸಲ್ಗಾಂವ್ ಮಾರುಕಟ್ಟೆಯಲ್ಲಿ ಮಾರ್ಚ್ನಲ್ಲಿದ್ದ ಈರುಳ್ಳಿ ಬೆಲೆ ಸೆಪ್ಟೆಂಬರ್ನಲ್ಲಿ ದುಪ್ಪಟ್ಟಾಗಿದೆ. ಇನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ ಈ ಹಿಂದೆ ಕೆಜಿಗೆ 20 ರೂಪಾಯಿ ಇದ್ದ ದರ ಸದ್ಯ 35-40ರೂಪಾಯಿವರೆಗೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ರಫ್ತಿಗೆ ನಿಷೇಧ ಹೇರಿದೆ.
ಈ ನಿಷೇಧದಿಂದ ಮಹಾರಾಷ್ಟ್ರ ಅಷ್ಟೇ ಅಲ್ಲ, ಇಡೀ ದೇಶದ ಈರುಳ್ಳಿ ಬೆಳೆಗಾರರಿಗೆ ತೊಂದರೆಯಾಗಲಿದೆ ಎನ್ನುತ್ತಾರೆ ಅಖಿಲ ಭಾರತ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಡಾ. ಅಜಿತ್ ನವಾಲೆ.
ಕೇಂದ್ರದ ನಿರ್ಧಾರದಿಂದ ರೈತರು ಆಕ್ರೋಶಿತರಾಗಿದ್ದು, ಬೀದಿಗಿಳಿದು ಹೋರಾಟ ಮಾಡಲು ನಿರ್ಧರಿಸಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಬಿಹಾರ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ತೀರ್ಮಾನ ತೆಗೆದುಕೊಂಡಿದೆ ಎಂದು ದೂರಿರುವ ಅವರು, ಒಂದೊಮ್ಮೆ ಬೆಲೆ ಏರಿಕೆಯಾದರೆ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ಕೇಂದ್ರ ಆತುರದಲ್ಲಿ ಈ ತೀರ್ಮಾನ ತೆಗೆದುಕೊಂಡಿದೆ ಎಂದು ಆರೋಪಿಸಿದ್ದಾರೆ.