ಆ್ಯಪ್ನಗರ

ಕೇರಳದಲ್ಲಿ ಬಿಯರ್‌ ಮೇಲೆ ಪ್ರವಾಹ ಸೆಸ್‌!

ಕಳೆದ ವರ್ಷ ಸಂಭವಿಸಿದ ಭಾರಿ ಪ್ರವಾಹದಿಂದ ಕಂಗೆಟ್ಟಿದ್ದ ಕೇರಳ ಚೇತರಿಸಿಕೊಳ್ಳುತ್ತಿದ್ದು, ಹೊಸ ಕೇರಳ ಕಟ್ಟಲು 'ಕೇರಳ ಪ್ರವಾಹ ಸೆಸ್‌' ಎಂಬ ಹೆಚ್ಚುವರಿ ತೆರಿಗೆಯನ್ನು ಸಿನಿಮಾ ಟಿಕೆಟ್‌ ಮತ್ತು ಮದ್ಯದ ಮೇಲೆ ಕೇರಳ ಸರಕಾರ ಹೇರಿದೆ.

Vijaya Karnataka Web 1 Feb 2019, 9:27 am
ತಿರುವನಂತಪುರ: ಕೇರಳದಲ್ಲಿ ಪ್ರವಾಹ ನಂತರದ ಪ್ರಥಮ ಬಜೆಟ್‌ ಮಂಡನೆಯಾಗಿದ್ದು, ಬಿಯರ್‌ ಮತ್ತು ಸಿನಿಮಾ ಟಿಕೆಟ್‌ ಮೇಲೆ ಹೆಚ್ಚುವರಿ 'ಪ್ರವಾಹ ಸೆಸ್‌' ವಿಧಿಸಲಾಗಿದೆ.
Vijaya Karnataka Web Kerala Floods


ಪ್ರವಾಹ ನಂತರದ ನಷ್ಟ ಸರಿದೂಗಿಸಲು ಹೆಣಗುತ್ತಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದ ಎಡರಂಗ ಸರಕಾರ, ಬಿಯರ್‌ ಮತ್ತು ಸಿನಿಮಾ ಟಿಕೆಟ್‌ ಅನ್ನು ಸಂಪನ್ಮೂಲ ಕ್ರೋಡೀಕರಣದ ಆಯ್ಕೆಯನ್ನಾಗಿ ಮಾಡಿಕೊಂಡಿದೆ.

'ಪ್ರವಾಹದಿಂದ ರಾಜ್ಯಕ್ಕೆ ಅಪಾರ ನಷ್ಟ ಉಂಟಾಗಿದೆ. ಮರು ನಿರ್ಮಾಣಕ್ಕೆ 1000 ಕೋಟಿ ರೂ.ಗಳ ಅಗತ್ಯ ಇದ್ದು, ವಿಲಾಸಿ ಸಾಧನಗಳ ಮೇಲೆ ಹೆಚ್ಚುವರಿ ಸೆಸ್‌ ವಿಧಿಸುವುದು ಅನಿವಾರ್ಯವಾಯಿತು' ಎಂದು ರಾಜ್ಯ ಹಣಕಾಸು ಸಚಿವ ಟಿ.ಕೆ.ಥಾಮಸ್‌ ಐಸಾಕ್‌ ಸಮರ್ಥನೆ ನೀಡಿದ್ದಾರೆ.

ಬಿಯರ್‌ ಮತ್ತು ವೈನ್‌ ಸೇರಿದಂತೆ ಎಲ್ಲಾ ರೀತಿಯ ವಿದೇಶಿ ಮದ್ಯದ ಮೇಲಿನ ತೆರಿಗೆ ಶೇ.2ರಷ್ಟು ಹೆಚ್ಚಿಸಲಾಗಿದೆ. ಸಿನಿಮಾ ಟಿಕೆಟ್‌ ಮೇಲೆ ಶೇ.10ರ ವರೆಗೆ ಹೆಚ್ಚಿನ ತೆರಿಗೆ ಸಂಗ್ರಹಿಸಲು ಸ್ಥಳೀಯ ಆಡಳಿತ ಮಂಡಳಿಗೆ ಅವಕಾಶ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ