ಆ್ಯಪ್ನಗರ

ಶ್ರಮ ಯೋಗಿ ಪಿಂಚಣಿ ಯೋಜನೆಗೆ ಚಾಲನೆ

''ತಮ್ಮ ದೇಹ ಸದೃಢವಾಗಿರುವ ತನಕ ದುಡಿಯುವ ಅಸಂಘಟಿತ ವಲಯದ ಕಾರ್ಮಿಕರು, ವಯಸ್ಸಾದ ಬಳಿಕ ಬದುಕುವುದು ಹೇಗೆ ಎನ್ನುವ ಕಳವಳಕ್ಕೆ ಒಳಗಾಗುತ್ತಾರೆ. ಇಂಥ ವರ್ಗವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸರಕಾರ ಈ ಯೋಜನೆ ರೂಪಿಸಿದೆ,'' ಎಂದು ಪ್ರಧಾನಿ ಹೇಳಿದ್ದಾರೆ.

Vijaya Karnataka Web 6 Mar 2019, 7:58 am
ಅಹಮದಾಬಾದ್‌: ಅಸಂಘಟಿತ ವಲಯದ ಕಾರ್ಮಿಕರಿಗೆ ಮಾಸಿಕ ಕನಿಷ್ಠ 3,000 ರೂ. ಪಿಂಚಣಿ ನೀಡುವ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ ಧನ್‌ ಪಿಂಚಣಿ ಯೋಜನೆಗೆ(ಪಿಎಂಎಸ್‌ವೈಎಂ) ಪ್ರಧಾನಿ ನರೇಂದ್ರ ಮೋದಿ ಚಾಲನೆ ಮಂಗಳವಾರ ಚಾಲನೆ ನೀಡಿದ್ದಾರೆ.
Vijaya Karnataka Web Narendra Modi 1200


''ತಮ್ಮ ದೇಹ ಸದೃಢವಾಗಿರುವ ತನಕ ದುಡಿಯುವ ಅಸಂಘಟಿತ ವಲಯದ ಕಾರ್ಮಿಕರು, ವಯಸ್ಸಾದ ಬಳಿಕ ಬದುಕುವುದು ಹೇಗೆ ಎನ್ನುವ ಕಳವಳಕ್ಕೆ ಒಳಗಾಗುತ್ತಾರೆ. ಇಂಥ ವರ್ಗವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸರಕಾರ ಈ ಯೋಜನೆ ರೂಪಿಸಿದೆ,'' ಎಂದು ಪ್ರಧಾನಿ ಹೇಳಿದ್ದಾರೆ.

10 ಕೋಟಿ ಕೆಲಸಗಾರರಿಗೆ ಪಿಂಚಣಿ ಸೌಲಭ್ಯ ನೀಡುವ ಗುರಿಯನ್ನು ಈ ಯೋಜನೆ ಹೊಂದಿದೆ. ಮಾಸಿಕ 15,000 ರೂ.ಸಂಪಾದಿಸುವ ಅಸಂಘಟಿತ ವಲಯದ ಉದ್ಯೋಗಿಗಳಿಗೆ ಯೋಜನೆ ಲಭ್ಯ. 29 ವರ್ಷದ ಉದ್ಯೋಗಿಯು ಮಾಸಿಕ 100 ರೂ.ಗಳನ್ನು ತನ್ನ 60ನೇ ವಯಸ್ಸಿನವರಿಗೆ ಪಾವತಿಸುತ್ತಾ ಹೋದರೆ, ಬಳಿಕ 3,000 ರೂಪಾಯಿ ಪಿಂಚಣಿ ಬರುತ್ತದೆ. 18 ವರ್ಷದ ಉದ್ಯೋಗಿಗಳು ತಿಂಗಳಿಗೆ 55 ರೂ. ಪಾವತಿಸಿದರೆ ಸಾಕು.


ಸ್ವಾಭಿಮಾನ ಜೀವನಕ್ಕೆ ಅನುಕೂಲ


ಬೆಂಗಳೂರು: ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ ಕಲ್ಪಿಸುವ ‘ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌-ಧನ್‌ ಯೋಜನೆ’ಗೆ ಪೀಣ್ಯದ ಕಾರ್ಮಿಕರ ಭವಿಷ್ಯನಿಧಿ ಸಂಘಟನೆ ಕಚೇರಿಯಲ್ಲಿ ಮಂಗಳವಾರ ಚಾಲನೆ ದೊರೆಯಿತು.

ಸ್ವಾಭಿಮಾನ ಜೀವನಕ್ಕೆ ಅನುಕೂಲ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ಸಾಂಖ್ಯಿಕ ಸಚಿವ ಡಿ.ವಿ. ಸದಾನಂದಗೌಡ, ’’ಅಸಂಘಟಿತ ವಲಯದ ಕಾರ್ಮಿಕರು ಸ್ವಾಭಿಮಾನ ದಿಂದ ಜೀವನ ನಡೆಸಲು ಅನುಕೂಲವಾಗುವಂತಹ ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೊಳಿಸಿದೆ. 60 ವರ್ಷ ಕಳೆದ ಬಳಿಕ ಕಾರ್ಮಿಕರು ತಮ್ಮ ಹಣವಾದ ಪಿಂಚಣಿಯಿಂದಲೇ ಜೀವನ ನಡೆಸಬಹುದು. ಈ ಯೋಜನೆಯ ಬಗ್ಗೆ ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ಕಾರ್ಯ ಕ್ರಮ ಏರ್ಪಡಿಸಲಾಗಿದೆ,’’ ಎಂದರು.

ಭವಿಷ್ಯನಿಧಿ ಸಂಘಟನೆಯ ಪ್ರಾದೇಶಿಕ ಆಯುಕ್ತ ಆರ್‌.ಕೆ.ಸಿಂಗ್‌, ಮಾಜಿ ಶಾಸಕ ಮುನಿರಾಜು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ