ಆ್ಯಪ್ನಗರ

ಪ್ರಧಾನಿ ಭೇಟಿಯಾದ ಉರ್ಜಿತ್‌: ಬಿಕ್ಕಟ್ಟು ಬಹುತೇಕ ಅಂತ್ಯ?

ಹಣಕಾಸು ನೀತಿ ನಿರೂಪಣೆ ವಿಷಯದಲ್ಲಿ ಕೇಂದ್ರ ಸರಕಾರ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ನಡುವೆ ಉಂಟಾಗಿರುವ ಬಿಕ್ಕಟ್ಟು ಇತ್ಯರ್ಥಕ್ಕೆ ಆರ್‌ಬಿಐ ಗವರ್ನರ್‌ ಉರ್ಜಿತ್‌ ಉಟೇಲ್‌ ಅವರು ಪ್ರಧಾನಿ ಮೋದಿಯನ್ನು ಭೇಟಿಯಾಗಿ ಚರ್ಚೆ ನಡೆಸಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

Vijaya Karnataka Web 14 Nov 2018, 5:00 am
ಹೊಸದಿಲ್ಲಿ: ಹಣಕಾಸು ನೀತಿ ನಿರೂಪಣೆ ವಿಷಯದಲ್ಲಿ ಕೇಂದ್ರ ಸರಕಾರ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ನಡುವೆ ಉಂಟಾಗಿರುವ ಬಿಕ್ಕಟ್ಟು ಇತ್ಯರ್ಥಕ್ಕೆ ಆರ್‌ಬಿಐ ಗವರ್ನರ್‌ ಉರ್ಜಿತ್‌ ಉಟೇಲ್‌ ಅವರು ಪ್ರಧಾನಿ ಮೋದಿಯನ್ನು ಭೇಟಿಯಾಗಿ ಚರ್ಚೆ ನಡೆಸಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
Vijaya Karnataka Web pm modi urjit patel meet agree on formula to end unprecedented rbi vs centre rift sources
ಪ್ರಧಾನಿ ಭೇಟಿಯಾದ ಉರ್ಜಿತ್‌: ಬಿಕ್ಕಟ್ಟು ಬಹುತೇಕ ಅಂತ್ಯ?


ಮೂಲಗಳ ಪ್ರಕಾರ, ಕಳೆದ ಶುಕ್ರವಾರ(ನ.9) ದಿಲ್ಲಿಯಲ್ಲಿದ್ದ ಉರ್ಜಿತ್‌ ಅವರು, ಬಿಕ್ಕಟ್ಟಿನ ಕುರಿತು ಪ್ರಧಾನಿ ಮೋದಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ನ.19ರಂದು ನಡೆಯುವ ಆರ್‌ಬಿಐ ಮಂಡಳಿ ಸಭೆಯಲ್ಲಿ ಉರ್ಜಿತ್‌ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ. ಆರ್‌ಬಿಐ ಸ್ವಾಯತ್ತತೆ ಸಂಗತಿ ರಾಜಕೀಯ ವಾಗ್ವಾದಗಳಿಗೆ ಗುರಿಯಾಗುವುದನ್ನು ತಪ್ಪಿಸುವ ದಿಶೆಯಲ್ಲಿ ಬಿಜೆಪಿ ಪ್ರಮುಖರು ಉರ್ಜಿತ್‌ ಮತ್ತು ಪ್ರಧಾನಿ ನಡುವಿನ ಚರ್ಚೆಗೆ ಅನುವು ಮಾಡಿಕೊಟ್ಟಿದ್ದರು.

ಮೋದಿ ಮತ್ತು ಉರ್ಜಿತ್‌ ಭೇಟಿ ಬಳಿಕ ಆರ್‌ಬಿಐ ಹೆಚ್ಚುವರಿ ನಗದು ಬಿಡುಗಡೆ ಮಾಡಬೇಕು ಎನ್ನುವ ತನ್ನ ಬಿಗಿಪಟ್ಟನ್ನು ಆರ್ಥಿಕ ಸಚಿವಾಲಯ ಸಡಿಲಿಸಿದೆ. ಹಾಗೆಯೇ ಸಾಲ ನೀಡಿಕೆಗೆ ಇರುವ ಕಠಿಣ ನಿಯಮಗಳನ್ನು ಸಡಲಿಸಬೇಕು ಎನ್ನುವ ಪಟ್ಟಿನಿಂದ ಆರ್‌ಬಿಐ ಹಿಂದೆ ಸರಿದಿದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ