ಆ್ಯಪ್ನಗರ

ಭಾರತದ ವೇಗದ ರೈಲು ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ಚಾಲನೆ

ಹೊಸದಿಲ್ಲಿ ರೈಲ್ವೆ ಸ್ಟೇಶನ್‌ ಮತ್ತು ವಾರಾಣಸಿ ನಡುವೆ ಈ ಸೆಮಿ ಹೈಸ್ಪೀಡ್‌ ರೈಲು ಸಂಚರಿಸಲಿದೆ. ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮದಲ್ಲಿ ಸೂತಕದ ವಾತಾವರಣ ಇತ್ತು. ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಹಾಗೂ ರೈಲ್ವೆ ಮಂಡಳಿ ಅಧಿಕಾರಿಗಳು ಉಪಸ್ಥಿತರಿದ್ದರು.

Vijaya Karnataka Web 15 Feb 2019, 7:04 pm
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಅತ್ಯಂತ ವೇಗದ ರೈಲು ಎಂದು ಖ್ಯಾತಿ ಗಳಿಸಿರುವ, ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಶುಕ್ರವಾರ ಚಾಲನೆ ನೀಡಿದರು.
Vijaya Karnataka Web Modi train


ಹೊಸದಿಲ್ಲಿ ರೈಲ್ವೆ ಸ್ಟೇಶನ್‌ ಮತ್ತು ವಾರಾಣಸಿ ನಡುವೆ ಈ ಸೆಮಿ ಹೈಸ್ಪೀಡ್‌ ರೈಲು ಸಂಚರಿಸಲಿದೆ. ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮದಲ್ಲಿ ಸೂತಕದ ವಾತಾವರಣ ಇತ್ತು. ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಹಾಗೂ ರೈಲ್ವೆ ಮಂಡಳಿ ಅಧಿಕಾರಿಗಳು ಉಪಸ್ಥಿತರಿದ್ದರು. ರೈಲಿನ ಡಿಸೈನರ್‌, ಎಂಜಿನಿಯರ್‌ಗಳಿಗೆ ಪ್ರಧಾನಿ ಅಭಿನಂದಿಸಿದರು.

ಕಳೆದ 4.5 ವರ್ಷಗಳಲ್ಲಿ ರೈಲ್ವೆ ಇಲಾಖೆಯ ಸುಧಾರಣೆ ಗಣನೀಯವಾಗಿದ್ದು, ಇಲಾಖಾ ಸಿಬ್ಬಂದಿಯ ಕಠಿಣ ಪರಿಶ್ರಮದಿಂದ ಇದು ಸಾಧ್ಯವಾಗಿದೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.

ವಂದೇ ಭಾರತ್‌ ಎಕ್ಸ್‌ಪ್ರೆಸ್‌, ದಿಲ್ಲಿ-ವಾರಾಣಸಿ ನಡುವೆ 9 ಗಂಟೆ 45 ನಿಮಿಷಗಳ ಅವಧಿಯಲ್ಲಿ ಸಂಚರಿಸುತ್ತದೆ. ಇದರಲ್ಲಿ ಕಾನ್ಪುರ ಹಾಗೂ ಅಲಹಾಬಾದ್‌ನಲ್ಲಿ ತೆಗೆದುಕೊಳ್ಳುವ ತಲಾ 40 ನಿಮಿಷಗಳ ವಿರಾಮ ಕೂಡ ಇದೆ. ರೈಲನ್ನು ಪರಿಶೀಲಿಸಿದ ಪ್ರಧಾನಿ ಮೋದಿ, ಇಂಥ ರೈಲು ಚೆನ್ನೈನ ರೈಲ್ವೆ ಕಾರ್ಖಾನೆಯಲ್ಲಿ ತಯಾರಾಗಿರುವುದು ಹೆಮ್ಮೆಯ ಸಂಗತಿ ಎಂದರು.

ಗಂಟೆಗೆ 160 ಕಿ.ಮೀ ವೇಗದಲ್ಲಿ ಸಂಚರಿಸಬಲ್ಲ ರೈಲು, ಶತಾಬ್ಧಿ ರೈಲುಗಳಂತೆ ಅತ್ಯುತ್ತಮ ಸೌಲಭ್ಯಗಳನ್ನು ಒಳಗೊಂಡಿದೆ. ಫೆ.17ರಿಂದ ದಿಲ್ಲಿ-ವಾರಣಾಸಿ ನಡುವೆ ವಾಣಿಜ್ಯೋದ್ದೇಶದಿಂದ ಸಂಚಾರ ಆರಂಭಿಸಲಿದ್ದು, ಟಿಕೆಟ್‌ ಬುಕಿಂಗ್‌ ಶುರುವಾಗಿದೆ.

16 ಏಸಿ ಕೋಚ್‌ಗಳನ್ನು ರೈಲು ಹೊಂದಿದೆ. ಒಟ್ಟು 1,128 ಪ್ರಯಾಣಿಕರು ಪ್ರಯಾಣಿಸಬಹುದು. ಪ್ರತಿ ಬೋಗಿಯಲ್ಲೂ ಬಿಸಿ ಊಟ, ಬಿಸಿ ಹಾಗೂ ತಂಪು ಪಾನೀಯದ ಪೂರೈಕೆ ಇತ್ಯಾದಿ ಅನುಕೂಲಗಳು ಇವೆ. ಸ್ವಯಂಚಾಲಿತ ಬಾಗಿಲು, ಜಿಪಿಎಸ್‌ ಆಧಾರಿತ ಆಡಿಯೊ-ವಿಶ್ಯುವಲ್‌ ಪ್ರಯಾಣಿಕರ ಮಾಹಿತಿ ಸಿಸ್ಟಮ್‌, ವೈ-ಫೈ ಸೌಕರ್ಯ ಕಲ್ಪಿಸಲಾಗಿದೆ.

ಟಿಕೆಟ್‌ ಭರ್ಜರಿ ಮಾರಾಟ
ದಿಲ್ಲಿ-ವಾರಾಣಸಿ ನಡುವೆ ಈ ರೈಲಿನ ಟಿಕೆಟ್‌ ದರ ಎಕ್ಸಿಕ್ಯುಟಿವ್‌ ದರ್ಜೆಗೆ 3,310 ರೂ. ಹಾಗೂ ಚೇರ್‌ ಕಾರ್‌ ದರ್ಜೆಗೆ 1,760 ರೂ.ಗಳಾಗಿದೆ. ಈಗಾಗಲೇ ಟಿಕೆಟ್‌ಗೆ ಭಾರಿ ಬೇಡಿಕೆ ಲಭಿಸಿದೆ. ಫೆ.17ರ ಮೊದಲ ವಾಣಿಜ್ಯೋದ್ದೇಶದ ಪ್ರಯಾಣದ ಸಲುವಾಗಿ ಟಿಕೆಟ್‌ ಬುಕಿಂಗ್‌ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ಎಲ್ಲ ಟಿಕೆಟ್‌ಗಳೂ ಬಿಸಿ ಬಿಸಿ ದೋಸೆಯಂತೆ ಮಾರಾಟವಾಯಿತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ