ಆ್ಯಪ್ನಗರ

2021ರ ಪಿಎಂಎವೈ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್‌ ಮಾಡುವುದು ಹೇಗೆ? ಇಲ್ಲಿದೆ ವಿವರ

ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಯೋಜನೆ (ಪಿಎಂಎವೈ) 2020-21ರ ಫಲಾನುಭವಿಗಳ ಪಟ್ಟಿ ಬಿಡುಗಡೆಯಾಗಿದೆ. ನೀವು ಈ ಯೋಜನೆಗಾಗಿ ಅರ್ಜಿ ಸಲ್ಲಿಸಿದ್ದಲ್ಲಿ, ನಿಮ್ಮ ಹೆಸರು ಪಟ್ಟಿಯಲ್ಲಿ ಇದೆಯೋ? ಇಲ್ಲವೋ? ಎಂದು ಪರಿಶೀಲಿಸಬಹುದು.

Vijaya Karnataka Web 23 Nov 2020, 6:55 pm
ಹೊಸದಿಲ್ಲಿ: ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಯೋಜನೆ (ಪಿಎಂಎವೈ) 2020-21ರ ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನೀವು ಈ ಯೋಜನೆಗಾಗಿ ಅರ್ಜಿ ಸಲ್ಲಿಸಿದ್ದಲ್ಲಿ, ನಿಮ್ಮ ಹೆಸರು ಪಟ್ಟಿಯಲ್ಲಿ ಇದೆಯೋ? ಇಲ್ಲವೋ? ಎಂದು ಪರಿಶೀಲಿಸಬಹುದು.
Vijaya Karnataka Web PMAY
Picture for representational purpose only.


ಪಿಎಂಎವೈ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ನಿಮ್ಮ ಹೆಸರಿದೆಯೇ? ಎಂಬುದನ್ನು ಚೆಕ್ ಮಾಡುವುದು ಹೇಗೆಂಬ ವಿವರ ಇಲ್ಲಿದೆ.

ವಿಧಾನ: 1
ಪಿಎಂಎವೈ ಯೋಜನೆಯ ಲಾಭ ಪಡೆಯಲು ಈಗಾಗಲೇ ಅರ್ಜಿ ಸಲ್ಲಿಸಿರುವವರು, ಸರಕಾರದ ಅಧಿಕೃತ ವೆಬ್‌ಸೈಟ್‌ pmayg.nic.inಗೆ ಭೇಟಿಯಾಗಿ, ಅಲ್ಲಿ ನೋಂದಣಿ ಸಂಖ್ಯೆ ನಮೂದಿಸಿ ಕ್ಲಿಕ್‌ ಮಾಡಿ. ನೀವು ಫಲಾನುಭವಿಗಳಾಗಿದ್ದರೆ ಸಂಬಂಧಪಟ್ಟ ವಿವರಗಳು ದೊರೆಯುತ್ತದೆ.

ಕಡಿಮೆ ದರದ ಮನೆಗಳಿಗೆ ಕರ್ನಾಟಕ ಹೊಸನೀತಿ

ವಿಧಾನ: 2
ಅಧಿಕೃತ ವೆಬ್‌ಸೈಟ್‌ pmayg.nic.inಗೆ ಭೇಟಿಯಾಗಿ, ಅಲ್ಲಿ ನೋಂದಣಿ ಸಂಖ್ಯೆಯ ಬದಲು 'ಅಡ್ವಾನ್ಸ್‌ ಸರ್ಚ್‌ ಬಟನ್‌ ಮೇಲೆ ಕ್ಲಿಕ್‌ ಮಾಡಿ. ಪರದೆ ಮೇಲೆ ಒಂದು ಫಾರ್ಮ್‌ ತೆರೆದುಕೊಳ್ಳುತ್ತದೆ. ಫಾರ್ಮ್‌ನಲ್ಲಿ ಕೇಳಿರುವ ವಿವರಗಳನ್ನೆಲ್ಲ ತುಂಬಿ, ಸರ್ಚ್‌ ಕೊಟ್ಟರೆ, ವಿವರಗಳು ತೆರೆದುಕೊಳ್ಳುತ್ತವೆ.

ಈ ಹಿಂದೆ ಇಂದಿರಾ ಆವಾಸ್ ಯೋಜನೆ ಎಂಬ ಹೆಸರಲ್ಲಿದ್ದ ಯೋಜನೆಯನ್ನು 2016ರ ಮಾರ್ಚ್‌ನಲ್ಲಿ 'ಪ್ರಧಾನ ಮಂತ್ರಿ ಆವಾಸ್‌ ಯೋಜನೆ' ಎಂದು ಮರುನಾಮಕರಣ ಮಾಡಲಾಯಿತು. ಗ್ರಾಮೀಣಾಭಿವೃದ್ಧಿ ಸಚಿವಾಲಯದ ಪ್ರಕಾರ, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 1,03,01,107 ಮನೆಗಳನ್ನ ಅನುಮೋದಿಸಲಾಗಿದೆ.

ಬಡವರನ್ನು ಸಶಕ್ತಗೊಳಿಸುವ ಮೂಲಕ ಬಡತನ ಅಂತ್ಯಗೊಳಿಸಬೇಕು: ಪ್ರಧಾನಿ ಮೋದಿ ಕರೆ

ಏನಿದು ಯೋಜನೆ: ಪಿಎಂಎವೈ ಯೋಜನೆಯಡಿ ಗ್ರಾಮೀಣ ಪ್ರದೇಶದ ದುರ್ಬಲ ವರ್ಗದವರಿಗೆ ಮನೆ ನಿರ್ಮಿಸಲು ಸರ್ಕಾರ ಹಣ ನೀಡುತ್ತಿದೆ. ಹಳೆಯ ಮನೆ ಹೊಂದಿರುವವರಿಗೆ ಕೇಂದ್ರ ಸರ್ಕಾರ ಕೂಡ ಘನ ಮನೆ ನಿರ್ಮಿಸಲು ಸಹಾಯ ಮಾಡುತ್ತಿದೆ. ಬಯಲು ಪ್ರದೇಶದಲ್ಲಿ ಮನೆ ಕಟ್ಟಲು ಯಾರಾದರೂ ಬಯಸಿದರೆ 1,20,000 ರೂ., ಗುಡ್ಡಗಾಡು ಪ್ರದೇಶದಲ್ಲಿ ಮನೆ ಕಟ್ಟಬೇಕು ಎಂದು ಯಾರಾದರೂ ಬಯಸಿದರೆ ಕೇಂದ್ರ ಸರ್ಕಾರ ಅವರಿಗೆ 1,30,000ರೂ. ನೀಡಲಿದೆ. 2022ರ ವೇಳೆಗೆ 1 ಕೋಟಿ ಜನರಿಗೆ ಪಕ್ಕಾ ಮನೆ ಒದಗಿಸುವ ಗುರಿ ಹೊಂದಲಾಗಿದೆ.

ಯಾರು ಅರ್ಹರು: ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಯೋಜನೆಗೆ ಲಾಭ ಪಡೆಯಲು ಜನರು ಈ ಕೆಳಗಿನ ಆರ್ಹತೆಗಳನ್ನ ಹೊಂದಿರಬೇಕು
  • * ಆರ್ಥಿಕವಾಗಿ ಸದೃಢವಾಗಿಲ್ಲದ ವರ್ಗ ಅಥವಾ ಮಹಿಳೆ.
  • * ಪರಿಶಿಷ್ಟ ಜಾತಿ ಮತ್ತು ಪಂಗಡದವರು.
  • * ವಯಸ್ಕ ಸದಸ್ಯನಿಲ್ಲದ (16 ರಿಂದ 59 ವರ್ಷ) ಕುಟುಂಬಗಳು
  • * ಕೂಲಿ ಕಾರ್ಮಿಕರಾಗಿ ದುಡಿಯುವ ಭೂರಹಿತ ಕುಟುಂಬ .
  • * ವಾರ್ಷಿಕ ಆದಾಯ 3 ಲಕ್ಷದಿಂದ 6 ಲಕ್ಷ ರೂಪಾಯಿಗಿಂತ ಹೆಚ್ಚಿರಬಾರದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ