ಆ್ಯಪ್ನಗರ

ಜಾಮೀನಿಗಾಗಿ ನಾಯಿಯ ನೆಪ ಹೇಳಿದ ನೀರವ್‌!

ನೀರವ್‌ ಅವರಿಗೆ ಜಾಮೀನು ನೀಡದೇ ಹೋದರೆ, ಸಾಕು ನಾಯಿಗೆ ತೊಂದರೆಯಾಗುತ್ತದೆ. ಮನೆಯಲ್ಲಿ ಸಾಕು ನಾಯಿಯನ್ನು ನೋಡಿಕೊಳ್ಳಲು ಯಾರೂ ಇಲ್ಲ ಎಂದು ವಾದಿಸಿದ್ದ ವಕೀಲರು.

Vijaya Karnataka Web 31 Mar 2019, 10:31 am
ಹೊಸದಿಲ್ಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣದ ಪ್ರಮುಖ ಆರೋಪಿ ನೀರವ್‌ ಮೋದಿ ಜಾಮೀನು ಪಡೆಯಲು ಸಾಕಿದ ನಾಯಿಯ ಆರೈಕೆ ಸೇರಿದಂತೆ ನಾನಾ ನೆಪಗಳನ್ನು ಮುಂದಿಟ್ಟಿರುವುದು ಬಯಲಾಗಿದೆ. ಆದರೆ, ನೀರವ್‌ರ ಎರಡನೇ ಜಾಮೀನು ಅರ್ಜಿಯನ್ನೂ ಕೋರ್ಟ್‌ ತಳ್ಳಿ ಹಾಕಿದೆ.
Vijaya Karnataka Web Nirav


ವೆಸ್ಟ್‌ಮಿನ್‌ಸ್ಟರ್‌ ಮ್ಯಾಜಿಸ್ಪ್ರೇಟ್‌ ಕೋರ್ಟ್‌ನಲ್ಲಿ ನೀರವ್‌ ಪರ ವಕೀಲೆ ಕ್ಲೇರ್‌ ಮಾಂಟ್‌ಗೋಮೆರಿ, ''ನೀರವ್‌ರ ಪುತ್ರ ಲಂಡನ್‌ ಸ್ಕೂಲ್‌ನಲ್ಲಿ ಓದುತ್ತಿದ್ದರು. ಈಗ ಅಮೆರಿಕಕ್ಕೆ ವಿದ್ಯಾಭ್ಯಾಸದ ಸಲುವಾಗಿ ತೆರಳಿದ್ದಾರೆ. ಮಗ ದೂರವಾದ ಮೇಲೆ ವೃದ್ಧಾಪ್ಯದ ಒಂಟಿತನದಿಂದ ಪಾರಾಗಲು ನಾಯೊಂದನ್ನು ಸಾಕಿದ್ದಾರೆ. ನೀರವ್‌ ಅವರಿಗೆ ಜಾಮೀನು ನೀಡದೇ ಹೋದರೆ, ಸಾಕು ನಾಯಿಗೆ ತೊಂದರೆಯಾಗುತ್ತದೆ. ಮನೆಯಲ್ಲಿ ಸಾಕು ನಾಯಿಯನ್ನು ನೋಡಿಕೊಳ್ಳಲು ಯಾರೂ ಇಲ್ಲ,'' ಎಂದು ವಾದಿಸಿದರು.

ಬ್ರಿಟನ್‌ನಲ್ಲಿ ಸಾಕು ಪ್ರಾಣಿಗಳಿಗೆ ಹೆಚ್ಚಿನ ಪ್ರಾಮುಖ್ಯವಿದ್ದು, ಈ ಅಂಶವನ್ನು ಬಳಸಿಕೊಂಡು ನೀರವ್‌ಗೆ ಜಾಮೀನು ಕೊಡಿಸಲು ಕ್ಲೇರ್‌ ಯತ್ನಿಸಿದರು. ''ಬ್ರಿಟನ್‌ ದೇಶ ತೊರೆಯಲು ಅಥವಾ ಇನ್ನೊಂದು ದೇಶದ ಪೌರತ್ವ ಪಡೆಯುವ ಯತ್ನವನ್ನು ನೀರವ್‌ ನಡೆಸಿಲ್ಲ,'' ಎಂದು ಹೇಳಿದರು. ಆದರೆ ಕೋರ್ಟ್‌ ಇದಕ್ಕೆ ಒಪ್ಪದೆ ಜಾಮೀನು ತಿರಸ್ಕರಿಸಿದ್ದು ವಿಚಾರಣೆಯನ್ನು ಏಪ್ರಿಲ್‌ 26ಕ್ಕೆ ನಿಗದಿಪಡಿಸಿದೆ. ಲಂಡನ್‌ನ ವ್ಯಾಂಡ್ಸ್‌ವರ್ಥ್‌ ಜೈಲಿನಲ್ಲಿ ನೀರವ್‌ ಇದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ