ಮುಂಬಯಿ: ತಮ್ಮ ಹಣಕಾಸು ನೀತಿಗಳ ಮೂಲಕ ಸುಬ್ರಮಣ್ಯನ್ ಸ್ವಾಮಿ ಸೇರಿದಂತೆ ಹಲವು ಬಿಜೆಪಿ ನಾಯಕರ ವಿರೋಧಕ್ಕೆ ಗುರಿಯಾಗಿರುವ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಎರಡನೇ ಅವಧಿಗೆ ತಾವು ಹುದ್ದೆಯಲ್ಲಿ ಮುಂದುವರಿಯಲು ಇಚ್ಛಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮುಂಬರುವ ಸೆಪ್ಟೆಂಬರ್ನಲ್ಲಿ ಅಧಿಕಾರಾವಧಿ ಪೂರ್ಣಗೊಂಡ ಬಳಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಮರಳುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅಗತ್ಯ ಬಿದ್ದಾಗ ದೇಶದ ಸೇವೆಗಾಗಿ ತಾವು ಸದಾ ಸಿದ್ಧರಿರುವುದಾಗಿ ಸಿಬ್ಬಂದಿಗೆ ಬರೆದ ಸಂದೇಶ ಪತ್ರದಲ್ಲಿ ರಾಜನ್ ಹೇಳಿದ್ದಾರೆ.
ಈ ಮಧ್ಯೆ, ರಾಜನ್ ಅವರ ನಿರ್ಧಾರವನ್ನು ಗೌರವಿಸುವುದಾಗಿ ತಿಳಿಸಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ಶೀಘ್ರದಲ್ಲೇ ನೂತನ ಗವರ್ನರ್ ಹೆಸರನ್ನು ಘೋಷಿಸುವುದಾಗಿ ತಿಳಿಸಿದ್ದಾರೆ. 1992ರ ಬಳಿಕ ಎರಡನೇ ಅವಧಿಗೆ ಅಧಿಕಾರದಲ್ಲಿ ಮುಂದುವರಿಯಲು ನಿರಾಕರಿಸಿದ ಮೊದಲ ಆರ್ಬಿಐ ಗವರ್ನರ್ ರಾಜನ್ ಅವರಾಗಿದ್ದಾರೆ.
ಮುಂಬರುವ ಸೆಪ್ಟೆಂಬರ್ನಲ್ಲಿ ಅಧಿಕಾರಾವಧಿ ಪೂರ್ಣಗೊಂಡ ಬಳಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಮರಳುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅಗತ್ಯ ಬಿದ್ದಾಗ ದೇಶದ ಸೇವೆಗಾಗಿ ತಾವು ಸದಾ ಸಿದ್ಧರಿರುವುದಾಗಿ ಸಿಬ್ಬಂದಿಗೆ ಬರೆದ ಸಂದೇಶ ಪತ್ರದಲ್ಲಿ ರಾಜನ್ ಹೇಳಿದ್ದಾರೆ.
ಈ ಮಧ್ಯೆ, ರಾಜನ್ ಅವರ ನಿರ್ಧಾರವನ್ನು ಗೌರವಿಸುವುದಾಗಿ ತಿಳಿಸಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ಶೀಘ್ರದಲ್ಲೇ ನೂತನ ಗವರ್ನರ್ ಹೆಸರನ್ನು ಘೋಷಿಸುವುದಾಗಿ ತಿಳಿಸಿದ್ದಾರೆ. 1992ರ ಬಳಿಕ ಎರಡನೇ ಅವಧಿಗೆ ಅಧಿಕಾರದಲ್ಲಿ ಮುಂದುವರಿಯಲು ನಿರಾಕರಿಸಿದ ಮೊದಲ ಆರ್ಬಿಐ ಗವರ್ನರ್ ರಾಜನ್ ಅವರಾಗಿದ್ದಾರೆ.