ಆ್ಯಪ್ನಗರ

ರೈಲ್ವೆ ಟಿಕೆಟ್‌ ವಿನಾಯಿತಿ ತ್ಯಾಗಕ್ಕೆ ಅವಕಾಶ

ಸಬ್ಸಿಡಿ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಸಬ್ಸಿಡಿ ಬಿಟ್ಟುಕೊಡುವಂತೆ ಕೇಂದ್ರ ಸರಕಾರವು ಆಂದೋಲನ ನಡೆಸಿತು. ಇದೇ ಮಾದರಿಯಲ್ಲಿ ರೈಲ್ವೆ ಇಲಾಖೆಯು ತನ್ನ ಮೇಲಿನ ಹೊರೆ ಇಳಿಸಿಕೊಳ್ಳಲು ಮುಂದಾಗಿದೆ.

Vijaya Karnataka Web 27 Jun 2016, 4:29 am
ಹೊಸದಿಲ್ಲಿ : ಸಬ್ಸಿಡಿ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಸಬ್ಸಿಡಿ ಬಿಟ್ಟುಕೊಡುವಂತೆ ಕೇಂದ್ರ ಸರಕಾರವು ಆಂದೋಲನ ನಡೆಸಿತು. ಇದೇ ಮಾದರಿಯಲ್ಲಿ ರೈಲ್ವೆ ಇಲಾಖೆಯು ತನ್ನ ಮೇಲಿನ ಹೊರೆ ಇಳಿಸಿಕೊಳ್ಳಲು ಮುಂದಾಗಿದೆ.
Vijaya Karnataka Web railway tickets allowing exemption sacrifice
ರೈಲ್ವೆ ಟಿಕೆಟ್‌ ವಿನಾಯಿತಿ ತ್ಯಾಗಕ್ಕೆ ಅವಕಾಶ


ಟಿಕೆಟ್‌ ಖರೀದಿ ವೇಳೆ ರೈಲ್ವೆ ಟಿಕೆಟ್‌ ವಿನಾಯಿತಿಯನ್ನು ಇಲಾಖೆಗೇ ಬಿಟ್ಟು ಕೊಡುವ ಆಯ್ಕೆಯನ್ನು ಹಿರಿಯ ನಾಗರಿಕರಿಗೆ ಈಗ ನೀಡಲಾಗಿದೆ. ಕಾಯ್ಡಿರಿಸುವ ಟಿಕೆಟ್‌ಗಳ ಖರೀದಿ ವೇಳೆ ತಮಗೆ ರಿಯಾಯಿತಿ ಅಗತ್ಯವಿಲ್ಲ ಎಂದು ಭಾವಿಸುವ ಹಿರಿಯ ನಾಗರಿಕರು ಅದನ್ನು ನಿರಾಕರಿಸಿ, ಸಾಮಾನ್ಯ ದರ ಮುದ್ರಣಗೊಂಡ ಟಿಕೆಟ್‌ಗಳನ್ನೇ ಪಡೆಯಬಹುದು.

ಹಿರಿಯ ನಾಗರಿಕರು, ಪ್ರಶಸ್ತಿ ಪುರಸ್ಕೃತ ಕ್ರೀಡಾಪಟುಗಳು ಮತ್ತು ಕ್ಯಾನ್ಸರ್‌ ರೋಗಿಗಳು ಮತ್ತಿತರರಿಗೆ ರೈಲ್ವೆ ಪ್ರಯಾಣದಲ್ಲಿ ರಿಯಾಯಿತಿ ನೀಡಲಾಗಿದ್ದು, ಇಲಾಖೆಗೆ 1600 ಕೋಟಿ ರೂ. ಹೊರೆ ಬೀಳುತ್ತಿದೆ(ಕಳೆದ ವರ್ಷದ ಮೊತ್ತ). ಸುಮಾರು 55 ವಿಭಾಗಗಳ ಪ್ರಯಾಣಿಕರಿಗೆ ರಿಯಾಯಿತಿ ಟಿಕೆಟ್‌ಗಳು ಲಭ್ಯ ಇವೆ.

ಹಿರಿಯ ನಾಗರಿಕರಿಗೆ ನೀಡುವ ವಿನಾಯಿತಿಯಿಂದಲೇ ಇಲಾಖೆಗೆ ಕಳೆದ ವರ್ಷ 1,100 ಕೋಟಿ ರೂ. ಸಬ್ಸಿಡಿ ಹೊರೆ ಬಿದ್ದಿದೆ.

58 ವರ್ಷ ಮೀರಿದ ಮಹಿಳಾ ಹಿರಿಯ ನಾಗರಿಕರಿಗೆ ಶೇ.50, 60 ವರ್ಷ ಮೀರಿದ ಪುರುಷರಿಗೆ ಶೇ.40ರಷ್ಟು ರಿಯಾಯಿತಿ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ