ಆ್ಯಪ್ನಗರ

ಆರ್ಥಿಕ ಅಪರಾಧಿಗಳ ವಿರುದ್ಧದ ವಿಧೇಯಕ ಅಂಗೀಕಾರ

ಆರ್ಥಿಕ ಅಪರಾಧಿಗಳ ವಿರುದ್ಧದ ವಿಧೇಯಕವನ್ನು ಸಂಸತ್ತು ಅಂಗೀಕರಿಸಿದೆ...

Vijaya Karnataka 25 Jul 2018, 8:20 pm
ಹೊಸದಿಲ್ಲಿ : ಆರ್ಥಿಕ ಅಪರಾಧಿಗಳ ವಿರುದ್ಧದ ವಿಧೇಯಕವನ್ನು ಸಂಸತ್ತು ಅಂಗೀಕರಿಸಿದೆ. ವಿಜಯ್‌ ಮಲ್ಯ, ನೀರವ್‌ ಮೋದಿ ಮುಂತಾದವರು ಕಾನೂನುಕ್ರಮಗಳಿಂದ ನುಣುಚಿಕೊಳ್ಳಲು ವಿದೇಶಕ್ಕೆ ಪರಾರಿಯಾಗದಂತೆ ತಡೆಯಲು ವಿಧೇಯಕ ಸಹಕಾರಿಯಾಗಲಿದೆ.
Vijaya Karnataka Web ಸಂಸತ್‌ ಭವನ
ಸಂಸತ್‌ ಭವನ


ಘೋಷಿತ ಆರ್ಥಿಕ ಅಪರಾಧಿಗಳ ವಿಧೇಯಕ 2018 ರಾಜ್ಯಸಭೆಯಲ್ಲಿ ಧ್ವನಿಮತಗಳಿಂದ ಬುಧವಾರ ಅಂಗೀಕಾರವಾಯಿತು. ಜುಲೈ 19ರಂದು ಲೋಕಸಭೆಯಲ್ಲಿ ಅಂಗೀಕಾರವಾಗಿತ್ತು.

ದೇಶದಲ್ಲಿ ಅಕ್ರಮ ವ್ಯವಹಾರವೆಸಗಿ ವಿದೇಶಕ್ಕೆ ಪಲಾಯನ ಮಾಡುವವರ ಸಂಖ್ಯೆ ಹೆಚ್ಚುತ್ತಿದ್ದು, ಇದನ್ನು ತಡೆಯಲು ವಿಧೇಯಕದ ಅಗತ್ಯ ಇತ್ತು ಎಂದು ಹಣಕಾಸು ಖಾತೆ ಉಸ್ತುವಾರಿ ಸಚಿವ ಪಿಯೂಷ್‌ ಗೋಯಲ್‌ ತಿಳಿಸಿದರು.

100 ಕೋಟಿ ರೂ.ಗಿಂತ ಹೆಚ್ಚು ಮೊತ್ತದ ಆರ್ಥಿಕ ಅಪರಾಧಗಳು ಈ ವಿಧೇಯಕದ ಅಡಿಗೆ ಬರಲಿದೆ. ಸದ್ಯಕ್ಕೆ 55 ಘೋಷಿತ ಆರ್ಥಿಕ ಅಪರಾಧಿಗಳು ದೇಶವನ್ನು ತೊರೆದಿದ್ದಾರೆ. ತೆರಿಗೆ ವಂಚನೆ, ಸುಸ್ತಿ ಸಾಲ ಹಗರಣ, ಅಕ್ರಮ ಹಣ ವರ್ಗಾವಣೆ, ಬೇನಾಮಿ ಆಸ್ತಿ ಇತ್ಯಾದಿ ಆರೋಪಗಳನ್ನು ಎದುರಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ