ಆ್ಯಪ್ನಗರ

ಮ್ಯೂಚುವಲ್ ಫಂಡ್ ಗೆ ₹50 ಸಾವಿರ ಕೋಟಿ ವಿಶೇಷ ಸೌಲಭ್ಯ ಪ್ರಕಟಿಸಿದ ಆರ್‌ಬಿಐ

ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ 'ಭಾರತೀಯ ರಿಸರ್ವ್‌ ಬ್ಯಾಂಕ್‌ ಬಹು ದೊಡ್ಡ ರಿಲೀಫ್ ನೀಡಿದೆ. ಮ್ಯೂಚುವಲ್‌ ಫಂಡ್‌ ಗಳಿಗೆ ಆರ್‌ಬಿಐ ಸೋಮವಾರ 50,000 ಕೋಟಿ ರೂಪಾಯಿಯ ವಿಶೇಷ ದ್ರವ್ಯತಾ ವ್ಯವಸ್ಥೆ (ಎಸ್‌ಎಲ್‌ಎಫ್-ಎಂಎಫ್) ಒದಗಿಸಿದೆ.

Vijaya Karnataka Web 27 Apr 2020, 1:32 pm
ನವದೆಹಲಿ: ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ 'ಭಾರತೀಯ ರಿಸರ್ವ್‌ ಬ್ಯಾಂಕ್‌ ಬಹು ದೊಡ್ಡ ರಿಲೀಫ್ ನೀಡಿದೆ. ಮ್ಯೂಚುವಲ್‌ ಫಂಡ್‌ ಗಳಿಗೆ ಆರ್‌ಬಿಐ ಸೋಮವಾರ 50,000 ಕೋಟಿ ರೂಪಾಯಿಯ ವಿಶೇಷ ದ್ರವ್ಯತಾ ವ್ಯವಸ್ಥೆ
Vijaya Karnataka Web mutual fund

(ಎಸ್‌ಎಲ್‌ಎಫ್-ಎಂಎಫ್) ಒದಗಿಸಿದೆ.

ಕೊರೊನಾ ವೈರಸ್ ನಿಯಂತ್ರಿಸುವ ಸಲುವಾಗಿ ದೇಶಾದ್ಯಂತ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಇದರಿಂದ ಬಂಡವಾಳ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದೆ. ಇದರಿಂದಾಗಿ ಮ್ಯೂಚುವಲ್ ಫಂಡ್‌ ಹೂಡಿಕೆದಾರರಿಗೆ ಕಳವಳ ಉಂಟಾಗಿತ್ತು. ಇದೀಗ ಆರ್‌ಬಿಐ ರಿಲೀಫ್ ನೀಡಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಲಾಕ್ ಡೌನ್ ಹಿನ್ನೆಲೆಯಲ್ಲಿ ಹಣಕಾಸು ಮಾರುಕಟ್ಟೆಯಲ್ಲಿ ಉಂಟಾಗಿರುವ ತಲ್ಲಣವನ್ನು ಬಗೆಹರಿಸಲು ಮ್ಯೂಚುವಲ್ ಫಂಡ್ ಗಳ ಮೇಲಿನ ದ್ರವ್ಯತೆ ಒತ್ತಡವನ್ನು ಸುಗಮಗೊಳಿಸಲು ಆರ್ ಬಿಐ ಈ ಕ್ರಮ ಕೈಗೊಂಡಿದೆ.

ಜನರ ಹಣ ಉಳಿತಾಯಕ್ಕೆ ಸರಕಾರ ಮಾರ್ಗೋಪಾಯ ಹುಡುಕಬೇಕಿದೆ: ಎಚ್‌ಡಿಕೆ

ಆರ್ಥಿಕ ಮಾರುಕಟ್ಟೆ ಪೂರ್ಣವಾಗಿ ಕುಸಿದಿರುವ ಈ ಸಮಯದಲ್ಲಿ ಆರ್ಥಿಕ ಸ್ಥಿರತೆ ಸಾಧಿಸಲು ಹೆಚ್ಚು ಜಾಗರೂಕತೆಯಿಂದ ಕ್ರಮ ಕೈಗೊಳ್ಳಲಾಗುವುದು. ಮ್ಯೂಚುವಲ್ ಫಂಡ್ ಗಳ ಮೇಲಿನ ದ್ರವ್ಯತೆ ಒತ್ತಡವನ್ನು ನಿವಾರಿಸಲು 50 ಸಾವಿರ ಕೋಟಿ ರೂಪಾಯಿಗಳ ಮ್ಯೂಚುವಲ್ ಫಂಡ್ ಗಳ ವಿಶೇಷ ದ್ರವ್ಯತೆ ಸೌಲಭ್ಯ ನೀಡಲು ನಿರ್ಧರಿಸಲಾಗಿದೆ ಎಂದು ಆರ್ ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಯೆಸ್ ಬ್ಯಾಂಕ್ ಹಗರಣ: ಲಾಕ್‌ಡೌನ್ ಉಲ್ಲಂಘಿಸಿ ಪಾರ್ಟಿ ಮಾಡಿದ್ದ ವಾದ್ವಾನ್ ಸಹೋದರರು ಸಿಬಿಐ ವಶಕ್ಕೆ!

ಈ ಸೌಲಭ್ಯದಡಿ, ಆರ್ ಬಿಐ ನಿರ್ದಿಷ್ಟ ದರದಲ್ಲಿ 90 ದಿನಗಳ ರೆಪೋ ಕಾರ್ಯಚರಣೆ ನಡೆಸಬಹುದಾಗಿದೆ. ಈ ಹಣವನ್ನು ಪಡೆಯಲು ರಜಾದಿನಗಳನ್ನು ಹೊರತುಪಡಿಸಿ ಸೋಮವಾರದಿಂದ ಶುಕ್ರವಾರ ನಡುವೆ ಬ್ಯಾಂಕುಗಳು ತಮ್ಮ ಬಿಡ್ ಗಳನ್ನು ಸಲ್ಲಿಸಬಹುದು. ಇಂದಿನಿಂದ ಮೇ 11ರವರೆಗೆ ಅಥವಾ ಹಂಚಿಕೆಯಾದ ಹಣ ಬಳಕೆಯಾಗುವವರೆಗೆ ಯಾವುದು ಮೊದಲು ಅನ್ವಯವಾಗುತ್ತದೆಯೋ ಅಲ್ಲಿಯವರೆಗೆ ಈ ಸೌಲಭ್ಯ ಅನ್ವಯವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ