ಆ್ಯಪ್ನಗರ

ಎನ್‌ಪಿಎ ಹೆಚ್ಚಿಸುತ್ತಿರುವ ಮುದ್ರಾ: ಆರ್‌ಬಿಐ ಎಚ್ಚರಿಕೆ

ವಸೂಲಾಗದ ಸಾಲಗಳ(ಎನ್‌ಪಿಎ) ಗಾತ್ರ ಹೆಚ್ಚುತ್ತಿದ್ದು ಬ್ಯಾಂಕ್‌ಗಳು ತತ್ತರಿಸಿವೆ...

THE ECONOMIC TIMES 14 Jan 2019, 5:00 am
ಹೊಸದಿಲ್ಲಿ: ವಸೂಲಾಗದ ಸಾಲಗಳ(ಎನ್‌ಪಿಎ) ಗಾತ್ರ ಹೆಚ್ಚುತ್ತಿದ್ದು ಬ್ಯಾಂಕ್‌ಗಳು ತತ್ತರಿಸಿವೆ. ಈ ಎನ್‌ಪಿಎ ಗಾತ್ರವನ್ನು ಮುದ್ರಾ ಯೋಜನೆ ಇನ್ನಷ್ಟು ಹಿಗ್ಗಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಎಚ್ಚರಿಸಿದೆ.
Vijaya Karnataka Web rbi cautions government over npa spike in mudra loans
ಎನ್‌ಪಿಎ ಹೆಚ್ಚಿಸುತ್ತಿರುವ ಮುದ್ರಾ: ಆರ್‌ಬಿಐ ಎಚ್ಚರಿಕೆ


ಸಣ್ಣ ಕೈಗಾರಿಕೆಗಳು ಸೇರಿದಂತೆ ಸ್ವಯಂ ಉದ್ಯಮ ಆರಂಭಿಸಲು ನೆರವಾಗಲು ಕೇಂದ್ರ ಸರಕಾರ ಆರಂಭಿಸಿದ್ದ ಮಹತ್ವಾಕಾಂಕ್ಷೆಯ ಮುದ್ರಾ ಸಾಲ ಯೋಜನೆಯು ಬ್ಯಾಂಕ್‌ಗಳಿಗೆ ಭಾರವಾಗುತ್ತಿದೆ. ಈ ಯೋಜನೆಯಡಿ ವಸೂಲಾಗದ ಸಾಲಗಳ ಮೊತ್ತ 11,000 ಕೋಟಿ ರೂ. ಮುಟ್ಟಿದೆ ಎಂದು ಆರ್‌ಬಿಐ ಹೇಳಿದೆ.

ಹಣಕಾಸು ಸಚಿವಾಲಯದ ಮೂಲಗಳ ಪ್ರಕಾರ, ಮುದ್ರಾ ಯೋಜನೆಯ ಸಾಲವು ಬ್ಯಾಂಕಿಂಗ್‌ ವಲಯದಲ್ಲಿ ಬೃಹತ್‌ ಪ್ರಮಾಣದಲ್ಲಿ ಬೆಳೆಯಲಿದೆ ಎಂದು ಆರ್‌ಬಿಐ ಕಳವಳ ವ್ಯಕ್ತಪಡಿಸಿದೆ. ಮುದ್ರಾ ಯೋಜನೆಯ ವಾರ್ಷಿಕ ವರದಿ ಪ್ರಕಾರ, 2017-18ರಲ್ಲಿ 2.46 ಲಕ್ಷ ಕೋಟಿ ರೂ. ಸಾಲವನ್ನು ವಿತರಣೆ ಮಾಡಲಾಗಿದೆ. ಇದರ ಪೈಕಿ ಶೇ.40ರಷ್ಟನ್ನು ಮಹಿಳಾ ಉದ್ಯಮಿಗಳಿಗೆ, ಶೇ.33ರಷ್ಟನ್ನು ಸೋಷಿಯಲ್‌ ಕ್ಯಾಟಗರಿಗಳಿಗೆ ನೀಡಲಾಗಿದೆ. 4.81 ಕೋಟಿಗೂ ಅಧಿಕ ಸಣ್ಣ ಉದ್ಯಮಿಗಳಿಗೆ ಲಾಭವಾಗಿದೆ.

2015ರ ಏಪ್ರಿಲ್‌ನಲ್ಲಿ ಈ ಯೋಜನೆ ಆರಂಭಗೊಂಡಿತ್ತು. 10 ಲಕ್ಷ ರೂ. ತನಕ ಅತಿ ಸಣ್ಣ ಮತ್ತು ಸಣ್ಣ ಉದ್ಯಮಿಗಳಿಗೆ ಸಾಲ ನೀಡಲಾಗುತ್ತದೆ. ಸಾಲಗಳ ವಾಪಸಾತಿಯಲ್ಲಿ ನಿರೀಕ್ಷಿತ ಬೆಳವಣಿಗೆ ಕಂಡು ಬಂದಿಲ್ಲ. ಹೀಗಾಗಿ ಎನ್‌ಪಿಎಯಾಗಿ ಮುದ್ರಾ ಸಾಲದ ಮೊತ್ತವು ಬೆಳೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ