ಮುಂಬಯಿ: ರಿಸರ್ವ್ ಬ್ಯಾಂಕ್ ಬಡ್ಡಿ ದರ(ರೆಪೊ ದರ) ಇಳಿಸಲು ಸಾಧ್ಯವಾಗುವಂತೆ ಮೋದಿ ನೇತೃತ್ವದ ಎನ್ಡಿಎ ಸರಕಾರಕ್ಕೆ ಸ್ಪಷ್ಟ ಜನಾದೇಶ ಸಿಕ್ಕಿದೆ. ಜೂನ್ 6ರಂದು ಆರ್ಬಿಐನ ಆರ್ಥಿಕ ಪರಾಮರ್ಶೆಯ ದ್ವೈಮಾಸಿಕ ಸಭೆ ನಡೆಯಲಿದ್ದು, ಮಾರುಕಟ್ಟೆಯ ಗಮನವೆಲ್ಲ ಇತ್ತ ಸರಿದಿದೆ.
ಆರ್ಬಿಐ ಬಡ್ಡಿ ದರ ಕಡಿಮೆಯಾದರೆ, ಬ್ಯಾಂಕ್ಗಳ ಗೃಹ ಮತ್ತು ವಾಹನ ಸಾಲಗಳ ಮೇಲಿನ ಬಡ್ಡಿ ದರ ಇಳಿಕೆಯಾಗಲಿದೆ. ಗ್ರಾಹಕರ ಇಎಂಐ ಇಳಿಕೆಯಾಗುತ್ತದೆ. ''ಮಾರುಕಟ್ಟೆಯನ್ನು ಚುರುಕಾಗಿಡುವ ನಿಟ್ಟಿನಲ್ಲಿ ಎಲ್ಲ ಅಗತ್ಯ ಕ್ರಮಗಳನ್ನೂ ಕೈಗೊಳ್ಳುತ್ತೇವೆ,'' ಎಂದು ಈ ಹಿಂದೆ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದರು. ''ಹಣದುಬ್ಬರವು ಆರ್ಬಿಐ ನಿರೀಕ್ಷೆಯ ಮಟ್ಟದಲ್ಲೇ ಇದೆ. ವಾರ್ಷಿಕವಾಗಿ ಶೇ.4ಕ್ಕಿಂತಲೂ ಕಡಿಮೆಯಲ್ಲೇ ಮುಂದುವರಿದಿದೆ. ಆದರೆ, ಆರ್ಥಿಕ ಪ್ರಗತಿಯು ನಮ್ಮ ಅಂದಾಜಿಗಿಂತಲೂ ಕಡಿಮೆ ಇದೆ. ಹೀಗಾಗಿ ಬಡ್ಡಿ ದರ ಕಡಿತ ಮಾಡುವ ಮಾರ್ಗವು ಆರ್ಬಿಐ ಮುಂದಿದೆ,'' ಎಂದು ಗೋಲ್ಡ್ಮನ್ ಸ್ಯಾಚ್ಸ್ನ ವಿತ್ತ ತಜ್ಞ ಪ್ರಾಚಿ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ.
ಆರ್ಬಿಐ ಬಡ್ಡಿ ದರ ಕಡಿಮೆಯಾದರೆ, ಬ್ಯಾಂಕ್ಗಳ ಗೃಹ ಮತ್ತು ವಾಹನ ಸಾಲಗಳ ಮೇಲಿನ ಬಡ್ಡಿ ದರ ಇಳಿಕೆಯಾಗಲಿದೆ. ಗ್ರಾಹಕರ ಇಎಂಐ ಇಳಿಕೆಯಾಗುತ್ತದೆ. ''ಮಾರುಕಟ್ಟೆಯನ್ನು ಚುರುಕಾಗಿಡುವ ನಿಟ್ಟಿನಲ್ಲಿ ಎಲ್ಲ ಅಗತ್ಯ ಕ್ರಮಗಳನ್ನೂ ಕೈಗೊಳ್ಳುತ್ತೇವೆ,'' ಎಂದು ಈ ಹಿಂದೆ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದರು. ''ಹಣದುಬ್ಬರವು ಆರ್ಬಿಐ ನಿರೀಕ್ಷೆಯ ಮಟ್ಟದಲ್ಲೇ ಇದೆ. ವಾರ್ಷಿಕವಾಗಿ ಶೇ.4ಕ್ಕಿಂತಲೂ ಕಡಿಮೆಯಲ್ಲೇ ಮುಂದುವರಿದಿದೆ. ಆದರೆ, ಆರ್ಥಿಕ ಪ್ರಗತಿಯು ನಮ್ಮ ಅಂದಾಜಿಗಿಂತಲೂ ಕಡಿಮೆ ಇದೆ. ಹೀಗಾಗಿ ಬಡ್ಡಿ ದರ ಕಡಿತ ಮಾಡುವ ಮಾರ್ಗವು ಆರ್ಬಿಐ ಮುಂದಿದೆ,'' ಎಂದು ಗೋಲ್ಡ್ಮನ್ ಸ್ಯಾಚ್ಸ್ನ ವಿತ್ತ ತಜ್ಞ ಪ್ರಾಚಿ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ.