ಆ್ಯಪ್ನಗರ

ಆಪದ್ಭಾಂಧವ ಆರ್‌ಬಿಐ

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಕೇಂದ್ರ ಸರಕಾರಕ್ಕೆ 176 ಲಕ್ಷ ಕೋಟಿ ರೂಗಳ ಡಿವಿಡೆಂಡ್‌ ಮತ್ತು ಹೆಚ್ಚುವರಿ ನಿಧಿಯನ್ನು ವರ್ಗಾಯಿಸಲು ನಿರ್ಧರಿಸಿದೆ...

THE ECONOMIC TIMES 28 Aug 2019, 5:00 am
ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಕೇಂದ್ರ ಸರಕಾರಕ್ಕೆ 1.76 ಲಕ್ಷ ಕೋಟಿ ರೂ.ಗಳ ಡಿವಿಡೆಂಡ್‌ ಮತ್ತು ಹೆಚ್ಚುವರಿ ನಿಧಿಯನ್ನು ವರ್ಗಾಯಿಸಲು ನಿರ್ಧರಿಸಿದೆ. ಆರ್ಥಿಕ ಮಂದಗತಿಯ ಸಂದರ್ಭದಲ್ಲಿ ಸರಕಾರಕ್ಕೆ ಆಪದ್ಭಾಂಧವನಂತೆ ಆರ್‌ಬಿಐ ನಡೆ ಅನುಕೂಲಕರವಾಗಲಿದೆ. ವಿವರ ಇಲ್ಲಿದೆ.
Vijaya Karnataka Web rbi payout to government
ಆಪದ್ಭಾಂಧವ ಆರ್‌ಬಿಐ


1.76 ಲಕ್ಷ ಕೋಟಿ ಲೆಕ್ಕಾಚಾರೆ ಹೇಗೆ?
2018-19ರ ಹೆಚ್ಚುವರಿ ನಿಧಿ 1,23,414 ಕೋಟಿ ರೂ. ಮತ್ತು ಪರಿಷ್ಕೃತ ಆರ್ಥಿಕ ಬಂಡವಾಳ ಚೌಕಟ್ಟು (ಇಸಿಎಫ್‌) ಅಡಿಯಲ್ಲಿ 52,637 ಕೋಟಿ ರೂ. ಒಟ್ಟು: 1,76,051 ಕೋಟಿ ರೂ.

ಆರ್‌ಬಿಐ ನಿರ್ಧರಿಸಿದ್ದು ಹೇಗೆ?
ಆರ್‌ಬಿಐ ಮಾಜಿ ಗವರ್ನರ್‌ ಬಿಮಲ್‌ ಜಲನ್‌ ನೇತೃತ್ವದ ಸಮಿತಿಯು ಆರ್‌ಬಿಐನಲ್ಲಿನ ಹೆಚ್ಚುವರಿ ನಿಧಿಯ ವರ್ಗಾವಣೆಗೆ ಸಂಬಂಧಿಸಿ ಸಲ್ಲಿಸಿದ ವರದಿಯನ್ನು ಆಧರಿಸಿ ಆರ್‌ಬಿಐ ಮಂಡಳಿ ಈ ತೀರ್ಮಾನ ತೆಗೆದುಕೊಂಡಿದೆ.

ಸರಕಾರಕ್ಕೆ ಹೇಗೆ ಅನುಕೂಲ?
- ಸರಕಾರಕ್ಕೆ ಸಾಲದ ಹೊರೆಯನ್ನು ಸ್ವಲ್ಪ ಇಳಿಸಬಹುದು.
- ಸಾರ್ವಜನಿಕ ಬ್ಯಾಂಕ್‌ಗಳಿಗೆ ಬಂಡವಾಳ ನಿಧಿಯಾಗಿ ನೀಡಬಹುದು.
-ಕೆಲವು ವಲಯಗಳಿಗೆ ಆರ್ಥಿಕ ನೆರವು ನೀಡಬಹುದು.
- ಮೂಲಸೌಕರ್ಯ ಬಲಪಡಿಸಲು ಅನುಕೂಲಕರ.
-ಮೆರಿಲ್‌ ಲಿಂಚ್‌ ವರದಿಯ ಪ್ರಕಾರ ಪಿಎಸ್‌ಯು ಬ್ಯಾಂಕ್‌ಗಳಿಗೆ 70,000 ಕೋಟಿ ರೂ. ನೆರವು ಸಂಭವ
-ಬ್ಯಾಂಕ್‌ಗಳಿಗೆ ಫಂಡ್‌ ಲಭಿಸಿದರೆ ಸಾಲದ ಬಡ್ಡಿ ದರ ಇಳಿಕೆಯಾಗಬಹುದು.
- 2019-20ರಲ್ಲಿ ಸರಕಾರ 3.38 ಲಕ್ಷ ಕೋಟಿ ರೂ.ಗಳ ಬಂಡವಾಳ ವೆಚ್ಚದ ಗುರಿ ಹೊಂದಿದ್ದು, ಇದಕ್ಕೆ ಸಹಾಯಕವಾಗಲಿದೆ.
-ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.3.3ರೊಳಗೆ ನಿಯಂತ್ರಿಸಲು ಅನುಕೂಲಕರ.

ಈ ಹಿಂದೆ ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದ ಡಿವಿಡೆಂಡ್‌
2018-19ರಲ್ಲಿ 28,000 ಕೋಟಿ ರೂ. ಮಧ್ಯಂತರ ಡಿವಿಡೆಂಡ್‌
2017-18ರಲ್ಲಿ 50,000 ಕೋಟಿ ರೂ.
2016-17ರಲ್ಲಿ 30,659 ಕೋಟಿ ರೂ.
2015-16ರಲ್ಲಿ 65,876 ಕೋಟಿ ರೂ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ