ಆ್ಯಪ್ನಗರ

ಕೇಂದ್ರದಿಂದ ಸರಕಾರಿ ನೌಕರರಿಗೆ 10,000 ರೂ. ಬಡ್ಡಿ ರಹಿತ ಹಬ್ಬದ ಸಾಲ

ಕೇಂದ್ರ ಸರಕಾರಿ ನೌಕರರಿಗೆ ಪ್ರಿಪೇಯ್ಡ್‌ ರುಪೇ ಕಾರ್ಡ್‌ಗಳ ರೂಪದಲ್ಲಿ ಸರಕಾರ ಸಾಲವನ್ನು ನೀಡಲಿದೆ. ಅಂಗಡಿಗಳ ಸೇಲ್‌ ಮೆಷೀನ್‌ಗಳಲ್ಲಿ ಈ ಕಾರ್ಡ್‌ಗಳನ್ನು ಸ್ವೈಪ್‌ ಮಾಡಲು ಮಾತ್ರ ಅವಕಾಶವಿದೆ.

Agencies 12 Oct 2020, 3:26 pm
ಹೊಸದಿಲ್ಲಿ: 'ಗ್ರಾಹಕರ ಬೇಡಿಕೆ'(ಕನ್ಸ್ಯೂಮರ್‌ ಡಿಮಾಂಡ್‌)ಯನ್ನು ಹೆಚ್ಚಿಸಲು ವಿಶೇಷ ಯೋಜನೆ ರೂಪಿಸಿರುವ ಕೇಂದ್ರ ಸರಕಾರ ತನ್ನ ನೌಕರರಿಗೆ ಹಬ್ಬದ ಸಂದರ್ಭದಲ್ಲಿ 10,000 ರೂಪಾಯಿಗಳ ವಿಶೇಷ ಸಾಲ ಯೋಜನೆಯನ್ನು ಪ್ರಕಟಿಸಿದೆ. ಆದರೆ ಕೆಲವು ಷರತ್ತುಗಳು ಇದಕ್ಕೆ ಅನ್ವಯವಾಗಲಿವೆ.
Vijaya Karnataka Web Nirmala Sitharaman


ಇದು ಬಡ್ಡಿ ರಹಿತ ಸಾಲವಾಗಿದ್ದು, ಇದನ್ನು ಹಬ್ಬಕ್ಕೆ ಸಂಬಂಧಿಸಿದಂತೆ ಖರ್ಚು ಮಾಡಲು ಮಾತ್ರ ಅವಕಾಶವಿದೆ. ನೌಕರರಿಗೆ 2021ರ ಮಾರ್ಚ್‌ 31ರವರೆಗೆ ಖರ್ಚು ಮಾಡಲು ಅವಕಾಶವಿದೆ.

ಕೇಂದ್ರ ಸರಕಾರಿ ನೌಕರರಿಗೆ ಪ್ರಿಪೇಯ್ಡ್‌ ರುಪೇ ಕಾರ್ಡ್‌ಗಳ ರೂಪದಲ್ಲಿ ಈ ಸಾಲವನ್ನು ನೀಡಲಾಗುತ್ತದೆ. ಅಂಗಡಿಗಳ ಸೇಲ್‌ ಮೆಷೀನ್‌ಗಳಲ್ಲಿ ಈ ಕಾರ್ಡ್‌ಗಳನ್ನು ಸ್ವೈಪ್‌ ಮಾಡಬಹುದು. ಆದರೆ ಎಟಿಎಂನಿಂದ ಹಣ ಪಡೆಯಲು ಅವಕಾಶ ಇರುವುದಿಲ್ಲ. 10 ತಿಂಗಳ ಅವಧಿಯಲ್ಲಿ ಕಂತುಗಳ ಮೂಲಕ ಈ ಹಣವನ್ನು ನೌಕರರು ಸರಕಾರಕ್ಕೆ ವಾಪಸ್‌ ಮಾಡಬೇಕು.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ 2021ರ ಮಾರ್ಚ್‌ 31ರವರೆಗೆ ಪ್ರಿಪೇಯ್ಡ್‌ ರುಪೇ ಕಾರ್ಡ್‌ಗಳು ಚಾಲ್ತಿಯಲ್ಲಿರುತ್ತವೆ ಎಂದು ಹೇಳಿದ್ದಾರೆ.

ವಿಶೇಷ ಹಬ್ಬದ ಸಾಲ ಯೋಜನೆಯು ಒಂದು ಬಾರಿಯ ಸಾಲ ಯೋಜನೆಯಾಗಿದೆ. ಈ ಹಿಂದಿನ ಯೋಜನೆಯಲ್ಲಿ ಗೆಝೆಟೆಡ್‌ ಅಧಿಕಾರಿಗಳಿಗೆ ಈ ಸೌಲಭ್ಯ ಇರಲಿಲ್ಲ. ಈ ಬಾರಿಗೆ ಎಲ್ಲಾ ಕೇಂದ್ರ ಸರಕಾರಿ ನೌಕರರಿಗೆ ಈ ಸೌಲಭ್ಯ ಇರುತ್ತದೆ ಎಂದು ವಿತ್ತ ಸಚಿವರು ಹೇಳಿದ್ದಾರೆ.

ಸರಕು ಮತ್ತು ಸೇವೆಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ವಿನಾಯಿತಿಗೆ ಅರ್ಹವಾಗಿರುವ ಪ್ರಯಾಣ ಭತ್ಯೆಗಳನ್ನೂ ಖರ್ಚು ಮಾಡುವ ಅವಕಾಶವನ್ನು ಕೇಂದ್ರ ಸರಕಾರಿ ನೌಕರರಿಗೆ ನೀಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಈ ಎಲ್ಲಾ ನಡೆಗಳ ಮೂಲಕ 28,000 ಕೋಟಿ ರೂಪಾಯಿ ಮೊತ್ತದ ಸರಕು ಮತ್ತು ಸೇವಾ ಬೇಡಿಕೆ ಸೃಷ್ಟಿಯಾಗುವ ಅಂದಾಜಿದೆ ಎಂದು ಅವರು ವಿವರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ