ಆ್ಯಪ್ನಗರ

ಜಿಡಿಪಿ ಬೆಳವಣಿಗೆ 4.2ಕ್ಕೆ ಕುಸಿತ? ಉತ್ಪಾದನೆ ಮಂದಗತಿ, ಮೂಲಸೌಕರ್ಯ ಹೂಡಿಕೆ ಇಳಿಕೆ

ಎಸ್‌ಬಿಐ ತ್ರೈಮಾಸಿಕ ಮುನ್ನೋಟದ ವರದಿ ಬಿಡುಗಡೆಯಾಗಿದ್ದು, ಜಿಡಿಪಿ ಬೆಳವಣಿಗೆ ಶೇ.4.2ಕ್ಕೆ ಇಳಿಯಬಹುದು ಎಂದು ಅಂದಾಜು ಮಾಡಿದೆ. ಉತ್ಪಾದನೆ ಇಳಿಮುಖ, ಮೂಲಸೌಕರ್ಯ ವಲಯದಲ್ಲಿನ ಹೂಡಿಕೆ ಇಳಿಕೆ ಮತ್ತಿತರ ಅಂಶಗಳು ಆರ್ಥಿಕ ಬೆಳವಣಿಗೆಯನ್ನು ಹಿಮ್ಮುಖಗೊಳಿಸುವ ಅವಕಾಶಗಳಿವೆ ಎಂದಿದೆ.

Vijaya Karnataka Web 13 Nov 2019, 8:31 am
ಹೊಸದಿಲ್ಲಿ: ಪ್ರಸಕ್ತ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಕೇವಲ ಶೇ.4.2ಕ್ಕೆ ಇಳಿಯಬಹುದು ಎಂದು ಸಾರ್ವಜನಿಕ ವಲಯದ ಬೃಹತ್‌ ಆದ ಎಸ್‌ಬಿಐ ಅಂದಾಜು ಮಾಡಿದೆ. ವಾಹನ ಉದ್ಯಮದಲ್ಲಿನ ಮಾರಾಟ ಕುಸಿತ, ಪ್ರಮುಖ ಕೈಗಾರಿಕಾ ವಲಯಗಳಲ್ಲಿನ ಉತ್ಪಾದನೆ ಇಳಿಮುಖ, ನಿರ್ಮಾಣ ಮತ್ತು ಮೂಲಸೌಕರ್ಯ ವಲಯದಲ್ಲಿನ ಹೂಡಿಕೆ ಇಳಿಕೆ ಮತ್ತಿತರ ಅಂಶಗಳು ಆರ್ಥಿಕ ಬೆಳವಣಿಗೆಯನ್ನು ಹಿಮ್ಮುಖಗೊಳಿಸುವ ಅವಕಾಶಗಳಿವೆ ಎಂದು ಎಸ್‌ಬಿಐ ವರದಿಯಲ್ಲಿ ಹೇಳಲಾಗಿದೆ.
Vijaya Karnataka Web SBI


ವಾರ್ಷಿಕ ಜಿಡಿಪಿ ಕಡಿತ
2020ರ ಆರ್ಥಿಕ ವರ್ಷದಲ್ಲಿನ ಜಿಡಿಪಿ ಶೇ.6.1ರಷ್ಟಿರಲಿದೆ ಎಂದು ಈ ಹಿಂದೆ ಅಂದಾಜು ಮಾಡಿದ್ದ ಎಸ್‌ಬಿಐ, ಈಗ ಅದನ್ನು ಶೇ.5ಕ್ಕೆ ಕಡಿತಗೊಳಿಸಿದೆ. ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ.5ರಷ್ಟಿದ್ದು, ಇದು ಕಳೆದ 6 ವರ್ಷಗಳಲ್ಲಿಯೇ ಕನಿಷ್ಠ ಮಟ್ಟವಾಗಿದೆ.

ರಾಜ್ಯದ ಗೆಣಸಿಗೆ ಆಮೆರಿಕ, ಇಂಗ್ಲೆಂಡ್‌, ಕೆನಡಾದಲ್ಲೆಲ್ಲಾ ಭಾರಿ ಬೇಡಿಕೆ!

ಜಾಗತಿಕ ಸಂಸ್ಥೆಗಳು ಏನನ್ನುತ್ತವೆ? ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌, ವಿಶ್ವಬ್ಯಾಂಕ್‌, ಆರ್ಗನೈಸೇಷನ್‌ ಫಾರ್‌ ಎಕನಾಮಿಕ್‌ ಕೋ-ಆಪರೇಷನ್‌ ಆ್ಯನ್‌ ಡೆವಲಪ್‌ಮೆಂಟ್‌(ಒಸಿಇಡಿ), ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ(ಆರ್‌ಬಿಐ) ಮತ್ತು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್‌) ಸೇರಿದಂತೆ ಪ್ರಮುಖ ಜಾಗತಿಕ ಸಂಸ್ಥೆಗಳು ಈಗಾಗಲೇ ಭಾರತದ ಜಿಡಿಪಿ ಇಳಿಮುಖವಾಗಲಿದೆ ಎಂದು ಅಂದಾಜು ಮಾಡಿವೆ. ಈ ಸಾಲಿಗೆ ಎಸ್‌ಬಿಐ ಈಗ ಹೊಸ ಸೇರ್ಪಡೆ.

ರೈತರ ಕಣ್ಣಲ್ಲಿ ನೀರು ತರಿಸುತ್ತಿದೆ ಕಾಳು ಮೆಣಸು ದರ

ಏನು ಮಾನದಂಡ?
''ದೇಶದ ಆರ್ಥಿಕ ಬೆಳವಣಿಗೆ ಅಳೆಯಲು ನಾವು 33 ಮಾನದಂಡಗಳನ್ನು(ಸೂಚಿ) ಪರಿಗಣಿಸಿದ್ದು, ವೇಗ ವರ್ಧನೆಯ ದರ 2019ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.27ಕ್ಕೆ ಕುಸಿದಿದೆ,'' ಎಂದು ಎಸ್‌ಬಿಐ ವರದಿಯಲ್ಲಿ ಹೇಳಲಾಗಿದೆ. ''ಅಲ್ಲದೇ, ದೇಶದ ಹವಾಮಾನವು ವ್ಯತಿರಿಕ್ತವಾಗಿದೆ. ನಾಲ್ಕು ತಿಂಗಳ ನೈಋುತ್ಯ ಮುಂಗಾರಿನ ಅವಧಿಯಲ್ಲಿ ಬರಬೇಕಿದ್ದ ಸರಾಸರಿ ಮಳೆಗಿಂತಲೂ ಶೇ.110ರಷ್ಟು ಅಧಿಕ ಮಳೆಯಾಗಿದೆ. ಭಾರತದ ಕೆಲವು ರಾಜ್ಯಗಳಲ್ಲಿ ಅತಿವೃಷ್ಟಿಯಾಗಿದೆ. ಹೆಚ್ಚಿನ ಮಳೆಯಿಂದ ಪ್ರವಾಹ ಸೃಷ್ಟಿಯಾಗಿ ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್‌, ಕರ್ನಾಟಕ, ಪಂಜಾಬ್‌ ಮತ್ತಿತರ ರಾಜ್ಯಗಳಲ್ಲಿಖಾರಿಫ್‌ ಬೆಳೆಗಳು ಹಾಳಾಗಿವೆ. ಮಧ್ಯಪ್ರದೇಶ ವೊಂದರಲ್ಲೇ ಶೇ.40ರಿಂದ 50ರಷ್ಟು ಸೋಯಾಬೀನ್‌ ಬೆಳೆ ಹಾಳಾಗಿದೆ. ಗುಜರಾತ್‌ನಲ್ಲಿ ಶೇ.30-40ರಷ್ಟು ಶೇಂಗಾ ಮತ್ತು ಶೇ.30ರಷ್ಟು ಹತ್ತಿ ಬೆಳೆಗಳು ಹಾಳಾಗಿವೆ. ದೇಶದ ಪ್ರಮುಖ ಕೃಷಿ ಪ್ರಧಾನ ರಾಜ್ಯಗಳಲ್ಲಿನ ನಕಾರಾತ್ಮಕ ಪ್ರಭಾವವು ಕೃಷಿ ಬೆಳವಣಿಗೆ ಮೇಲೆ ಕಂಡು ಬಂದಿದೆ,'' ಎಂದು ವರದಿ ವಿವರಿಸಿದೆ.

ಆದಾಯ ತೆರಿಗೆ ಶೀಘ್ರ ಇಳಿದರೆ ನಿಮಗೆಷ್ಟು ಲಾಭ? ಇಲ್ಲಿದೆ ಸಿಂಪಲ್‌ ಲೆಕ್ಕಾಚಾರ

2021ರಲ್ಲಿ ಶೇ.6.2ಕ್ಕೆ ಏರಿಕೆ
2019ರ ಸೆಪ್ಟೆಂಬರ್‌ನಲ್ಲಿ ಐಐಪಿ ಬೆಳವಣಿಗೆ ಶೇ.4.3ಕ್ಕೆ ಇಳಿದಿದೆ. ಈ ಅಂಶಗಳನ್ನು ಪರಿಗಣಿಸಿ, ದೇಶದ ಜಿಡಿಪಿ ಅಂದಾಜನ್ನು ಕಡಿತ ಮಾಡಲಾಗಿದೆ. ಆದಾಗ್ಯೂ ಹಣಕಾಸು ವರ್ಷ 2021ರಲ್ಲಿ ಜಿಡಿಪಿ ಶೇ.6.2ಕ್ಕೆ ಏರಬಹುದು ಎನ್ನುವ ನಿರೀಕ್ಷೆ ಇದೆ ಎಂದು ಎಸ್‌ಬಿಐ ವರದಿ ಹೇಳಿದೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ