ಆ್ಯಪ್ನಗರ

ಮತ್ತೆ ಮುಗ್ಗರಿಸಿದ ಷೇರು ಪೇಟೆ, ಒಂದೇ ದಿನ 938 ಅಂಕ ಕಳೆದುಕೊಂಡ ಸೆನ್ಸೆಕ್ಸ್‌

ಕಳೆದ ನಾಲ್ಕು ದಿನಗಳ ವಹಿವಾಟುಗಳಲ್ಲಿ ಸೆನ್ಸೆಕ್ಸ್‌ 2,382.19 ಅಂಕ ಕಳೆದುಕೊಂಡಿದ್ದರೆ, ನಿಫ್ಟಿ 677.20 ಅಂಕ ನಷ್ಟ ಅನುಭವಿಸಿದೆ.​ ಬಜೆಟ್‌ಗೆ ಮುನ್ನ ತಮ್ಮ ಷೇರುಗಳನ್ನು ಮಾರಾಟ ಮಾಡಿ ಲಾಭ ಗಳಿಸಲು ಹೂಡಿಕೆದಾರರು ಆದ್ಯತೆ ನೀಡಿದ್ದೇ ಕುಸಿತಕ್ಕೆ ಕಾರಣ ಎಂದು ತಜ್ಞರು ಹೇಳಿದ್ದಾರೆ.

Agencies 27 Jan 2021, 7:33 pm

ಹೈಲೈಟ್ಸ್‌:

  • ಬುಧವಾರ ಒಂದೇ ದಿನ 938 ಅಂಕ ಕಳೆದುಕೊಂಡು 47,500ಕ್ಕೆ ಕುಸಿದ ಸೆನ್ಸೆಕ್ಸ್‌
  • ನಾಲ್ಕು ದಿನಗಳ ವಹಿವಾಟುಗಳಲ್ಲಿ ಸೆನ್ಸೆಕ್ಸ್‌ 2,382.19 ಅಂಕ ನಷ್ಟ
  • 4 ದಿನಗಳಲ್ಲಿ 677.20 ಅಂಕ ಕಳೆದುಕೊಂಡು 14,000ಕ್ಕಿಂತ ಕೆಳಗಿಳಿದ ನಿಫ್ಟಿ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Sensex
ಮುಂಬಯಿ: ಕಳೆದ ವಾರವಷ್ಟೇ 50,000 ಅಂಕವನ್ನು ಸ್ಪರ್ಶಿಸಿದ್ದ ಸೆನ್ಸೆಕ್ಸ್‌, ತೀವ್ರ ಕುಸಿತಗಳ ಪರಿಣಾಮ ಬುಧವಾರ 47,500ಕ್ಕೆ ಕುಸಿದಿದೆ. ಬುಧವಾರ ಒಂದೇ ದಿನ 938 ಅಂಕ ಕುಸಿದಿದ್ದು, 47,409.93ಕ್ಕೆ ವಹಿವಾಟು ಅಂತ್ಯಗೊಂಡಿತು. ಹಿಂದಿನ ನಾಲ್ಕು ದಿನಗಳ ವಹಿವಾಟುಗಳಲ್ಲಿ ಸೆನ್ಸೆಕ್ಸ್‌ 2,382.19 ಅಂಕ ಅಥವಾ ಶೇ.4.78ರಷ್ಟನ್ನು ಕಳೆದುಕೊಂಡಿದೆ.
ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಸಹ 271.40 ಅಂಕ ಕಳೆದುಕೊಂಡಿದ್ದು 13,967.50ಕ್ಕೆ ಇಳಿಕೆಯಾಗಿದೆ. ಅತಿರೇಕದ ಮಾರಾಟ ಪ್ರಕ್ರಿಯೆಯಿಂದಾಗಿ ನಿಫ್ಟಿ 14,000 ಮಟ್ಟಕ್ಕಿಂತ ಕೆಳಗಿಳಿದಿದೆ. ಹಿಂದಿನ ದಿನಗಳ ನಾಲ್ಕು ವಹಿವಾಟುಗಳಲ್ಲಿ ನಿಫ್ಟಿ 677.20 ಅಥವಾ 4.62 ಅಂಕ ನಷ್ಟಗೊಂಡಿದೆ.

ಸೆನ್ಸೆಕ್ಸ್‌ ಗುಚ್ಛದಲ್ಲಿ ಆಕ್ಸಿಸ್‌ ಬ್ಯಾಂಕ್‌, ಟೈಟನ್‌, ಇಂಡಸ್‌ಇಂಡ್‌ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಡಾ.ರೆಡ್ಡೀಸ್‌, ಎಚ್‌ಡಿಎಫ್‌ಸಿ ಮತ್ತು ಏಷಿಯನ್‌ ಪೇಂಟ್‌ ಷೇರುಗಳು ಭಾರಿ ನಷ್ಟಗೊಂಡಿವೆ. ಸೆನ್ಸೆಕ್ಸ್‌ ಘಟಕದ 25 ಷೇರುಗಳು ನಷ್ಟಗೊಂಡಿದ್ದರೆ, 6 ಕಂಪನಿಯ ಷೇರುಗಳಷ್ಟೇ ಲಾಭ ಗಳಿಸಿವೆ.

ನಿಲ್ಲದ ಕರಡಿ ಕುಣಿತ, ಮತ್ತೆ 531 ಅಂಕ ಕಳೆದುಕೊಂಡ ಸೆನ್ಸೆಕ್ಸ್‌

ಇದೇ ವೇಳೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬ್ರೆಂಡ್‌ ದರ ಬ್ಯಾರೆಲ್‌ಗೆ 0.41 ಪರ್ಸೆಂಟ್‌ ಏರಿಕೆಯಾಗಿದ್ದು 55.87 ಡಾಲರ್‌ಗೆ ಬಂದಿದೆ.

ಇಷ್ಟೊಂದು ಕುಸಿತ ಏಕೆ?

ಬಜೆಟ್‌ಗೆ ಮುನ್ನವೆ ತಮ್ಮ ಷೇರುಗಳನ್ನು ಮಾರಾಟ ಮಾಡಿ ಲಾಭ ಗಳಿಸಲು ಹೂಡಿಕೆದಾರರು ಆದ್ಯತೆ ನೀಡಿದ್ದು, ಈ ಒತ್ತಡದಿಂದ ಮಾರುಕಟ್ಟೆ ಕುಸಿದಿದೆ. ಜಾಗತಿಕ ಪ್ರಭಾವಗಳೂ ಇದರ ಮೇಲೆ ಪ್ರಭಾವ ಬೀರಿವೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಫ್ಯೂಚರ್‌ ಆ್ಯಂಡ್‌ ಆಪ್ಷನ್ಸ್‌ (ಎಫ್‌ಆ್ಯಂಡ್‌ಒ) ಮುಕ್ತಾಯದ ಅವಧಿಯೂ ಷೇರುಪೇಟೆ ಮೇಲೆ ಪ್ರಭಾವ ಬೀರಿದೆ. ವಿದೇಶಿ ಹೂಡಿಕೆದಾರರು ಸೋಮವಾರ ಭಾರತೀಯ ಮಾರುಕಟ್ಟೆಯಲ್ಲಿನ 765 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು. ಮಂಗಳವಾರ ಗಣರಾಜ್ಯ ದಿನಾಚರಣೆ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ರಜೆ ಇತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ