ಮುಂಬಯಿ: ಇಂದೂ ಸಹ ಷೇರು ಮಾರುಕಟ್ಟೆ ಪತನಗೊಂಡು ಭಾರಿ ನಷ್ಟದೊಂದಿಗೆ ಆರಂಭವಾಯಿತು. ಅಂತಾರಾಷ್ಟ್ರೀಯ ಬೆಳವಣಿಗೆಗಳು, ರೂಪಾಯಿ ಮೌಲ್ಯ ಪತನ ಇನ್ನಿತರೆ ಕಾರಣಗಳಿಂದ ಸೋಮವಾರ ಭಾರಿ ಪತನ ಕಂಡಿದ್ದ ಷೇರು ಮಾರುಕಟ್ಟೆ ಇಂದು ಬೆಳಗ್ಗೆ ಸಹ ನಷ್ಟದೊಂದಿಗೆ ಆರಂಭವಾಯಿತು.
ಸೋಮವಾರ ಸಂಜೆ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ರಾಜೀನಾಮೆ ಸಲ್ಲಿಸಿದ್ದು ಹೂಡಿಕೆದಾರರಲ್ಲಿ ಭಾರಿ ಆತಂಕಕ್ಕೆ ಕಾರಣವಾಗಿದೆ. ಅದೇ ರೀತಿ ಇಂದು ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಸೂಚ್ಯಂಕದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಆರಂಭದಲ್ಲೇ ಸೆನ್ಸೆಕ್ಸ್ 450 ಪಾಯಿಂಟ್ಗಳಿಗೂ ಅಧಿಕ ಪತನಗೊಂಡಿತು. ನಿಫ್ಟಿ 110 ಪಾಯಿಂಟ್ಗಳಷ್ಟು ಪತನಗೊಂಡು 10370 ಪಾಯಿಂಟ್ಗಳಲ್ಲಿ ಪ್ರಾರಂಭವಾಯಿತು. ಬೆಳಗ್ಗೆ 9.45ಕ್ಕೆ ಸೆನ್ಸೆಕ್ಸ್ 507 ಪಾಯಿಂಟ್ ಪತನಗೊಂಡು 34452.63 ಪಾಯಿಂಟ್ಗಳಲ್ಲಿ ಮುಂದುವರೆದಿದೆ.
ನಿಫ್ಟಿ 115.4 ಪಾಯಿಂಟ್ ಪತನಗೊಂಡು 10373 ಪಾಯಿಂಟ್ಗಳಲ್ಲಿ ಮಾರಾಟವಾಗುತ್ತಿದೆ. ಇನ್ನು ಡಾಲರ್ ಎದಿರು ರೂಪಾಯಿ ಮೌಲ್ಯ .72.29 ರಷ್ಟಿದೆ. ಇಂದು ಎನ್ಎಸ್ಇಯಲ್ಲಿ ಯಸ್ ಬ್ಯಾಂಕ್, ಇಂಡಿಯಾ ಬುಲ್ಸ್, ಹೆಚ್ಎಸ್ಜಿ, ಟೆಕ್ ಮಹಿಂದ್ರಾ, ಎಸ್ಬಿಐ, ಗೆಯಿಲ್ ಇನ್ನಿತರೆ ಕಂಪೆನಿಗಳ ಷೇರುಗಳು ಲಾಭದಲ್ಲಿವೆ. ಇಂಡಸ್ಇಂಡ್ ಬ್ಯಾಂಕ್, ಐಸಿಐಸಿಐ, ರಿಲಯನ್ಸ್, ಎಚ್ಡಿಎಫ್ಸಿ ಇನ್ನಿತರೆ ಕಂಪೆನಿಗಳ ಷೇರುಗಳು ನಷ್ಟವಾಗಿವೆ.
ಸೋಮವಾರ ಸಂಜೆ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ರಾಜೀನಾಮೆ ಸಲ್ಲಿಸಿದ್ದು ಹೂಡಿಕೆದಾರರಲ್ಲಿ ಭಾರಿ ಆತಂಕಕ್ಕೆ ಕಾರಣವಾಗಿದೆ. ಅದೇ ರೀತಿ ಇಂದು ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಸೂಚ್ಯಂಕದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಆರಂಭದಲ್ಲೇ ಸೆನ್ಸೆಕ್ಸ್ 450 ಪಾಯಿಂಟ್ಗಳಿಗೂ ಅಧಿಕ ಪತನಗೊಂಡಿತು. ನಿಫ್ಟಿ 110 ಪಾಯಿಂಟ್ಗಳಷ್ಟು ಪತನಗೊಂಡು 10370 ಪಾಯಿಂಟ್ಗಳಲ್ಲಿ ಪ್ರಾರಂಭವಾಯಿತು. ಬೆಳಗ್ಗೆ 9.45ಕ್ಕೆ ಸೆನ್ಸೆಕ್ಸ್ 507 ಪಾಯಿಂಟ್ ಪತನಗೊಂಡು 34452.63 ಪಾಯಿಂಟ್ಗಳಲ್ಲಿ ಮುಂದುವರೆದಿದೆ.
ನಿಫ್ಟಿ 115.4 ಪಾಯಿಂಟ್ ಪತನಗೊಂಡು 10373 ಪಾಯಿಂಟ್ಗಳಲ್ಲಿ ಮಾರಾಟವಾಗುತ್ತಿದೆ. ಇನ್ನು ಡಾಲರ್ ಎದಿರು ರೂಪಾಯಿ ಮೌಲ್ಯ .72.29 ರಷ್ಟಿದೆ. ಇಂದು ಎನ್ಎಸ್ಇಯಲ್ಲಿ ಯಸ್ ಬ್ಯಾಂಕ್, ಇಂಡಿಯಾ ಬುಲ್ಸ್, ಹೆಚ್ಎಸ್ಜಿ, ಟೆಕ್ ಮಹಿಂದ್ರಾ, ಎಸ್ಬಿಐ, ಗೆಯಿಲ್ ಇನ್ನಿತರೆ ಕಂಪೆನಿಗಳ ಷೇರುಗಳು ಲಾಭದಲ್ಲಿವೆ. ಇಂಡಸ್ಇಂಡ್ ಬ್ಯಾಂಕ್, ಐಸಿಐಸಿಐ, ರಿಲಯನ್ಸ್, ಎಚ್ಡಿಎಫ್ಸಿ ಇನ್ನಿತರೆ ಕಂಪೆನಿಗಳ ಷೇರುಗಳು ನಷ್ಟವಾಗಿವೆ.