ಆ್ಯಪ್ನಗರ

ಚುನಾವಣೆ ಫಲಿತಾಂಶ ಎಫೆಕ್ಟ್: ಷೇರು ಮಾರುಕಟ್ಟೆ ಪತನ

ಸೋಮವಾರ ಸಂಜೆ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ರಾಜೀನಾಮೆ ಸಲ್ಲಿಸಿದ್ದು ಹೂಡಿಕೆದಾರರಲ್ಲಿ ಭಾರಿ ಆತಂಕಕ್ಕೆ ಕಾರಣವಾಗಿದೆ. ಅದೇ ರೀತಿ ಇಂದು ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಸೂಚ್ಯಂಕದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆರಂಭದಲ್ಲೇ ಸೆನ್ಸೆಕ್ಸ್ 450 ಪಾಯಿಂಟ್‌ಗಳಿಗೂ ಅಧಿಕ ಪತನಗೊಂಡಿತು. ನಿಫ್ಟಿ 110 ಪಾಯಿಂಟ್‌ಗಳಷ್ಟು ಪತನಗೊಂಡು 10370 ಪಾಯಿಂಟ್‌ಗಳಲ್ಲಿ ಪ್ರಾರಂಭವಾಯಿತು. ಬೆಳಗ್ಗೆ 9.45ಕ್ಕೆ ಸೆನ್ಸೆಕ್ಸ್ 507 ಪಾಯಿಂಟ್ ಪತನಗೊಂಡು 34452.63 ಪಾಯಿಂಟ್‌ಗಳಲ್ಲಿ ಮುಂದುವರೆದಿದೆ.

THE ECONOMIC TIMES 11 Dec 2018, 10:36 am
ಮುಂಬಯಿ: ಇಂದೂ ಸಹ ಷೇರು ಮಾರುಕಟ್ಟೆ ಪತನಗೊಂಡು ಭಾರಿ ನಷ್ಟದೊಂದಿಗೆ ಆರಂಭವಾಯಿತು. ಅಂತಾರಾಷ್ಟ್ರೀಯ ಬೆಳವಣಿಗೆಗಳು, ರೂಪಾಯಿ ಮೌಲ್ಯ ಪತನ ಇನ್ನಿತರೆ ಕಾರಣಗಳಿಂದ ಸೋಮವಾರ ಭಾರಿ ಪತನ ಕಂಡಿದ್ದ ಷೇರು ಮಾರುಕಟ್ಟೆ ಇಂದು ಬೆಳಗ್ಗೆ ಸಹ ನಷ್ಟದೊಂದಿಗೆ ಆರಂಭವಾಯಿತು.
Vijaya Karnataka Web People walk past the Bombay Stock Exchange (BSE) building in Mumbai
People walk past the Bombay Stock Exchange (BSE) building in Mumbai, December 18, 2017. REUTERS/Shailesh Andrade/Files


ಸೋಮವಾರ ಸಂಜೆ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ರಾಜೀನಾಮೆ ಸಲ್ಲಿಸಿದ್ದು ಹೂಡಿಕೆದಾರರಲ್ಲಿ ಭಾರಿ ಆತಂಕಕ್ಕೆ ಕಾರಣವಾಗಿದೆ. ಅದೇ ರೀತಿ ಇಂದು ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಸೂಚ್ಯಂಕದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಆರಂಭದಲ್ಲೇ ಸೆನ್ಸೆಕ್ಸ್ 450 ಪಾಯಿಂಟ್‌ಗಳಿಗೂ ಅಧಿಕ ಪತನಗೊಂಡಿತು. ನಿಫ್ಟಿ 110 ಪಾಯಿಂಟ್‌ಗಳಷ್ಟು ಪತನಗೊಂಡು 10370 ಪಾಯಿಂಟ್‌ಗಳಲ್ಲಿ ಪ್ರಾರಂಭವಾಯಿತು. ಬೆಳಗ್ಗೆ 9.45ಕ್ಕೆ ಸೆನ್ಸೆಕ್ಸ್ 507 ಪಾಯಿಂಟ್ ಪತನಗೊಂಡು 34452.63 ಪಾಯಿಂಟ್‌ಗಳಲ್ಲಿ ಮುಂದುವರೆದಿದೆ.

ನಿಫ್ಟಿ 115.4 ಪಾಯಿಂಟ್ ಪತನಗೊಂಡು 10373 ಪಾಯಿಂಟ್‌ಗಳಲ್ಲಿ ಮಾರಾಟವಾಗುತ್ತಿದೆ. ಇನ್ನು ಡಾಲರ್‌ ಎದಿರು ರೂಪಾಯಿ ಮೌಲ್ಯ .72.29 ರಷ್ಟಿದೆ. ಇಂದು ಎನ್‌ಎಸ್‍ಇಯಲ್ಲಿ ಯಸ್ ಬ್ಯಾಂಕ್, ಇಂಡಿಯಾ ಬುಲ್ಸ್, ಹೆಚ್‌ಎಸ್‌ಜಿ, ಟೆಕ್ ಮಹಿಂದ್ರಾ, ಎಸ್‌ಬಿಐ, ಗೆಯಿಲ್ ಇನ್ನಿತರೆ ಕಂಪೆನಿಗಳ ಷೇರುಗಳು ಲಾಭದಲ್ಲಿವೆ. ಇಂಡಸ್‌ಇಂಡ್ ಬ್ಯಾಂಕ್, ಐಸಿಐಸಿಐ, ರಿಲಯನ್ಸ್, ಎಚ್‍ಡಿಎಫ್‍ಸಿ ಇನ್ನಿತರೆ ಕಂಪೆನಿಗಳ ಷೇರುಗಳು ನಷ್ಟವಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ