ಆ್ಯಪ್ನಗರ

ಮೇ 30-31ಕ್ಕೆ ಬ್ಯಾಂಕ್‌ ಮುಷ್ಕರ

ವೇತನ ಪರಿಷ್ಕರಣೆ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಸ್‌ಬಿಐ ಸೇರಿದಂತೆ ನಾನಾ ಬ್ಯಾಂಕ್‌ ಸಂಘಟನೆಗಳು ಮೇ 30 ಮತ್ತು 31ರಂದು ಮುಷ್ಕರಕ್ಕೆ ಮುಂದಾಗಿವೆ. ಇದರಿಂದ ಬ್ಯಾಂಕ್‌ಗಳ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

PTI 23 May 2018, 8:58 am
ಹೊಸದಿಲ್ಲಿ: ವೇತನ ಪರಿಷ್ಕರಣೆ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಸ್‌ಬಿಐ ಸೇರಿದಂತೆ ನಾನಾ ಬ್ಯಾಂಕ್‌ ಸಂಘಟನೆಗಳು ಮೇ 30 ಮತ್ತು 31ರಂದು ಮುಷ್ಕರಕ್ಕೆ ಮುಂದಾಗಿವೆ. ಇದರಿಂದ ಬ್ಯಾಂಕ್‌ಗಳ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
Vijaya Karnataka Web ಬ್ಯಾಂಕ್‌ ಮುಷ್ಕರ
ಬ್ಯಾಂಕ್‌ ಮುಷ್ಕರ


10 ಲಕ್ಷ ಕ್ಕೂ ಅಧಿಕ ಸರಕಾರಿ ಮತ್ತು ಖಾಸಗಿ ಬ್ಯಾಂಕ್‌ ನೌಕರರು ಮುಷ್ಕರ ನಡೆಸಲಿದ್ದಾರೆ. ಮುಷ್ಕರ ನಡೆದರೆ ಈ ಎರಡು ದಿನಗಳ ಅವಧಿಯಲ್ಲಿ ಬ್ಯಾಂಕಿಂಗ್‌ ಸೇವೆಗೆ ತೊಡಕಾಗುವ ಅವಕಾಶಗಳಿವೆ ಎಂದು ಎಸ್‌ಬಿಐ ಹೇಳಿದೆ. ಬ್ಯಾಂಕ್‌ ಆಫ್‌ ಬರೋಡಾ, ಕೆನರಾ ಬ್ಯಾಂಕ್‌, ಪಂಜಾಬ್‌ ಮತ್ತು ಸಿಂಧ್‌ ಬ್ಯಾಂಕ್‌(ಪಿಎಸ್‌ಬಿ) ಮತ್ತಿತರ ಬ್ಯಾಂಕ್‌ಗಳೂ ಬ್ಯಾಂಕಿಂಗ್‌ ಸೇವೆಗಳ ವ್ಯತ್ಯಯ ಸಾಧ್ಯತೆ ಕುರಿತಾಗಿ ಹೇಳಿವೆ.

ಮೇ 30ರಂದು ಬೆಳಿಗ್ಗೆ 6 ಗಂಟೆಯಿಂದಲೇ ಮುಷ್ಕರ ಆರಂಭಿಸಲು ಯುನೈಟೆಡ್‌ ಫೋರಂ ಆಫ್‌ ಬ್ಯಾಂಕ್‌ ಯೂನಿಯನ್ಸ್‌(ಯುಎಫ್‌ಟಿಯು) ಮುಂದಾಗಿದೆ. ಎಐಬಿಬಿಎ ಎಐಬಿಇಎ, ಎಐಬಿಒಸಿ, ಎನ್‌ಸಿಬಿಇ, ಎಐಬಿಒಎ, ಬಿಇಎಫ್‌ಐ, ಐಎನ್‌ಬಿಇಎಫ್‌, ಐಎನ್‌ಬಿಒಸಿ, ಎನ್‌ಒಬಿಡಬ್ಲ್ಯು, ಎನ್‌ಒಬಿಒ ಸೇರಿದಂತೆ ನಾನಾ ಬ್ಯಾಂಕ್‌ ಸಂಘಟನೆಗಳ ಒಕ್ಕೂಟವಾದ ಯುಎಫ್‌ಟಿಯು ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ಸಾಧ್ಯತೆಗಳಿವೆ.

ಶೇ.2ರಷ್ಟು ವೇತನ ಹೆಚ್ಚಳ ಸೇರಿದಂತೆ ನಾನಾ ಬೇಡಿಕೆಗಳನ್ನು ಬ್ಯಾಂಕ್‌ ಸಂಘಟನೆಗಳು ಪ್ರಸ್ತಾಪಿಸಿವೆ. ವೇತನ ಪರಿಷ್ಕರಣೆ ಕುರಿತು ಬ್ಯಾಂಕ್‌ನ ಆಡಳಿತ ಮಂಡಳಿಗಳು ವಿಳಂಭ ಧೋರಣೆ ಅನುಸರಿಸಿವೆ. ಈ ವಿಷಯದಲ್ಲಿ ಕೇಂದ್ರ ಸರಕಾರದ ನಿರ್ಲಕ್ಷ್ಯ ಖಂಡಿಸಿ ಮುಷ್ಕರಕ್ಕೆ ಮುಂದಾಗಿರುವುದಾಗಿ ಬ್ಯಾಂಕ್‌ ಸಂಘಟನೆಗಳು ಹೇಳಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ