ಆ್ಯಪ್ನಗರ

20 ಲಕ್ಷ ಕೋಟಿ ರೂ. ಲಾಭವನ್ನು ಜನರಿಗೂ ಹಂಚಿ - ಕೇಂದ್ರಕ್ಕೆ ಅಭಿಷೇಕ್‌ ಸಿಂಘ್ವಿ ಮನವಿ

ಲಾಕ್‌ ಡೌನ್‌ ಪರಿಣಾಮ ಮಾರ್ಚ್‌ನಲ್ಲಿ ಪೆಟ್ರೋಲ್‌, ಡೀಸೆಲ್‌ ಮಾರಾಟ ಅನುಕ್ರಮವಾಗಿ ಶೇ. 15.5 ಮತ್ತು ಶೇ. 24ರಷ್ಟು ಕುಸಿದಿದೆ. ಅಲ್ಲದೇ ವಿಮಾನ ಇಂಧನ (ಎಟಿಎಫ್‌) ಮಾರಾಟ ಶೇ. 31.6ರಷ್ಟು ಇಳಿಕೆಯಾಗಿದೆ. ಆದರೆ ಸಿಲಿಂಡರ್‌ ಮಾರಾಟ ಮಾತ್ರ ಏರಿಕೆಯಾಗುತ್ತಿದೆ.

PTI 6 Apr 2020, 8:38 pm

ಹೊಸದಿಲ್ಲಿ: ಕಚ್ಚಾ ತೈಲದ ದರ ಇಳಿಕೆಯಿಂದ ಕಳೆದ 6 ವರ್ಷಗಳಲ್ಲಿ ಕೇಂದ್ರ ಸರಕಾರಕ್ಕೆ 20 ಲಕ್ಷ ಕೋಟಿ ರೂ. ಲಾಭವಾಗಿದೆ. ಈ ಲಾಭವನ್ನು ಕೊರೊನಾ ಸಂಕಷ್ಟದ ಸಂದರ್ಭದಲ್ಲಾದರೂ ಸರಕಾರವು ಜನರಿಗೆ ವರ್ಗಾಯಿಸಬೇಕು ಎಂದು ಕಾಂಗ್ರೆಸ್‌ ವಕ್ತಾರ ಅಭಿಷೇಕ್‌ ಸಿಂಘ್ವಿ ಒತ್ತಾಯಿಸಿದ್ದಾರೆ.
Vijaya Karnataka Web Senior Congress leader Abhishek Manu Singhvi


“ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ತೀವ್ರ ಇಳಿಕೆಯಾಗಿದೆ. ಇದರ ಲಾಭದಲ್ಲಿ ಒಂದಿಷ್ಟು ಭಾಗವನ್ನಾದರೂ ದೇಶದ ಜನರಿಗೆ ಸರಕಾರವು ವರ್ಗಾಯಿಸಬೇಕು. ಇದು ಲಾಭ ಗಳಿಸುವ ಸಮಯವಲ್ಲ,” ಎಂದು ಹೇಳಿದ್ದಾರೆ.

“ತೆರಿಗೆ ಇಳಿಕೆ ಅಥವಾ ಇತರೆ ಮಾರ್ಗಗಳ ಮೂಲಕ ಕೊರೊನಾ ಹೊಡೆತದಿಂದ ತತ್ತರಿಸಿದ ರೈತರು, ಕಾರ್ಮಿಕರು ಮತ್ತು ಜನಸಾಮಾನ್ಯರಿಗೆ ಸರಕಾರ ನೆರವು ನೀಡಬೇಕು. 2014ರ ಮಾರ್ಚ್‌ನಲ್ಲಿ ಕಚ್ಚಾ ತೈಲದ ದರ ಬ್ಯಾರೆಲ್‌ಗೆ 108 ಡಾಲರ್‌ ಇತ್ತು. 2020ರ ಮಾರ್ಚ್‌ನಲ್ಲಿ ಕೇವಲ 23 ಡಾಲರ್‌ಗೆ ಇಳಿದಿದೆ. ಈ ಐತಿಹಾಸಿಕ ದರ ಇಳಿಕೆಯ ಲಾಭವನ್ನು ಸರಕಾರವು ಜನರಿಗೂ ಹಂಚಬೇಕು,’’ ಎಂದು ಆಗ್ರಹಿಸಿದ್ದಾರೆ.

ಲಾಕ್‌ಡೌನ್‌ ನಂತರ ಆರ್ಥಿಕತೆಗೆ ಮರುಜೀವ ನೀಡುವುದು ಹೇಗೆ? - ರಘುರಾಮ್‌ ರಾಜನ್ ಸಲಹೆಗಳು

ಡೀಸೆಲ್‌ ಮಾರಾಟ ಶೇ. 24 ಕುಸಿತ

ಲಾಕ್‌ ಡೌನ್‌ ಪರಿಣಾಮ ಮಾರ್ಚ್‌ನಲ್ಲಿ ಪೆಟ್ರೋಲ್‌, ಡೀಸೆಲ್‌ ಮಾರಾಟ ಅನುಕ್ರಮವಾಗಿ ಶೇ. 15.5 ಮತ್ತು ಶೇ. 24ರಷ್ಟು ಕುಸಿದಿದೆ. ಅಲ್ಲದೇ ವಿಮಾನ ಇಂಧನ (ಎಟಿಎಫ್‌) ಮಾರಾಟ ಶೇ. 31.6ರಷ್ಟು ಇಳಿಕೆಯಾಗಿದೆ.

ಕೋವಿಡ್‌-19 ಪರಿಣಾಮ ದೇಶದೆಲ್ಲೆಡೆ ಲಾಕ್‌ಡೌನ್‌ ಜಾರಿಯಲ್ಲಿದೆ. ಅಗತ್ಯ ವಾಹನಗಳಷ್ಟೇ ರಸ್ತೆಯಲ್ಲಿವೆ. ವಿಮಾನ ಸೇವೆಯನ್ನೂ ರದ್ದುಗೊಳಿಸಲಾಗಿದೆ. ಹೀಗಾಗಿ ಪೆಟ್ರೋಲ್‌, ಡೀಸೆಲ್‌ ಮತ್ತು ಎಟಿಎಫ್‌ಗೆ ಬೇಡಿಕೆ ತಗ್ಗಿದೆ.

ಪೆಟ್ರೋಲ್‌, ಡೀಸೆಲ್‌, ಎಟಿಎಫ್‌ಗೆ ಬೇಡಿಕೆ ತಗ್ಗಿದ್ದರೆ, ಅಡುಗೆ ಅನಿಲದ ಸಿಲಿಂಡರ್‌ಗಳ(ಎಲ್‌ಪಿಜಿ) ಮಾರಾಟ ಏರಿಕೆಯಾಗಿದೆ. ಲಾಕ್‌ಡೌನ್‌ನಿಂದ ತೊಂದರೆಯಾಗಬಹುದು ಎನ್ನುವ ಭಯದಿಂದ ಗ್ರಾಹಕರು, ಹೆಚ್ಚುವರಿ ಸಿಲಿಂಡರ್‌ಗಳನ್ನು ಸ್ಟಾಕ್‌ ಮಾಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ