ಆ್ಯಪ್ನಗರ

ಮುಷ್ಕರ, ರಜೆ ಹಿನ್ನೆಲೆ; ನಾಲ್ಕು ದಿನ ಬ್ಯಾಂಕ್‌ ಬಾಗಿಲು ಬಂದ್‌

ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಿಲೀನ ವಿರೋಧಿಸಿ ದೇಶದಾದ್ಯಂತ ಹಲವಾರು ಬ್ಯಾಂಕ್‌ಗಳು ಸೆಪ್ಟೆಂಬರ್‌ 26 ಮತ್ತು 27ರಂದು ಮುಷ್ಕರ ನಡೆಸಲಿವೆ. 4ನೇ ಶನಿವಾರದ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ 28 ಹಾಗೂ 29ರಂದು ಭಾನುವಾರವಾಗಿರುವುದರಿಂದ ಬ್ಯಾಂಕ್‌ಗಳಿಗೆ ರಜೆ ಇರಲಿದೆ.

Vijaya Karnataka Web 14 Sep 2019, 7:03 pm
ಹೊಸದಿಲ್ಲಿ: ಮುಷ್ಕರ, ರಜೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ ಅಂತ್ಯಕ್ಕೆ ನಾಲ್ಕು ದಿನಗಳ ಕಾಲ ಬ್ಯಾಂಕ್‌ಗಳು ಬಾಗಿಲು ತೆರೆಯುವುದಿಲ್ಲ. ಹೀಗಾಗಿ ಹಣಕಾಸು ಸಂಬಂಧಿ ವ್ಯವಹಾರ ನಡೆಸಬೇಕಾಗಿರುವವರು ಎಚ್ಚರ ವಹಿಸುವುದು ಸೂಕ್ತ.
Vijaya Karnataka Web bank close


ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಿಲೀನ ವಿರೋಧಿಸಿ ದೇಶದಾದ್ಯಂತ ಹಲವಾರು ಬ್ಯಾಂಕ್‌ಗಳು ಸೆಪ್ಟೆಂಬರ್‌ 26 ಮತ್ತು 27ರಂದು ಮುಷ್ಕರ ನಡೆಸಲಿವೆ. 4ನೇ ಶನಿವಾರದ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ 28 ಹಾಗೂ 29ರಂದು ಭಾನುವಾರ ಆಗಿರುವುದರಿಂದ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಹೀಗೆ ಒಟ್ಟು ನಾಲ್ಕು ದಿನ ಸರಣಿಯಾಗಿ ಬ್ಯಾಂಕ್‌ಗಳು ತೆರೆಯುವುದಿಲ್ಲ.

ಮುಳುಗೇ ಬಿಟ್ಟವು ಸರ್ಕಾರಿ ಕಂಪನಿ : ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿ ನೌಕರ

10 ಸಾರ್ವಜನಿಕ ರಂಗದ ಬ್ಯಾಂಕ್‌ಗಳ ವಿಲೀನವನ್ನು ಕೇಂದ್ರ ಸರಕಾರ ಘೋಷಿಸಿರುವುದನ್ನು ವಿರೋಧಿಸಿ ನಾಲ್ಕು ಪ್ರಮುಖ ಬ್ಯಾಂಕ್‌ ಯೂನಿಯನ್‌ಗಳು ಸೆಪ್ಟೆಂಬರ್‌ 26 ಮತ್ತು 27 ರಂದು ಬ್ಯಾಂಕ್‌ ಮುಷ್ಕರಕ್ಕೆ ಕರೆ ನೀಡಿವೆ.

ಇದರ ಜೊತೆಗೆ ಸಾಮಾನ್ಯ ರಜೆಗಳೂ ಸೇರಿಕೊಳ್ಳಲಿದ್ದು ಬ್ಯಾಂಕ್‌ಗಳು ನಾಲ್ಕು ದಿನ ಬಾಗಿಲು ತೆರೆಯುವುದಿಲ್ಲ. ಇದರಿಂದ ತಿಂಗಳಾಂತ್ಯದಲ್ಲಿ ಬ್ಯಾಂಕಿಂಗ್‌ ವ್ಯವಹಾರಗಳಲ್ಲಿ ದೊಡ್ಡ ಮಟ್ಟದ ಅಡಚಣೆಯಾಗುವ ಸಾಧ್ಯತೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ